Category: ಹುಬ್ಬಳ್ಳಿ- ಧಾರವಾಡ

  • ಬೆಳೆ ವಿಮೆ “ಪರಿಹಾರ 50-50” ಕಿರೇಸೂರಲ್ಲಿ ನಡೆದ ಡ್ರಾಮಾ ಬಟಾಬಯಲು… “ಹಿನ್ನೆಲೆ” ಯಾರು ಗೊತ್ತಾ…!?

    ಬೆಳೆ ವಿಮೆ “ಪರಿಹಾರ 50-50” ಕಿರೇಸೂರಲ್ಲಿ ನಡೆದ ಡ್ರಾಮಾ ಬಟಾಬಯಲು… “ಹಿನ್ನೆಲೆ” ಯಾರು ಗೊತ್ತಾ…!?

    ಧಾರವಾಡ: ಸಾವಿರಾರೂ ರೈತರಿಗೆ ಮೋಸ ಮಾಡಿ, ಕೆಲ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಿದ್ದೇವೆ ಎಂದು ತೋರಿಸಿಕೊಳ್ಳುವ ಷಢ್ಯಂತ್ರವೊಂದು ಸದ್ದಿಲ್ಲದೇ ನಡೆಯುತ್ತಿದ್ದು, ಇದಕ್ಕೆ ವ್ಯವಸ್ಥಿತವಾಗಿ ‘ಬಲೆ’ ಹೆಣೆದು ಕೋಟಿ ಕೋಟಿ ಹಣ ಹೊಡೆಯಲು ಕಾದು ಕುಳಿತಿರುವ ಬಗ್ಗೆ ಕರ್ನಾಟಕವಾಯ್ಸ್.ಕಾಂಗೆ ಖಚಿತ ಮಾಹಿತಿ ದೊರಕಿದೆ.

    ಮುಂಗಾರು ಬೆಳೆಯಲ್ಲಿ “ಹೆಸರು ಬೆಳೆ” ನಮೂದು ಮಾಡಿರುವುದು ಗೊತ್ತಾಗಿದೆ. ಇದನ್ನ ನೋಡಲು ಬರುವ ಇನ್ಸೂರೆನ್ಸ್ ಕಂಪನಿ ಅಧಿಕಾರಿಗಳಿಗೆ ಮೋಸ ಮಾಡುವ ಉದ್ದೇಶದಿಂದ ನಡೆದಿರುವ ವಂಚನೆಯ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

    ಕಿರೇಸೂರ ಗ್ರಾಮದ ಹೊಲವೊಂದನ್ನ ನೋಡಲು ಬರುವ ಮುನ್ನವೇ 25ಕ್ಕೂ ಹೆಚ್ಚು ಆಳುಗಳನ್ನ ಬಳಸಿ, ಹೆಸರು ಬಿಡಿಸಲಾಗಿದೆ. ಒಂದು ಗಿಡದಲ್ಲಿ ಎರಡ್ಮೂರು ಕಾಯಿಗಳನ್ನಷ್ಟೇ ಬಿಟ್ಟು ಇಳುವರಿ ಕಡಿಮೆ ತೋರಿಸಲಾಗಿದೆಯಂತೆ. ಈ ಸಮಯದಲ್ಲಿ ಹೊಲದ ಮಾಲೀಕನಿಗೆ 25ಸಾವಿರಕ್ಕೂ ಹೆಚ್ಚು ಹಣ ಕೊಟ್ಟಿರುವ ಬಗ್ಗೆ ಇಡೀ ಕಿರೇಸೂರದ ಗೋಡೆಗಳಲ್ಲಿ ರಿಂಗಣಿಸುತ್ತಿದೆ.

    ಸೋಜಿಗವೆಂದರೇ, ಕೆಲವು ರೈತರು ವಂಚಕರ ಬಲೆಗೆ ಬಿದ್ದಿದ್ದು, ಸಾವಿರಾರೂ ರೈತರು ಇದರಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ರಾಜಕಾರಣಿಗಳು ಕೆಲವು ರೈತರಿಗೆ ಅನುಕೂಲವಾಗತ್ತೆ ಎಂದುಕೊಂಡು ಸುಮ್ಮನಾಗುವ ಬದಲು ನೂರೆಂಟು ರೈತಾಪಿ ಕುಟುಂಬಗಳಿಗೆ ಮೋಸವಾಗುತ್ತಿರುವ ಬಗ್ಗೆ ಗಮನ ಕೊಡಬೇಕಿದೆ.

