Posts Slider

Karnataka Voice

Latest Kannada News

ಧಾರವಾಡ-ಸವದತ್ತಿ ರಸ್ತೆ ಬಂದ್: ತುಂಬಿ ಹರಿಯುತ್ತಿರುವ ಹಳ್ಳ

1 min read
Spread the love

ಧಾರವಾಡ: ನಿರಂತರವಾಗಿ ಮಳೆ ಆರಂಭವಾದ ಪರಿಣಾಮ ಶ್ರೀ ಕ್ಷೇತ್ರ ರೇಣುಕಾದೇವಿಗೆ ಸವದತ್ತಿ ಮೂಲಕ ಹೋಗುವವರು ಹಾರೋಬೆಳವಡಿ ಹತ್ತಿರ ಮತ್ತೆ ರಸ್ತೆ ಬಂದ್ ಆಗಿರುವುದನ್ನ ಗಮನದಲ್ಲಿಟ್ಟುಕೊಂಡು ಪ್ರಯಾಣ ಆರಂಭಿಸಿ.

ವಾರದಲ್ಲಿ ಎರಡ್ಮೂರು ದಿನಗಳವರೆಗೆ ನೀರಿನ ರಭಸ ಹೆಚ್ಚಾಗುತ್ತಿದ್ದು, ಪದೇ ಪದೇ ರಸ್ತೆ ಸಂಚಾರ ಸ್ಥಗಿತಗೊಳ್ಳುತ್ತಿದೆ. ಕೆಲವೊತ್ತು ಮಳೆ ಕಡಿಮೆಯಾದ ತಕ್ಷಣವೇ ಮಣ್ಣು ಹಾಕಿ ರಸ್ತೆ ಸುಧಾರಣೆ ಮಾಡಲಾಗುತ್ತಿದೆಯಾದರೂ, ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿರತ್ತೆ.

ಇಂದು ಮಧ್ಯಾಹ್ನದಿಂದ ಮಳೆ ಆರಂಭವಾಗಿದ್ದರಿಂದ ಹಾರೋಬೆಳವಡಿ ಬಳಿಯ ಸೇತುವೆ ಪಕ್ಕದಲ್ಲಿ ನಿರ್ಮಾಣಗೊಂಡಿರುವ ರಸ್ತೆಯ ಮೇಲೆ ನೀರು ಹರಿದುಕೊಂಡು ಹೋಗುತ್ತಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಧಾರವಾಡದಿಂದ ಸವದತ್ತಿಗೆ ಹೋಗುವವರು ಬೇರೆ ಮಾರ್ಗವನ್ನ ಕಂಡುಕೊಳ್ಳುವುದು ಒಳಿತು. ಇಲ್ಲದಿದ್ದರೇ ಹಳ್ಳ ತೆರವು ಆಗುವವರೆಗೂ ಅಲ್ಲಿಯೇ ನಿಲ್ಲಬೇಕಾಗತ್ತೆ.


Spread the love

Leave a Reply

Your email address will not be published. Required fields are marked *