Category: ಹುಬ್ಬಳ್ಳಿ- ಧಾರವಾಡ

  • ಹೊನ್ನಾವರ ಬೀಚ್‌ನಲ್ಲಿ ಪ್ರಾಣಕ್ಕೆ ಸಂಚಕಾರ- ಹುಬ್ಬಳ್ಳಿಯ ಮೂವರು ಯುವತಿಯರು ಬಚಾವ್….!!!

    ಹೊನ್ನಾವರ ಬೀಚ್‌ನಲ್ಲಿ ಪ್ರಾಣಕ್ಕೆ ಸಂಚಕಾರ- ಹುಬ್ಬಳ್ಳಿಯ ಮೂವರು ಯುವತಿಯರು ಬಚಾವ್….!!!

    ಹೊನ್ನಾವರ: ತಾಲೂಕಿನ ಇಕೋ ಬೀಚ್ ಸಮುದ್ರದಲ್ಲಿ ಈಜಲು ಹೋಗಿ ಸಮುದ್ರ ಅಲೆಗೆ ಸಿಲುಕಿ ಅಪಾಯಕ್ಕೆ ಸಿಲುಕ್ಕಿದ್ದ ಹುಬ್ಬಳ್ಳಿ ಮೂಲದ ಮೂವರು ಪ್ರವಾಸಿಗರನ್ನ ಲೈಪ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ನಡೆದಿದೆ.

    ಹುಬ್ಬಳ್ಳಿಯಿಂದ ಐವರು ಸ್ನೇಹಿತರು ಸೇರಿಕೊಂಡು ಹೊನ್ನಾವರ ಇಕೋ ಬೀಚ್‌ಗೆ ಪ್ರವಾಸಕ್ಕೆಂದು ಬಂದಿದ್ದು, ಈ ವೇಳೆ‌ ಸಮುದ್ರದಲ್ಲಿ ಈಜಲು ಹೋಗಿದ್ದ ವೇಳೆ ಸ್ವಾತಿ (24), ಚೈತಾಲಿ (21), ಸೃಷ್ಟಿ (20) ಎಂಬುವವರು ಅಪಾಯಕ್ಕೆ ಸಿಲುಕಿದ್ದರು.‌ ಅಪಾಯದಲ್ಲಿರುವುದನ್ನ ಗಮನಿದ ಅಲ್ಲೆ‌ ಇದ್ದ‌ ಲೈಪ್ ಗಾರ್ಡ್ ಸಿಬ್ಬಂದಿಗಳಾದ ಶಶಾಂಕ ಅಂಬಿಗ, ಮಹೇಶ್ ಹರಿಕಂತ್ರ, ಯೋಗೇಶ್ ಅಂಬಿಗ ಮೂವರನ್ನ ರಕ್ಷಣೆ ಮಾಡಿದ್ದಾರೆ.

  • ಇಬ್ಬರು “ಮಾಜಿ ಸಿಎಂ ಪುತ್ರ”ರಿಗೆ ಮನೆ ದಾರಿ ತೋರಿಸಿದ “ಪಠಾಣ-ಯೋಗೇಶ್ವರ”…!!!

    ಇಬ್ಬರು “ಮಾಜಿ ಸಿಎಂ ಪುತ್ರ”ರಿಗೆ ಮನೆ ದಾರಿ ತೋರಿಸಿದ “ಪಠಾಣ-ಯೋಗೇಶ್ವರ”…!!!

    ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನ ಸೋಲಿಸಿದ ಹಳೇಯ ರಾಜಕೀಯ ಫಂಟರ್‌ಗಳು

    ಬೆಂಗಳೂರು: ರಾಜ್ಯದ ಉಪಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಎರಡು ಪ್ರಮುಖ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ಮಾಜಿ ಮುಖ್ಯಮಂತ್ರಿ ಹಾಗೂ ಜಾತ್ಯಾತೀತ ಜನತಾದಳದ ಮಾಜಿ ಮುಖ್ಯಮಂತ್ರಿ ಅವರ ಪುತ್ರರನ್ನ ಸೋಲಿಸುವಲ್ಲಿ ಮತದಾರ ಮುಂದಾಗಿದ್ದು, ಫಲಿತಾಂಶದಲ್ಲಿ ಗೋಚರವಾಗಿದೆ.

    ಚೆನ್ನಪಟ್ಟಣದಲ್ಲಿ ಮೂರನೇಯ ಬಾರಿ ಅದೃಷ್ಟದ ಪರೀಕ್ಷೆಗೆ ಇಳಿದಿದ್ದ ನಿಖಿಲ್ ಕುಮಾರಸ್ವಾಮಿ 20 ಸಾವಿರ ಮತಗಳ ಹಿನ್ನಡೆಯಿಂದ ಸೋಲುವುದು ಖಚಿತವಾಗಿದೆ.

    ಶಿಗ್ಗಾಂವ ಕ್ಷೇತ್ರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ ಬೊಮ್ಮಾಯಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸೋಲು ಅನುಭವಿಸುತ್ತಿದ್ದಾರೆ.