  • ಬೆಳೆ ವಿಮೆ “50-50” ವಂಚಕರ ಬೆನ್ನು ಬೀಳಲು ಸಜ್ಜಾದ ಆಡಳಿತ… ರೈತರ ಹೆಸರಲ್ಲಿ “ದುಂಡ”ಗಾಗುವರಿಗಿದೆ ಮಾರಿಹಬ್ಬ…!!!

    ಬೆಳೆ ವಿಮೆ “50-50” ವಂಚಕರ ಬೆನ್ನು ಬೀಳಲು ಸಜ್ಜಾದ ಆಡಳಿತ… ರೈತರ ಹೆಸರಲ್ಲಿ “ದುಂಡ”ಗಾಗುವರಿಗಿದೆ ಮಾರಿಹಬ್ಬ…!!!

    ಧಾರವಾಡ: ರೈತರ ಹೆಸರಿನಲ್ಲಿ ಹಣ ತಾವೇ ತುಂಬಿ, ಬರುವ ಪರಿಹಾರದಲ್ಲಿ 50-50 ಮಾಡಲು ಹುನ್ನಾರ ನಡೆಸುತ್ತ ಬಂದಿರುವ ನೀಚರ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಅಧಿಕಾರಿಗಳು ಯಾವುದೇ ಕ್ಷಣದಲ್ಲಿ ವಂಚಕರನ್ನ ಹೆಡಮುರಿಗೆ ಕಟ್ಟುವ ಸಾಧ್ಯತೆಯಿದೆ.

    ಆನ್‌ಲೈನ್ ಮೂಲಕ ಪರಿಹಾರದ ಹಣ ತುಂಬಲು ಅವಕಾಶವೇ ಇಲ್ಲದ ಹಾಗೇ ಸರ್ವರ್ “ಬಿಜಿ” ಮಾಡಿಟ್ಟು, ಆಫ್‌ಲೈನ್ ಮೂಲಕ ರೈತರ ದಾಖಲೆಗಳನ್ನ ತೆಗೆದುಕೊಂಡು ಹೋಗಿ, ಹಣ ತುಂಬಿರುವ ಮಾಹಿತಿಯನ್ನ ಸಂಬಂಧಿಸಿದ ಅಧಿಕಾರಿಗಳು ಕಲೆ ಹಾಕಿದ್ದಾರೆ.

    ಯಾವ ಯಾವ ಗ್ರಾಮದ ಎಷ್ಟೇಷ್ಟು ರೈತರು ಯಾರ ಬಳಿ ದಾಖಲೆ ನೀಡಿದ್ದಾರೆ ಎಂಬುದನ್ನ ಪತ್ತೆ ಹಚ್ಚಲಾಗಿದ್ದು, ಫಿಪ್ಟಿ-ಫಿಪ್ಟಿ ಆಸೆಯಲ್ಲಿ ದಾಖಲೆ ನೀಡಿದ ರೈತರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.

    ಅಖಂಡ ಧಾರವಾಡ ಜಿಲ್ಲೆಯ ಪ್ರಮುಖ ತಾಲೂಕಿನ ವ್ಯಕ್ತಿಯೋರ್ವ ಈ ಕರಾಳ ದಂಧೆಯಲ್ಲಿರುವುದನ್ನ ಬಹುತೇಕ ಖಚಿತ ಪಡಿಸಿಕೊಂಡಿರುವ ಅಧಿಕಾರಿಗಳು, ಆತನ ಜೊತೆ ಸಂಪರ್ಕ ಹೊಂದಿರುವವರ ಮೊಬೈಲ್ ನಂಬರುಗಳನ್ನ ಪಡೆದುಕೊಂಡಿರುವ ಬಗ್ಗೆ ಮಾಹಿತಿಯಿದೆ.

  • IPS ಶಶಿಕುಮಾರ್ ಅವರಿಗೆ “ಜೈ”ಕಾರ ಹಾಕಿದ ‘ಪೊಲೀಸ್ ಪ್ಯಾಮಿಲಿ’…!!!

