Posts Slider

Karnataka Voice

Latest Kannada News

ಮೇ 30ರಂದು ಧಾರವಾಡ ಬಂದ್: ಕಾವೇರಿದ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ…

Spread the love

ಧಾರವಾಡ: ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಶಿಫಾರಸ್ಸಿಗೆ ಅನುಮೋದನೆ ನೀಡುವಂತೆ ಆಗ್ರಹಿಸಿ ಮೇ. 30 ರಂದು ಧಾರವಾಡ ಬಂದ್ ಮಾಡಲಾಗುವುದು ಎಂದು ಹಿರಿಯ ನ್ಯಾಯವಾದಿ ಬಿ.ಡಿ ಹಿರೇಮಠ ತಿಳಿಸಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಅಡ್ಡಗಾಲು ಹಾಕುತ್ತಿರುವುದು ಸರಿಯಲ್ಲ, ಈ ಕುರಿತು ಈಗಾಗಲೇ ಹೋರಾಟಗಾರರ ನಿಯೋಗ ಭೇಟಿ ಮಾಡಿ ಮಾತುಕತೆ ನಡೆಸಿದರೂ ಇನ್ನೂ ಕಾನೂನು ಸಲಹೆ ಪಡೆಯುವ ಮಾತು ಹೇಳಿದ್ದಾರೆ. ನಮ್ಮ ಹೋರಾಟ ನಿಲ್ಲುವುದಿಲ್ಲ, ಈಗ ಸರಣಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಮುಂದೆ ಮೇ 30 ರಂದು ಧಾರವಾಡ ಬಂದ್ ಕರೆ ನೀಡಲಾಗುವುದು. ಅದಕ್ಕೂ ರಾಜ್ಯಪಾಲರು ಸ್ಪಂದಿಸದೇ ಇದ್ದರೇ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಾದೇವ ಹೋರಟ್ಟಿ, ಮೋಹನ್ ಲಿಂಬಿಕಾಯಿ, ಮನೋಜ ಪಾಟೀಲ, ಗುರುರಾಜ ಹುಣಸಿಮರದ, ಶಿವಶಂಕರಪ್ಪ ಹಂಪ್ಪಣ್ಣವರ, ವೆಂಕಟೇಶ ಮಾಚಕನೂರ, ವಿಠ್ಠಲ ಕಮ್ಮಾರ, ಕವಿತಾ ಕಬ್ಬೇರ, ದೀಪಾ ನೀರಲಕಟ್ಟಿ ಇದ್ದರು.


Spread the love

Leave a Reply

Your email address will not be published. Required fields are marked *