  • ಧಾರವಾಡ: “ಕಂಬಳಿ”ಯ ಚಳಿ ಬಿಡಿಸಿದ ಸಚಿವ ಸಂತೋಷ ಲಾಡ್… Exclusive Video

    ಧಾರವಾಡ: “ಕಂಬಳಿ”ಯ ಚಳಿ ಬಿಡಿಸಿದ ಸಚಿವ ಸಂತೋಷ ಲಾಡ್… Exclusive Video

    ಧಾರವಾಡ: ಅಳ್ನಾವರ ಪಟ್ಟಣದಲ್ಲಿ ಭಾಗವಹಿಸಿದ್ದ ಸಚಿವ ಸಂತೋಷ ಲಾಡ್ ಅವರನ್ನ ‘ಕಾಂಗ್ರೆಸ್’ ಹೆಸರಿನಲ್ಲಿ ಕೆಣಕಿದ ರವಿ ಕಂಬಳಿ ಎಂಬುವವರನ್ನ ಸ್ಥಳದಲ್ಲಿಯೇ ಚಳಿ ಬಿಡಿಸಿದ ಘಟನೆ ನಡೆದಿದೆ.

    ಇಲ್ಲಿರೋ ಪೂರ್ಣ ವೀಡಿಯೋ ನೋಡಿ….

    ರೈತರ ಸಾಲವನ್ನ ಮನ್ನಾ ಮಾಡಬೇಕು ಎಂದು ಮನವಿ ಮಾಡಿಕೊಳ್ಳಲು ಬಂದಿದ್ದ ಕುರುಬ ಸಮಾಜದ ಕಂಬಳಿಯವರು, ಸರಕಾರದ ಸಚಿವರನ್ನ ಮಾತನಾಡಿಸದೇ “ಕಾಂಗ್ರೆಸ್” ಹೆಸರು ತಂದು ಮಾತನಾಡಿದ್ದರಿಂದ ಸಚಿವ ಸಂತೋಷ ಲಾಡ್ ಅವರು, ಕಾಂಗ್ರೆಸ್ ಮಾಡಿದ ಕಾರ್ಯವನ್ನ ಹೇಳಿ, ಕಂಬಳಿಯವರಿಗೂ ಹೇಳಿ ಎಂದರು.

    ಇಬ್ಬರ ನಡುವಿನ ಮಾತುಕತೆಯಲ್ಲಿ ಸ್ಥಳೀಯರು ಮೂಕ ಪ್ರೇಕ್ಷಕರಾಗಿದ್ದು ಕಂಡು ಬಂದಿತು.

  • ಧಾರವಾಡದ ಬೈಪಾಸ್‌ನಲ್ಲಿ ಹೊತ್ತಿ ಉರಿಯುತ್ತಿದೆ ಕ್ಯಾಂಟರ್- Exclusive Video…

    ಧಾರವಾಡದ ಬೈಪಾಸ್‌ನಲ್ಲಿ ಹೊತ್ತಿ ಉರಿಯುತ್ತಿದೆ ಕ್ಯಾಂಟರ್- Exclusive Video…

    ಧಾರವಾಡ: ವಾಣಿಜ್ಯನಗರಿಂದ ಕುಂದಾನಗರಿಯತ್ತ ಹೊರಟಿದ್ದ ಕ್ಯಾಂಟರ್ ವಾಹನವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಹೋಗುತ್ತಿರುವ ಘಟನೆ ಡೈರಿಯ ಸಮೀಪದಲ್ಲಿ ಸಂಭವಿಸಿದೆ.

    ಹತ್ತಿ ಬೀಜವನ್ನ ಸಾಗಾಟ ಮಾಡುತ್ತಿದ್ದ ವಾಹನದಲ್ಲಿ ಬೆಂಕಿ ತಗುಲಿದೆ. ಕ್ಲೀನರ್ ಮತ್ತು ಚಾಲಕ ಕೆಳಗಿಳಿದು ಪ್ರಾಣವುಳಿಸಿಕೊಂಡಿದ್ದಾರೆ.

    ವೀಡಿಯೋ ಇಲ್ಲಿದೆ ನೋಡಿ…

    ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ, ಬೆಂಕಿ ನಂದಿಸಲು ಯತ್ನಿಸುತ್ತಿದ್ದಾರೆ.