    IPS ಶಶಿಕುಮಾರ್ ಅವರಿಗೆ “ಜೈ”ಕಾರ ಹಾಕಿದ ‘ಪೊಲೀಸ್ ಪ್ಯಾಮಿಲಿ’…!!!

    ಹುಬ್ಬಳ್ಳಿ: ಅವಳಿನಗರದ ಪೊಲೀಸ್ ಕಮೀಷನರೇಟ್‌ನ ಪೊಲೀಸರಿಗೆ ಆಯೋಜನೆ ಮಾಡಿದ್ದ ಆಟೋಟಗಳ ಸಮಾರೋಪದಲ್ಲಿ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರಿಗೆ ಪೊಲೀಸ್ ಪ್ಯಾಮಿಲಿಗಳು ಜೈಕಾರ ಹಾಕಿದ ಘಟನೆ ನಡೆಯಿತು.

    ಪೊಲೀಸರೊಂದಿಗೆ ನಡೆದ ಆತ್ಮೀಯತೆಯ ದೃಶ್ಯಾವಳಿಗಳು ಇಲ್ಲಿವೆ ನೋಡಿ…

    ಮನೋರಂಜನೆ ಕಾರ್ಯಕ್ರಮದಲ್ಲಿ ಎಲ್ಲರೂ ಒಂದಾಗಿ ಕುಣಿದು ಕುಪ್ಪಳಿಸಿದರು. ಪೊಲೀಸ್ ಕಾನ್ಸಟೇಬಲ್‌ರಿಂದ ಹಿಡಿದು‌ ಪೊಲೀಸ್ ಕಮೀಷನರ್ ವರೆಗೂ ಎಂಜಾಯ್ ಮಾಡಿದ್ದು ವಿಶೇಷವಾಗಿತ್ತು.

     

  • ಮಾಜಿ ಶಾಸಕ ಅಮೃತ ದೇಸಾಯಿಯವರ “ಬಿಗ್ ಅಪ್ಟೇಟ್”… “12-12=24″…

    ಮಾಜಿ ಶಾಸಕ ಅಮೃತ ದೇಸಾಯಿಯವರ “ಬಿಗ್ ಅಪ್ಟೇಟ್”… “12-12=24″…

    ಧಾರವಾಡ: ಮಾಜಿ ಶಾಸಕ ಅಮೃತ ದೇಸಾಯಿಯವರು ಪ್ರತಿ ವರ್ಷವೂ ನಡೆಸುವ ಕಾರ್ಯಕ್ರಮದ ಕುರಿತು ಹನ್ನೆರಡು ದಿನಗಳ ಮೊದಲೇ ವಿವರವನ್ನ ನೀಡಿದ್ದು, ಅವರ ಅಭಿಮಾನಿ ಬಳಗದಲ್ಲಿ ಹುಮ್ಮಸ್ಸು ಮೂಡಿಸಿದೆ.

    ಮಾಜಿ ಶಾಸಕ ಅಮೃತ ದೇಸಾಯಿ ಅವರು ಡಿಸೆಂಬರ್ 12 ರಂದು ಉಳವಿಗೆ ಪಾದಯಾತ್ರೆಯನ್ನ ಹಮ್ಮಿಕೊಂಡಿದ್ದು, ಈ ಬಾರಿ ಸಾವಿರಾರೂ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ.

    ಮಾಜಿ ಶಾಸಕ ಅಮೃತ ದೇಸಾಯಿ ಅವರ ಜೊತೆಗೆ ಕುಟುಂಬದ ಹಲವರು ಭಾಗವಹಿಸಲಿದ್ದು, ಈ ಸಲ ಹಲವು ರಾಜಕಾರಣಿಗಳು ಭಾಗವಹಿಸುವ ಭರವಸೆಯಿದೆ.

  • ಹುಬ್ಬಳ್ಳಿಯಲ್ಲೊಂದು “ಕಲರ್-ಕಲರ್” ಲವ್ ಸ್ಟೋರಿ…!!!

    ಹುಬ್ಬಳ್ಳಿಯಲ್ಲೊಂದು “ಕಲರ್-ಕಲರ್” ಲವ್ ಸ್ಟೋರಿ…!!!

    ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲೊಂದು ಕಲರ್ ಕಲರ್ ಪ್ರೀತಿ, ಪ್ರೇಮ ಮತ್ತೂ ಮದುವೆ ನಡೆದಿದ್ದು, ಬದುಕಲು ಬಿಡಿ ಎಂದು ಕೇಳುವ ಸ್ಥಿತಿ ಇಬ್ಬರಿಗೂ ಬಂದಿದ್ದು, ಪೊಲೀಸ್ ಕಮೀಷನರ್ ಬಳಿ ಮೊರೆ ಹೋಗಿದ್ದಾರೆ.

    ಇವರಿಬ್ಬರ ಪ್ರೇಮ, ಮದುವೆ ಮತ್ತೂ ಜೀವ ಬೆದರಿಕೆಯ ವಿವರವಾದ ಮಾಹಿತಿ ವೀಡೀಯೊದಲ್ಲಿದೆ…

    ಈ ಗಂಡ-ಹೆಂಡತಿಗೆ ಕಲರ್‌ದಿಂದ ಸಮಸ್ಯೆಯಾಗಿದ್ದನ್ನ ಪೊಲೀಸ್ ಕಮೀಷನರ್ ಹೇಗೆ ಬಗೆಹರಿಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

  • ಹುಬ್ಬಳ್ಳಿ: ಅಪ್ಪನ್ ಕೊಂದು ಹೆಂಡ್ತಿ ಜೊತೀ ಓಡಿ ಹೋಗಿದ್ದವನ್, ಸತಿ ಸಮೇತ ಎಳೆತಂದ “ಆರಕ್ಷಕರು”…

    ಹುಬ್ಬಳ್ಳಿ: ಅಪ್ಪನ್ ಕೊಂದು ಹೆಂಡ್ತಿ ಜೊತೀ ಓಡಿ ಹೋಗಿದ್ದವನ್, ಸತಿ ಸಮೇತ ಎಳೆತಂದ “ಆರಕ್ಷಕರು”…

    ಹುಬ್ಬಳ್ಳಿ: ಸಂತೋಷನಗರದಲ್ಲಿ ತನ್ನ ಅಪ್ಪನನ್ನೇ ಕುಡಿದ ಮತ್ತಿನಲ್ಲಿ ಬಡಿದು ಪತ್ನಿಯ ಜೊತೆ ಪರಾರಿಯಾಗಿದ್ದ ಇಬ್ಬರನ್ನೂ ವಶಕ್ಕೆ ಪಡೆಯುವಲ್ಲಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಅವತ್ತಿನ ಘಟನೆ ಬಗ್ಗೆ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದು…

    ನಾಗರಾಜ ಮೈಸೂರು ಅವರನ್ನ ಮಗ ಅಣ್ಣಪ್ಪಸ್ವಾಮಿ ಮೈಸೂರು ಹಾಗೂ ಮಹಾಲಕ್ಷ್ಮಿ ಮೈಸೂರು ಹೊಡೆದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್ ಅವರು ಕಿಮ್ಸನಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾದ್ದರು.

    ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು, ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • 3ಸಚಿವರು, 3ಶಾಸಕರ ಉಪಸ್ಥಿತಿಯಲ್ಲಿ “ಅಜ್ಜಂಪೀರ್ ಖಾದ್ರಿ”ಯವರ “ಫ್ರೀ” ಪಟ್ಟಾಭಿಷೇಕ…!!!

    3ಸಚಿವರು, 3ಶಾಸಕರ ಉಪಸ್ಥಿತಿಯಲ್ಲಿ “ಅಜ್ಜಂಪೀರ್ ಖಾದ್ರಿ”ಯವರ “ಫ್ರೀ” ಪಟ್ಟಾಭಿಷೇಕ…!!!