  • “ನಾಯಿ” ಮತ್ತೂ ‘ಸರಕಾರಿ ನೌಕರ’- ಧಾರವಾಡದ ಡಿಸಿ ಮೇಡಂ “ಹಿಂಗ್ಯಾಕಂದ್ರು” ಗೊತ್ತಾ…!? Exclusive Video

    “ನಾಯಿ” ಮತ್ತೂ ‘ಸರಕಾರಿ ನೌಕರ’- ಧಾರವಾಡದ ಡಿಸಿ ಮೇಡಂ “ಹಿಂಗ್ಯಾಕಂದ್ರು” ಗೊತ್ತಾ…!? Exclusive Video

    ಅಧಿಕಾರಿಗಳಿಗಳಿಗೆ ನಿಯತ್ತಿನ ನೀತಿಪಾಠ ಹೇಳಿದ ಜಿಲ್ಲಾಧಿಕಾರಿ ದಿವ್ಯಪ್ರಭು

    ಉಪಲೋಕಾಯುಕ್ಯರ ಅಹವಾಲು ಸಭೆಯಲ್ಲಿ ಅಧ್ಯಕ್ಷೀಯ ಭಾಷಣ

    ಧಾರವಾಡ: ನಾಯಿಯ ಕತೆಯೊಂದನ್ನು ಹೇಳಿ ಸರಕಾರಿ ಅಧಿಕಾರಿಗಳಿಗೆ ಡಿಸಿ ದಿವ್ಯ ಪ್ರಭು ಅವರು, ನಿಯತ್ತಿನ ಬಗ್ಗೆ ಪಾಠ ಮಾಡಿದ ಮೂಲಕ ಇವತ್ತಿನ ಅವಶ್ಯಕತೆಯನ್ನ ಹೇಳಿದರು.

    ಇಲ್ಲಿರೋ ವೀಡಿಯೋವನ್ನ ಪೂರ್ಣವಾಗಿ ನೋಡಿದರೇ, ನಾಯಿಯ ಬಗ್ಗೆ ಗೊತ್ತಾಗತ್ತೆ..

    ನಿಯತ್ತಿನ ನಾಯಿ ಹೇಗೆ ಕೆಲಸ ಮಾಡಬೇಕೋ ಹಾಗೆ ಅಧಿಕಾರಿಗಳು ಕೆಲಸ ಮಾಡಬೇಕು ಎಂಬ ಅರ್ಥದಲ್ಲಿ ಹೇಳಿದ ಡಿಸಿಯವರು, ನಾಯಿ ಎಷ್ಟೇ ನಿಯತ್ತಿನಿಂದ ಇದ್ದರೂ ಮಾಲೀಕರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ಒಂದೇ ಒಂದು ಸಣ್ಣ ತಪ್ಪು ಮಾಡಿದ್ರು ಸಹಿಸೋದಿಲ್ಲ. ಹಾಗೆಯೇ ನಾವು ಅಧಿಕಾರಿಗಳು, ನಮ್ಮ ಸಂಬಳಕ್ಕೆ ತಕ್ಕಂತೆ ನಿಯತ್ತಿನಿಂದ ಕೆಲಸ ಮಾಡುತ್ತೇವೆ. ಜನಸಾಮಾನ್ಯರ ವಿಚಾರಗಳು ಏನು ಇದೆ ಎಂದು ತಿಳಿದುಕ್ಕೊಳ್ಳಬೇಕು ಎಂದರು.

    ಜನಪರ ಸ್ಕಿಮ್‌ಗಳನ್ನ ನಾವು ಹೇಗೆ ಇಂಪ್ಲಿಮೇಂಟ್ ಮಾಡಬೇಕು ಅನ್ನೋದನ್ನ ಕಲಿಯಬೇಕು. ನಮಗೆ ದೊಡ್ಡ ದೊಡ್ಡ ಜವಾಬ್ದಾರಿಯನ್ನ ಕೊಟ್ಟಿದ್ದಾರೆ. ನಿಷ್ಠೆಯಿಂದ, ಜವಾಬ್ದಾರಿಯಿಂದ ಕೆಲಸವನ್ನ ಮಾಡಬೇಕು. ಸರಕಾರದ ಸ್ಕೀಂಗಳನ್ನ ನಾವು ಕಟ್ಟಕಡೆಯ ಗ್ರಾಮದ ಜನರಿಗೆ ಮುಟ್ಟುವ ಹಾಗೆ ಮಾಡಬೇಕು. ಅದಕ್ಕೆ‌ ನಾವು ಜನರ ಸೇವೆಯನ್ನ ನಾವು ಮಾಡಬೇಕು ಎಂದರು.

    ಸರಕಾರ ಸಾಕಷ್ಟು ಸವಲತ್ತುಗಳನ್ನ ನಮಗೆ ಕೊಟ್ಟಿದೆ. ಅದಕ್ಕೆ‌, ನಾವು ಜನರ ಸೇವೆಯನ್ನ ನೀಟಾಗಿ ಮಾಡಬೇಕು. ನಮ್ಮ ಮಾಲೀಕರಾದ ಜನರ ನೀರೀಕ್ಷೆಯಂತೆ ಇರಬೇಕೆಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ನೀತಿ ಪಾಠ ಮಾಡಿದರು.

  • ಕೆಲಗೇರಿ ಕೆರೆ ಅಭಿವೃದ್ಧಿ ಮಾಡದ ಹಿನ್ನೆಲೆ “ಉಪಲೋಕಾಯುಕ್ತರಿಂದ ಸ್ವಮೋಟೊ ಪ್ರಕರಣ” ದಾಖಲು… ‘FIR’ ಯಾರ ಮೇಲೆ…!?