    ಹೆಸ್ಕಾಂ ಅಧ್ಯಕ್ಷರಾಗಿ ಸೈಯದ್ ಅಜ್ಜಂಪೀರ ಖಾದ್ರಿ ಅಧಿಕಾರ ಸ್ವೀಕಾರ

    ಹೆಸ್ಕಾಂ ಇಲಾಖೆಯನ್ನು ಮಾದರಿ ಇಲಾಖೆಯನ್ನಾಗಿ ಮಾಡಲು ಪಣ
    ಸೈಯದ್ ಅಜ್ಜಂಪೀರ ಖಾದ್ರಿ

    ಹುಬ್ಬಳ್ಳಿ: ಹೆಸ್ಕಾಂ ಇಲಾಖೆಯನ್ನು ಮಾದರಿ ಇಲಾಖೆಯನ್ನಾಗಿ ಮಾಡಲು ಪಣ ತೊಟ್ಟು ಕೆಲಸ ಮಾಡುತ್ತೇನೆ ಎಂದು ಸೈಯದ್ ಅಜ್ಜಂಪೀರ ಖಾದ್ರಿ ಹೇಳಿದರು.

    ಇಂದು ನವನಗರದ ಹೆಸ್ಕಾಂ ಕಚೇರಿಯಲ್ಲಿ ಹೆಸ್ಕಾಂ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

    ರೈತ ದೇಶದ ಬೆನ್ನೆಲುಬು. ರೈತರಿಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಭಾರತ ದೇಶದಲ್ಲಿ ಗೃಹ ಜ್ಯೋತಿ ಯೋಜನೆ ಮಾದರಿಯಾಗಿದೆ. ಇಲಾಖೆ ಅಧಿಕಾರಿಗಳ ಸಹಕಾರ ತೆಗೆದುಕೊಂಡು ಕಾರ್ಯನಿರ್ವಹಿಸುತ್ತೇನೆ. ಹೆಸ್ಕಾಂ ವ್ಯಾಪ್ತಿಯ ಪ್ರದೇಶಗಳಿಗೆ ಸಂಚರಿಸಿ, ಸಮಸ್ಯೆಗಳನ್ನು ಪರಿಹರಿಸಲಾಗುವುದು. ನಮ್ಮ ಸರ್ಕಾರ ಬಡವರು, ರೈತರು ಮತ್ತು ಕೂಲಿ ಕಾರ್ಮಿಕರ ಪರವಾಗಿದೆ. ಹೆಸ್ಕಾಂ ಸಂಸ್ಥೆ ಒಳ್ಳೆಯ ಕೆಲಸ ಮಾಡುವ ಸಂಸ್ಥೆಯಾಗಿರುತ್ತದೆ. ನನಗೆ ನೀಡಿರುವ ಜವಾಬ್ದಾರಿಯನ್ನು ಅರಿತು ಕೆಲಸ ಮಾಡುತ್ತೇನೆ ಎಂದರು.

    ವಿವಿಧ ಧರ್ಮಗಳ ಧರ್ಮ ಗುರುಗಳು ಆರ್ಶೀವಚನ ನೀಡಿದರು.

    ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ತಮ್ಮ ಕಚೇರಿಯಲ್ಲಿ ಸೈಯದ್ ಅಜ್ಜಂಪೀರ ಖಾದ್ರಿ ಅವರು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ವೈಶಾಲಿ ಎಂ.ಎಲ್. ಅವರಿಂದ ಅಧಿಕಾರ ಸ್ವೀಕರಿಸಿದರು.

    ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್ ಪಾಟೀಲ, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಬಿ.ಝೆಡ್. ಜಮೀರ್ ಅಹ್ಮದ್ ಖಾನ್, ಶಾಸಕರಾದ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಯಾಸೀರ್ ಖಾನ್ ಪಠಾಣ, ಮಾಜಿ ಸಚಿವರಾದ ಎ.ಎಂ.ಹಿಂಡಸಗೇರಿ, ಮಾಜಿ ಸಂಸದರಾದ ಪ್ರೊ.ಐ.ಜಿ.ಸನದಿ ಸೇರಿದಂತೆ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.

  • “ಬೆಳೆ ವಿಮೆ” 50-50 ವರ್ಕೌಟ್‌ಗೆ ನೀಚರ ಪ್ಲಾನ್: ಕಣ್ಣು ಮುಚ್ಚಿ ಕುಳಿತ ಸರಕಾರ….!!!

    “ಬೆಳೆ ವಿಮೆ” 50-50 ವರ್ಕೌಟ್‌ಗೆ ನೀಚರ ಪ್ಲಾನ್: ಕಣ್ಣು ಮುಚ್ಚಿ ಕುಳಿತ ಸರಕಾರ….!!!