    ಕೆಲಗೇರಿ ಕೆರೆ ಅಭಿವೃದ್ಧಿ ಮಾಡದ ಹಿನ್ನೆಲೆ “ಉಪಲೋಕಾಯುಕ್ತರಿಂದ ಸ್ವಮೋಟೊ ಪ್ರಕರಣ” ದಾಖಲು… ‘FIR’ ಯಾರ ಮೇಲೆ…!?

    ಧಾರವಾಡ: ನಗರದ ಪ್ರಮುಖ ಕೆಲಗೇರಿ ಕೆರೆಯ ಪ್ರಮುಖ ಸಮಸ್ಯೆ ಬಗೆಹರಿಸದವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಲಾಗುವುದೆಂದು ಉಪಲೋಕಾಯುಕ್ತರಾದ ಕೆ.ಎನ್.ಫಣಿಂದ್ರ ಅವರು ತಿಳಿಸಿದರು.

    ಬೆಳಿಗ್ಗೆ ಕೆಲಗೇರಿ ಕೆರೆಯ ದೂರಿನ ಹಿನ್ನೆಲೆ ಭೇಟಿ ನೀಡಿದ ರಾಜ್ಯದ ಉಪಲೋಕಾಯುಕ್ತರು, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿಯವರ ಉಪಸ್ಥಿತಿಯಲ್ಲಿ ದೂರು ದಾಖಲು ಮಾಡಿಕೊಳ್ಳುವ ಕುರಿತು ಹೇಳಿದರು.

    ಎಕ್ಸಕ್ಲೂಸಿವ್ ವೀಡಿಯೋ…

    20 ದಿನದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆಯನ್ನ ನೀಡಿರುವ ಬಗ್ಗೆಯೂ ಉಪಲೋಕಾಯುಕ್ತರು ತಿಳಿಸಿದರು. ಕೆರೆಯನ್ನ ಸರಿಯಾಗಿ ನೋಡಿಕೊಳ್ಳದ ಯಾರ‌್ಯಾರ ಮೇಲೆ ಪ್ರಕರಣ ದಾಖಲಾಗತ್ತೋ ಕಾದು ನೋಡಬೇಕಿದೆ.

  • ಧಾರವಾಡ: ಗಂಡನಿಗುಟ್ಟಿದ್ದ 6ಮಕ್ಕಳನ್ನ “ಮಿಂ..”ರ ಜೊತೆಗೂಡಿ ಅಪಹರಣ- ಪೈಲ್ವಾನ, ಆಂಟಿಗಳು ಸೇರಿ “ಚಾರ್ ಅರೆಸ್ಟ್”….

    ಧಾರವಾಡ: ಗಂಡನಿಗುಟ್ಟಿದ್ದ 6ಮಕ್ಕಳನ್ನ “ಮಿಂ..”ರ ಜೊತೆಗೂಡಿ ಅಪಹರಣ- ಪೈಲ್ವಾನ, ಆಂಟಿಗಳು ಸೇರಿ “ಚಾರ್ ಅರೆಸ್ಟ್”….

    ಹಣಕ್ಕಾಗಿ ಲವ್ವರ್’ಗಳ ಜೊತೆ ಸೇರಿ ಹೆತ್ತ ಮಕ್ಕಳನ್ನೇ ಕಿಡ್ನ್ಯಾಪ್ ಮಾಡಿದ ತಾಯಂದಿರು; ತಾಯಂದಿರ ಜೊತೆ ಲವ್ವರ್’ಗಳನ್ನು ಜೈಲಿಗೆ ಅಟ್ಟಿದ ಪೊಲೀಸರು

    ಹುಬ್ಬಳ್ಳಿ: ವಿದ್ಯಾನಗರಿ ಎಂಬ ಹೆಗ್ಗಳಿಕೆಯನ್ನು ಹೊತ್ತ ಧಾರವಾಡದಲ್ಲಿ ಹೆತ್ತ ಮಕ್ಕಳನ್ನೇ ಪ್ರಿಯಕರರ ಜೊತೆ ಸೇರಿ ಕಿಡ್ನ್ಯಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಇಬ್ಬರು ತಾಯಂದಿರು ಸೇರಿ ಅವರ ಪ್ರಿಯಕರರನ್ನು ಹು-ಧಾ ಪೊಲೀಸರು ಕಾರ್ಯಚರಣೆಯನ್ನು ನಡೆಸಿ ಮಕ್ಕಳನ್ನು ರಕ್ಷಣೆ ಮಾಡಿ ಕಿಡ್ನ್ಯಾಪ್ ಮಾಡಿದ ನಾಲ್ವರನ್ನು ಜೈಲಿಗೆ ಅಟ್ಟುವಲ್ಲಿ ಸಕ್ಸಸ್ ಆಗಿದ್ದಾರೆ.