    ಧಾರವಾಡ: ಬೆಳೆ ವಿಮೆ ಪರಿಹಾರ ಪಡೆಯಲು ಆನ್‌ಲೈನ್ ಅರ್ಜಿ ಹಾಕುವ ಸರ್ವರ್ ಬಂದ್ ಮಾಡಿ, ಒಳಗೊಳಗೆ 50-50 ಅನುಪಾತದಲ್ಲಿ ಹಣ ಹೊಡೆಯುವ ಸ್ಕೀಂ ಮಾಡಿಕೊಳ್ಳುವ ತವಕ ಹಲವು ಗ್ರಾಮಗಳಲ್ಲಿ ಕಂಡು ಬರತೊಡಗಿದೆ.

    ಏನಿದು ಪ್ಲಾನ್ ಅನ್ನೋದನ್ನ ತಿಳಿಯುವ ಕುತೂಹಲ ನಿಮ್ಮಲ್ಲಿದ್ದರೇ, ಈ ಮಾಹಿತಿಯನ್ನ ಸಂಪೂರ್ಣವಾಗಿ ಓದಿ. ರೈತರು ಅತಿಯಾದ ಮಳೆಯಿಂದ ಬೆಳೆಯನ್ನ ಕಳೆದುಕೊಂಡಿರುವುದು ಎಲ್ಲರಿಗೂ ಗೊತ್ತೆಯಿದೆ. ಆದರೆ, ಪರಿಹಾರ ಪಡೆಯಲು ಅನುಸರಿಸುತ್ತಿದ್ದ ರೀತಿ ಸದ್ದಿಲ್ಲದೇ ಗಬ್ಬೆದ್ದು ಹೋಗಿರುವುದನ್ನ ಯಾರೂ ಗಮನಿಸಿಯೇ ಇಲ್ಲ.

    ಹೌದು… ಬೆಳೆ ವಿಮೆ ಪರಿಹಾರಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬೇಕಾಗಿತ್ತು. ಆದರೆ, ಸರ್ವರ್ ಸಮಸ್ಯೆಯಿದೆ ಎಂದು ಬಿಂಬಿಸಲಾಗಿದೆ. ಅಷ್ಟೇ ಅಲ್ಕ, ಸರ್ವರ್ ಕೂಡಾ ಕೆಲಸ ಮಾಡದ ಹಾಗೇ ವ್ಯವಸ್ಥಿತಿ ತಂತ್ರ ಹೆಣೆಯಲಾಗಿದೆ.

    ಈ ಹೆಣೆದ ತಂತ್ರದಿಂದ ಕೆಲವರು ಅಡುಗೆ ಮನೆಯಲ್ಲಿ ಕುಳಿತು ಹಣ ಮಾಡತೊಡಗಿದ್ದಾರೆ. ಅದು ಹೇಗೆ ಎಂದು ನಿಮಗೆ ಪ್ರಶ್ನೆ ಮೂಡುತ್ತಿದೇಯಾ..!?

    ಧಾರವಾಡ ಜಿಲ್ಲೆಯೂ ಸೇರಿದಂತೆ ಹಲವು ಭಾಗದಲ್ಲಿ ಕಮೀಷನ್ ಏಜೆಂಟರಂತೆ ಕೆಲವು ಆಸಾಮಿಗಳನ್ನ ಓರ್ವ ವ್ಯಕ್ತಿ ಗುಂಪು ಮಾಡಿಕೊಂಡಿದ್ದಾನೆ. ಆತ ನೇರವಾಗಿ ಆಯಾ ಗ್ರಾಮಗಳಿಗೆ ಹೋಗಿ, ನೂರಾರೂ ರೈತರ ಆಧಾರ ಕಾರ್ಡ್, ಉತಾರ ಮತ್ತು ಸಂಬಂಧಿಸಿದ ದಾಖಲೆಗಳನ್ನ ತೆಗೆದುಕೊಂಡು ಹೋಗುತ್ತಾನೆ.

    ಹಾಗೇ ಹೋಗುವಾಗ, ‘ಬೆಳೆವಿಮೆಗೆ ಹಣವನ್ನ ನಾನೇ ತುಂಬುತ್ತೇನೆ. ಬಂದ ಪರಿಹಾರದಲ್ಲಿ 50-50 ಇರತ್ತೆ’ ಎಂದು ಊರಿನ ಕಮೀಷನ್ ಏಜೆಂಟರ್ ಮುಂದೆ ಅವರನ್ನ ಕೂಡಿಸಿ ಹೇಳುತ್ತಾನೆ. ಆತನ ಮಾತಿಗೆ ತಲೆದೂಗಿರೋ ರೈತನ ಅಕೌಂಟ್‌ಗೆ ಹಣ ಬಂದಿದ್ದೆ ತಡ, ಆಸಾಮಿ ಪ್ರತ್ಯಕ್ಷವಾಗಿ ತನ್ನ 50% ಹಣವನ್ನ ತೆಗೆದುಕೊಂಡು ಹೋಗುತ್ತಾನೆ.

    ನಿಜವಾಗಿಯೂ ಫಲಾನುಭವಿ ಆಗಬೇಕಿರುವ ರೈತನಿಗೆ ಅನ್ಯಾಯವಾದರೂ ಪರ್ವಾಗಿಲ್ಲ ಎಂದುಕೊಂಡ ಕಮೀಷನ್ ಪಡೆಯುವ ಎರಡು ಕಡೆಯಿಂದಲೂ, ಬಿಸ್ಕೀತ್ ತಿಂದು ಅನ್ಯಾಯ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸರಕಾರ ಕ್ರಮ ಜರುಗಿಸುವ ಅವಶ್ಯಕತೆಯಿದೆ.

  • ಧಾರವಾಡದ “BGS” ಶಾಲೆಯಲ್ಲಿ ‘ಅಕ್ಷರದ ಜೊತೆಗೆ’ ನಿಜ ಜೀವನದ ಪಾಠ…!!!

    ಧಾರವಾಡದ “BGS” ಶಾಲೆಯಲ್ಲಿ ‘ಅಕ್ಷರದ ಜೊತೆಗೆ’ ನಿಜ ಜೀವನದ ಪಾಠ…!!!

    ಮಕ್ಕಳಿಗೆ ಶಿಕ್ಷಣದ ಜೊತೆಗೆ ಬದುಕಿನ ಪಾಠ ಕಲಿಕೆ

    ಪಾಲಕರ ಜೀವನದ ಕಷ್ಟ, ಮಕ್ಕಳಿಗೆ ತಿಳಿಸುವ ಯತ್ನ

    ಧಾರವಾಡ: ವಿಕಾಸನಗರದಲ್ಲಿರುವ ಬಿಜಿಎಸ್ ಎಜ್ಯುಕೇಷನ್ ಸೆಂಟರ್ ಶಾಲೆಯಲ್ಲಿ ಸಂಸ್ಠೆಯ ಕಾರ್ಯದರ್ಶಿ ಡಾ.ಜೆ.ಎನ್ ರಾಮಕೃಷ್ಣೇಗೌಡರವರ ದಿವ್ಯ ಸಾನಿಧ್ಯದಲ್ಲಿ ಮಕ್ಕಳ ವ್ಯವಹಾರಕ್ಕೆ ಪೂರಕವಾಗುವಂತೆ ವಿನೂತನ ಮಕ್ಕಳ ಸಂತೆ ಹಾಗೂ ಆಹಾರ ಮೇಳ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ವೀಡಿಯೋ…

    ಮಕ್ಕಳ ಆರ್ಥಿಕ ಮುಗ್ಗಟ್ಟನ್ನು ಹೆದರಿಸುವ ಬಗೆ ಹಾಗೂ ತಮ್ಮ ಹೊಲ-ಗದ್ದೆಗಳಲ್ಲಿ ಬೆಳೆದ ಹಣ್ಣು-ತರಕಾರಿಗಳು, ಮನೆಯಲ್ಲೆ ತಯಾರಿಸಿದ ಆಹಾರ ಪದಾರ್ಥಗಳನ್ನ ತಂದು ಮಾರಾಟ ಮಾಡುವ ಮೂಲಕ ಮಕ್ಕಳ ಮಾನಸಿಕ ಸ್ಥಿತಿಗಳನ್ನು ಉಲ್ಲೇಖಗೊಳಿಸುವಂತಹ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

    ಪೋಷಕರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡರು. ಮಕ್ಕಳ ಸಂತೆಯನ್ನು ಬೆಳಗ್ಗೆಯಿಂದ ಮಧ್ಯಾಹ್ನದವರಿಗೆ ಅತ್ಯುತ್ತಮವಾಗಿ ಮಕ್ಕಳು ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪೋಷಕರು , ಸಾರ್ವಜನಿಕರು ಶಾಲೆಯ ಕಲೆ ಶಿಕ್ಷಕರ ಎಲ್ಲರೂ ಉಪಸ್ಥಿತರಿದ್ದರು.

  • ಬೆಳಗಾವಿ ಮಾಳಮಾರುತಿ ಠಾಣೆಯಲ್ಲಿ “ಜನರ ನೆಮ್ಮದಿಗಾಗಿ” ವಿಶೇಷ ಪೂಜೆ…!!!

    ಬೆಳಗಾವಿ ಮಾಳಮಾರುತಿ ಠಾಣೆಯಲ್ಲಿ “ಜನರ ನೆಮ್ಮದಿಗಾಗಿ” ವಿಶೇಷ ಪೂಜೆ…!!!

    ಬೆಳಗಾವಿ: ಸದಾ ಸಾರ್ವಜನಿಕರ ನೆಮ್ಮದಿಗಾಗಿ ಕರ್ತವ್ಯ ನಿರ್ವಹಿಸುವ ಪೊಲೀಸರು, ಕೆಲ ಜನರಲ್ಲಿಯೇ ಅತಿಯಾದ ಅಪರಾಧ ಮನೋಭಾವನೆ ಬೆಳೆಯುತ್ತಿದ್ದರೇ, ಅದು ಕಡಿಮೆ ಆಗಲಿ ಎಂಬ ಸದುದ್ದೇಶದಿಂದ ವಿಶೇಷವಾದ ಪೂಜೆ- ಪುನಸ್ಕಾರ ನಡೆಸಲಾಗಿರುವ ಭಾವಚಿತ್ರಗಳು ವೈರಲ್ ಆಗಿದೆ.

    ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಸದಾಕಾಲ ಜನರಿಗಾಗಿ ಅತ್ಯುತ್ತಮವಾದ ಕರ್ತವ್ಯ ನಿರ್ವಹಿಸುತ್ತ ಬರಲಾಗುತ್ತಿದೆ. ಹಾಗೇನೆ, ಗಣೇಶ ಚತುರ್ಥಿಯನ್ನ ಸಡಗರದಿಂದ ಆಚರಣೆ ಮಾಡಿ, ಜನರ ಮನಸ್ಸು ಗೆದ್ದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.

     

    ಕೆಲ ದಿನಗಳಿಂದ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದರಿಂದ, ಜನರ ಆತಂಕ ದೂರಾಗಿ, ಅವರಲ್ಲಿ ನೆಮ್ಮದಿ ಮೂಡಲಿ ಎಂಬ ಉದ್ದೇಶದಿಂದ ಪೂಜೆಗಳನ್ನ ಹಮ್ಮಿಕೊಂಡಿರುವುದು ತೀರಾ ವಿಶೇಷವಾಗಿದೆ.

    ಸಾರ್ವಜನಿಕರ ಒಳತಿಗಾಗಿ ಪೊಲೀಸರು ಠಾಣೆಯಲ್ಲಿ ಹಮ್ಮಿಕೊಂಡಿದ್ದ ಈ ಪೂಜೆ-ಪುನಸ್ಕಾರದಲ್ಲಿ ಸ್ಥಳೀಯ ಜನರು ಭಾಗವಹಿಸಿದ್ದು ವಿಶೇಷವಾಗಿದೆ. ಇಂತಹ ಪೊಲೀಸರು ವ್ಯವಸ್ಥೆಯಲ್ಲಿ ಇರುವುದರಿಂದಲೇ, ಜನತೆ ಮತ್ತಷ್ಡು ನೆಮ್ಮದಿಯ ಬದುಕು ಕಂಡುಕೊಳ್ಳಬಹುದಾಗಿದೆ. ಗ್ರೇಟ್ ಪೊಲೀಸ್…