    ಎಕ್ಸಕ್ಲೂಸಿವ್ ವೀಡಿಯೋ…

    ಧಾರವಾಡದಲ್ಲಿ ನವೆಂಬರ್ 7 ರಂದು ದಿನಗಳ ವಿದ್ಯಾಗಿರಿ ಪೋಲಿಸ್ ಠಾಣೆಯಲ್ಲಿ 6 ಮಕ್ಕಳು ಮಿಸ್ಸಿಂಗ್ ಆಗಿದ್ದಾರೆ ಎಂಬ ಪ್ರಕರಣ ದಾಖಲಾಗಿತ್ತು ಈ ಮಿಸ್ಸಿಂಗ್ ಪ್ರಕರಣ ಬೆನ್ನುಹತ್ತಿದ ವಿದ್ಯಾಗಿರಿ ಠಾಣೆಯ ಇನ್ಸ್ಪೆಕ್ಟರ್ ಸಂಗಮೇಶ ದಿಂಡಿಗನಾಳ ಹಾಗೂ ಧಾರವಾಡ ಶಹರ ಠಾಣೆಯ ಇನ್ಸ್ಪೆಕ್ಟರ್ ನಾಗೇಶ್ ಕಾಡದೇವರಮಠ ಕಾರ್ಯಾಚರಣೆ ನಡೆಸಲು ಫೀಲ್ಡ್’ಗೆ ಇಳಿದಾಗ ಮಕ್ಕಳು ಹಾಗೂ ಆರೋಪಿಗಳು ಬೆಂಗಳೂರಿನಲ್ಲಿ ಇರುವ ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ಮುಂದಾಗಿರುತ್ತಾರೆ.

    ಆಗ್ಲೇ ಐನಾತಿ ತಾಯಂದಿರು ತಮ್ಮ ಪ್ರಿಯಕರರ ಜೊತೆ ಸೇರಿಕೊಂಡು ತಮ್ಮ ಗಂಡನ ಮನೆಯವರಿಗೆ ನಿಮ್ಮ ಮನೆಯ ಮಕ್ಕಳು ಬೇಕು ಅಂದ್ರೆ 10 ಲಕ್ಷ ಹಣವನ್ನು ಕೊಡಿ ಇಲ್ಲವಾದ್ರೆ ನಿಮ್ಮ ಮಕ್ಕಳನ್ನು ನಾವು ಬೇರೆ ಕಡೆಗೆ ಕರದುಶಶಿಕುಮಾರ್ಗ್ತೀ ವಿ ಅಂತಾ ಫೋನ್ ನಲ್ಲಿ ಧಮ್ಕಿ ಹಾಕುತ್ತಾರೆ.ಅಷ್ಟರಾಗಲೇ ಪೊಲೀಸರು ಲವ್ವರ್’ಗಳ ಜೊತೆ ಸೇರಿ ಮಕ್ಕಳನ್ನು ಕಿಡ್ನ್ಯಾಪ್ ಮಾಡಿದ್ದ ತಾಯಂದಿರನ್ನು ಬಂಧನ ಮಾಡಿ ಧಾರವಾಡಕ್ಕೆ ಕರೆ ತಂದಿದ್ದಾರೆ. ಸದ್ಯ ಈ ಐನಾತಿಗಳ ಬಗ್ಗೆ ಕಮೀಷನರ್ ಎನ್.ಶಶಿಕುಮಾರ್ ವಿವರಿಸಿದರು.

    ಈ ಪೈಕಿ ರೇಶ್ಮಾ ತನ್ನ ಹಳೆಯ ಲವ್ವರ್ ಜೊತೆ ಪ್ರಿಯಾಂಕಾ ತನ್ನ ಗಂಡ ತೀರಿಕೊಂಡ ನಂತರ ಇನ್ನೊಬ್ಬನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ನಾಲ್ವರು ಸೇರಿಕೊಂಡು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ ನಂತರ ಹಣ ಸಿಕ್ಕರೆ ಆ ಹಣವನ್ನು ತೆಗೆದುಕೊಂಡು, ಮಕ್ಕಳನ್ನು ಬಿಟ್ಟು ಬೇರೆ ರಾಜ್ಯಕ್ಕೆ ಹೋಗುವ ಪ್ಲ್ಯಾನ್ ಮಾಡಿದ್ದರು ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.ಸದ್ಯ ಮಕ್ಕಳನ್ನು ಸುರಕ್ಷಿತವಾಗಿ ತಂದು ಪೋಷಕರ ಮಡಿಲಿಗೆ ಒಪ್ಪಿಸಿದ ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ಧನ್ಯವಾದಗಳನ್ನು ಮಕ್ಕಳ ತಂದೆ ದೀಪಕ ತಿಳಿಸಿದರು.

    ಒಟ್ಟಿನಲ್ಲಿ ತಮ್ಮ ಚಪಲಕ್ಕಾಗಿ ಹೆತ್ತ ಮಕ್ಕಳನ್ನೇ ಕಿಡ್ನ್ಯಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟ ತಾಯಂದಿರು ಹಾಗೂ ಮತ್ತು ಲವ್ವರ್’ಗಳನ್ನು ಪೊಲೀಸರು ಜೈಲಿಗೆ ಅಟ್ಟಿದರೆ, ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಮಕ್ಕಳು ಸುರಕ್ಷಿತವಾಗಿ ತಂದೆಯ ಮಡಿಲನ್ನು ಸೇರಿಸಿದ ಪೊಲೀಸರ ಕಾರ್ಯ ಮೆಚ್ಚುವಂತದ್ದು.

  • ಶೀಘ್ರದಲ್ಲಿ ಮೂಲೆಗೆ ಸೇರಲಿದೆ “ಬಿಆರ್‌ಟಿಎಸ್”- ಸಚಿವ ಸಂತೋಷ ಲಾಡ್ ‘ಮಾಸ್ಟರ್ ಪ್ಲಾನ್’…!!!

    ಶೀಘ್ರದಲ್ಲಿ ಮೂಲೆಗೆ ಸೇರಲಿದೆ “ಬಿಆರ್‌ಟಿಎಸ್”- ಸಚಿವ ಸಂತೋಷ ಲಾಡ್ ‘ಮಾಸ್ಟರ್ ಪ್ಲಾನ್’…!!!

    ಧಾರವಾಡ: ಸಾರ್ವಜನಿಕರ ತೀವ್ರ ಆಕ್ಷೇಪಣೆಗೆ ಕಾರಣವಾಗಿರುವ ಬಿಆರ್‌ಟಿಎಸ್ (Bus Rapid Transit System) ಹುಬ್ಬಳ್ಳಿ ಧಾರವಾಡದಲ್ಲಿ ಇತಿಹಾಸ ಸೇರುವುದು ಫಿಕ್ಸ್ ಆಗಿದ್ದು, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಇದೇ ವರ್ಷದಲ್ಲಿ ಮುಹೂರ್ತ ಹುಡುಕುವುದು ಶತಃಸಿದ್ಧ ಎಂದು ಗೊತ್ತಾಗಿದೆ.

    ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದ ಸಮಯದಲ್ಲಿ ಅವಳಿನಗರದ ನಡುವೆ ಅಹ್ಮದಾಬಾದ್‌ನಲ್ಲಿ ಆರಂಭಗೊಂಡಿದ್ದ ಬಿಆರ್‌ಟಿಎಸ್ ವ್ಯವಸ್ಥೆಯನ್ನ ಜಾರಿಗೆ ತರಲಾಗಿತ್ತು. ಅವೈಜ್ಞಾನಿಕ ವಿಧಾನಗಳನ್ನ ಅನುಸರಿಸಿದ ಪರಿಣಾಮ ವಾಹನ ಸವಾರರು ಪ್ರತಿ ದಿನವೂ ಸಂಕಷ್ಟ ಎದುರಿಸುತ್ತಿದೆ.

    ಬಿಆರ್‌ಟಿಎಸ್ ಮಾರ್ಗದಲ್ಲಿ ಚಿಗರಿ ಬಸ್‌ಗಳಷ್ಟೇ ಸಂಚಾರ ಮಾಡುವ ವ್ಯವಸ್ಥೆ ಹೊಂದಿದ್ದರಿಂದ ಅವಳಿನಗರದ ಹಲವು ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ದಿನವೂ ಹೆಚ್ಚಾಗುತ್ತಿದೆ. ಇದರಿಂದ ವಾಹನ ಹೊಂದಿದವರು ಹಿಡಿಶಾಪ ಹಾಕುತ್ತಿರುತ್ತಾರೆ.

    ಚಿಗರಿ ಬಸ್‌ನಿಂದ ಹಲವರ ಪ್ರಾಣಗಳು ಹೋಗಿದ್ದು, ಕುಟುಂಬಗಳು ಈಗಲೂ ಕಣ್ಣೀರಿಡುತ್ತಿವೆ. ಹೀಗಾಗಿಯೇ ‘ಬ್ಯಾನ್ ಬಿಆರ್‌ಟಿಎಸ್’ ಕೂಗು ಹಲವು ಬಾರಿ ಕೇಳಿ ಬರುತ್ತಲೇ ಇರತ್ತೆ. ಹೋರಾಟಗಳು ಆಗಾಗ ನಡೆಯುತ್ತಿವೆ.

    ಈ ಎಲ್ಲ ಸಮಸ್ಯೆಗಳನ್ನ ಅರಿತಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಜನರ ಆಶೋತ್ತರಗಳಿಗೆ ಅತ್ಯುತ್ತಮ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾದ ಜೊತೆಗೆ ಸಂಪರ್ಕ ಸಾಧಿಸಿ, ಅಲ್ಲಿನ ರಸ್ತೆ ಸಂಚಾರದ ರೂಪವನ್ನ ಅವಳಿನಗರದ ಜನರಿಗಾಗಿ ಆರಂಭಿಸಲಿದ್ದಾರೆ ಎಂಬ ಖಚಿತ ಮಾಹಿತಿ ಲಭಿಸಿದೆ.

    ಈ ವ್ಯವಸ್ಥೆ ಜಾರಿಗೆ ಬಂದರೇ, ವಾಹನ ದಟ್ಟನೆ ಮೂವತ್ತು ವರ್ಷದ ನಂತರವೂ ಬರುವ ಸಾಧ್ಯತೆಯಿಲ್ಲ. ಅಷ್ಟೇ ಅಲ್ಲ, ಈಗ ಬಿಆರ್‌ಟಿಎಸ್‌ನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಐದು ಪಟ್ಟಾದರೂ, ಯಾವುದೇ ತೊಂದರೆ ಆಗಲಾರದು ಎಂದು ಹೇಳಲಾಗಿದೆ.

    ಅವಳಿನಗರದ ಬಹುದಿನದ “ಪೀಕಲಾಟ”ವನ್ನ ಕೊನೆಗಾಣಿಸಲು ಸಚಿವ ಸಂತೋಷ ಲಾಡ್ ಅವರು ಭರವಸೆಯ ಬೆಳಕಾಗಿದ್ದಾರೆ.

  • ನೀವು ಹುಬ್ಬಳ್ಳಿ-ಧಾರವಾಡದಲ್ಲಿದ್ದು ‘ಈ ಊರು’ಗಳನ್ನ ಇಷ್ಟ ಪಡ್ತಿದ್ದರೇ ನೀವೂ ಈ ಸ್ಟೋರಿ ನೋಡಲೇಬೇಕು…!!!

    ನೀವು ಹುಬ್ಬಳ್ಳಿ-ಧಾರವಾಡದಲ್ಲಿದ್ದು ‘ಈ ಊರು’ಗಳನ್ನ ಇಷ್ಟ ಪಡ್ತಿದ್ದರೇ ನೀವೂ ಈ ಸ್ಟೋರಿ ನೋಡಲೇಬೇಕು…!!!

    ಹುಬ್ಬಳ್ಳಿ/ಧಾರವಾಡ: ಅವಳಿನಗರವೆಂಬ ಈ ಎರಡು ನಗರಗಳಲ್ಲಿ ನೀವೂ ಪ್ರತಿದಿನವೂ ಮಿಂದೆದ್ದು ಜೀವನ ಕಟ್ಟಿಕೊಳ್ಳಲು ಮುಂದಾಗುತ್ತಿದ್ದೀರಿ ಅಲ್ವಾ. ಆದರೆ, ಈ ಎರಡು ನಗರಗಳ ಸ್ಥಿತಿ ಅದೇಲ್ಲಿಗೆ ಬಂದು ನಿಂತಿದೆ ಎಂಬುದನ್ನ ಇನ್ಯಾರು ನೋಡಬೇಕು, ಹೇಳಿ.

    ವಾಣಿಜ್ಯನಗರಿಯೂ, ಛೋಟಾ ಮುಂಬೈ ಮತ್ತು ಕಾಮರ್ಸ್ ನಗರ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿ ಹುಡ್ದಿಯಾಗಿ ವರ್ಷಗಳೇ ಕಳೆಯುತ್ತ ಬಂದಿದೆ. ಯಾವ ರಸ್ತೆಗೆ ಹೋದರೂ, ಅದೇ ಹಣೆಬರಹ. ಎಲ್ಲಿಯೂ “ಮುಕ್ತಾಯ” ಕಾಣದ ಕಾಮಗಾರಿಗಳು.

    ಹೊರಡುವ ವಾಹನದ ಹೊಗೆ, ನಿಲ್ಲಲ್ಲು ಜಾಗವಿಲ್ಲದ ಪುಟ್‌ಪಾಥ್‌ಗಳು. ಇಲ್ಲಬಾರದ ವಿಷಯಗಳನ್ನ ಮುನ್ನೆಲೆಗೆ ತಂದು ಅಭಿವೃದ್ಧಿ ಮಾಡದ ರಾಜಕಾರಣಿಗಳು. ಆದರೂ, ಏನೂ ಆಗೇ ಇಲ್ಲ ಎಂಬಂತೆ ಜನರು ಇರುವುದು ಏಕೆ.

    ಹುಬ್ಬಳ್ಳಿಯ ಚೆನ್ನಮ್ಮ ವೃತ್ತವೂ ಸೇರಿದಂತೆ ಎಲ್ಲಿಯೂ ನಿಮಗೆ ಉತ್ತಮವಾದ ರಸ್ತೆಗಳು ಕಾಣಸಿಗಲ್ಲ. ಆದರೂ, ನಗರ ವಾಸಿಗಳಾದ ತಾವೂ ಏನು ಮಾತಾಡೋದೆ ಇಲ್ಲ. ಕಟ್ಟುವ ಟ್ಯಾಕ್ಸ್ ಎಲ್ಲಿ ಎಂದು ಕೇಳುವ ಧೈರ್ಯವೂ ಜನರಿಂದ ದೂರ ಸರೀತಾ ಎಂಬ ಪ್ರಶ್ನೆ ಮೂಡತ್ತೆ.

    ಧಾರವಾಡದ ಓಲ್ಡ್ ಡಿಎಸ್ಪಿ ರಸ್ತೆ ಅದ್ಯಾವಾಗ ಮುಗಿಯುತ್ತೋ ಭಗವಂತನೇ ಬಲ್ಲ. ಹೇಳುವವರು ಮತ್ತೂ ಕೇಳುವವರು ಯಾರೂ ಇಲ್ಲ. ದಿನಬೆಳಗಾದರೇ, ದೇಶ- ವಿದೇಶದ ಸುದ್ದಿಗಳನ್ನ, ಸಮಸ್ಯೆಗಳನ್ನ ಜನರ ತಲೆಯೊಳಗೆ ತುಂಬಿ ತಿರುಗಾಡುವ ರಾಜಕಾರಣಿಗಳು, ತಮ್ಮೂರು ಕೊಳಕ್ಕೆದ್ದು ಹೋದರೂ ಮಾತನಾಡಲ್ಲ. ಹಾಗಂತ, ನಿಮ್ಮೂರಿನ ಬಗ್ಗೆ ನಿಮಗೆ ಕಾಳಜಿ ಏಕೆ ಇಲ್ಲ.

    ದೊಡ್ಡ ದೊಡ್ಡ ಮಾತನಾಡುವ ನೀವು ಸತ್ತ ಮೇಲೆ ಉಪಯೋಗವಾಗುವ ಕನಸು ಕಾಣುವ ಬದಲು, ಇದ್ದಾಗ ನಿಮ್ಮೂರನ್ನ ಚೆಂದಾಗಿ ನೋಡಿಕೊಳ್ಳುವ ಜವಾಬ್ಧಾರಿ ಯಾರದ್ದು, ಆತ್ಮಸಾಕ್ಷಿಯ ಜೊತೆಗೆ ಬದುಕುತ್ತಿರುವವರು ಒಂದ್ಸಲ ಯೋಚಿಸಿ, ನೀವು ಮಣ್ಣಾಗುವ ಶಹರಗಳ ನಿಮಗೆ ಕಾಳಜಿ ಯಾಕೆ ಮರೆಯುತ್ತಿದೆ.

    ಅಭಿಪ್ರಾಯಗಳನ್ನ ಕರ್ನಾಟಕವಾಯ್ಸ್.ಕಾಂ ವಾಟ್ಸಾಫ್‌ಗೆ ತಿಳಿಸಿ

     

  • ‘ಸಂತೋಷ ಚವ್ಹಾಣ’ ಅಧ್ಯಕ್ಷತೆಯಲ್ಲಿ ಸಚಿವ ‘ಪ್ರಲ್ಹಾದ ಜೋಶಿ’ಯವರಿಗೆ ಏನು ಮಾಡಿದ್ರು ಗೊತ್ತಾ…!?

    ‘ಸಂತೋಷ ಚವ್ಹಾಣ’ ಅಧ್ಯಕ್ಷತೆಯಲ್ಲಿ ಸಚಿವ ‘ಪ್ರಲ್ಹಾದ ಜೋಶಿ’ಯವರಿಗೆ ಏನು ಮಾಡಿದ್ರು ಗೊತ್ತಾ…!?

    ಹುಬ್ಬಳ್ಳಿ: ರುದ್ರಾಕ್ಷಿ ಮಠದಲ್ಲಿ ನಡೆದ 76 ನೇವಾರ್ಷಿಕ ಶ್ರೀ ನಿಜಗುಣರ ಜಯಂತಿ ಉತ್ಸವ ಮತ್ತು ಶ್ರೀ ನಿಜಗುಣ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಭಾಗವಹಿಸಿದ್ದರು.


    ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗವಹಿಸಿ, ನಿಜಗುಣರ ಕುರಿತು ಮಾತನಾಡಿದರು. ಈ ಸಮಯದಲ್ಲಿ ಜೋಶಿಯವರನ್ನ ಆಧರದಿಂದ ಸತ್ಕರಿಸಲಾಯಿತು.

    ಕಾರಂಜಿ ಮಠದ ಡಾ. ಶ್ರೀ ಶಿವಯೋಗಿ ದೇವರು , ಎರಡೆತ್ತಿನ ಮಠ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ವಿರಕ್ತ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಅಭಿನವ ರೇವಣ್ಣಸಿದ್ಧ ಸ್ವಾಮಿಗಳು, ಪೂಜ್ಯ ಶ್ರೀ ಸದಾನಂದ ಶಿವಾಚಾರ್ಯ ಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಚನ್ನಬಸಪ್ಪ ಬಾಗೇವಾಡಿ ಸೇರಿದಂತೆ ಭಕ್ತವೃಂದ ಉಪಸ್ಥಿತರಿದ್ದರು.