Category: ನಮ್ಮೂರು

  • Exclusive- ಸ್ಮಾರ್ಟ್ ಸಿಟಿ ಅವಘಡ: ಬಾಲಕಿ ಸಾವು, ಮೂವರು ಬಾಲಕರು ಸೇಫ್: ಕಾಪಾಡಿದ್ದು ವಿಕಲಚೇತನ

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರ ಸ್ಮಾರ್ಟ್ ಸಿಟಿಯಾಗುವುದರಲ್ಲಿ ಎಷ್ಟು ಪ್ರಾಣಗಳು ಹೋಗಬೇಕಿವೆಯೋ ಯಾರಿಗೆ ಗೊತ್ತಾಗುತ್ತಿಲ್ಲ. ಅಂತಹ ವೈಜ್ಞಾನಿಕವಾಗಿ ಕಾಮಗಾರಿಗಳು ನಡೆಯುತ್ತಿವೆ. ಇಂದು ಕೂಡಾ ದೊಡ್ಡದೊಂದು ಅವಘಡ ಸಂಭವಿಸಿದ್ದು, ನಾಲ್ವರು ನೀರಿನಲ್ಲಿ ಬಿದ್ದು, ಓರ್ವ ಬಾಲಕಿ ಸಾವನ್ನಪ್ಪಿದ ಘಟನೆ ನಡೆದಿದೆ.

    ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯ ಆವರಣದಲ್ಲಿ ನಡೆದಿರುವ ಈ ಘಟನೆಯಲ್ಲಿ ಗಿರಣಿಚಾಳದ ತ್ರಿಶಾ ಎಂಬ ಮುದ್ದು ಬಾಲಕಿ ಸಾವಿಗೀಡಾಗಿದ್ದಾಳೆ. ಇವಳ ಜೊತೆಗೆ ಬಿದ್ದಿದ್ದ ಮೂವರು ಬಾಲಕರನ್ನ ಸ್ಥಳೀಯ ವಿಕಲಚೇತನ ಸುರೇಶ ಹೊರಕೇರಿ ಕಾಪಾಡಿದ್ದು, ಬಾಲಕರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹದಿನೈದು ಅಡಿ ತೆಗ್ಗು ತೆಗೆದು ಹಾಗೇಯೇ ಬಿಟ್ಟಿದ್ದು, ಅದರಲ್ಲಿ ಸಂಪೂರ್ಣವಾಗಿ ನೀರು ತುಂಬಿದೆ. ಆಟವಾಡುತ್ತಲೇ ಎಲ್ಲರೂ ಅದರಲ್ಲಿ ಬಿದ್ದಿದ್ದಾರೆ. ಅದೃಷ್ಟವಶಾತ್ ಸುರೇಶ ಹೊರಕೇರಿ ನೋಡಿದ್ದರಿಂದ ಮೂವರು ಬಾಲಕರು ಬದುಕಿದ್ದು, ಇನ್ನುಳಿದ ಬಾಲಕಿಯನ್ನ ಬಚಾವ್ ಮಾಡವಷ್ಟರಲ್ಲೇ ಮಗು ಪ್ರಾಣವನ್ನ ಕಳೆದುಕೊಂಡಿದೆ.

    ನಗರದಲ್ಲಿ ಬಂದ್ ಕರೆಯ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದಾಗ ಈ ಬಗ್ಗೆ ಯಾರಿಗೂ ಗೊತ್ತಾಗಿಲ್ಲ. ನಂತರ ಬಾಲಕಿಯ ಶವವನ್ನ ಕಿಮ್ಸಗೆ ರವಾನೆ ಮಾಡಲಾಗಿದೆ.

  • ಧಾರವಾಡದಲ್ಲಿಂದು 145 ಪಾಸಿಟಿವ್ –123 ಗುಣಮುಖ-  4 ಸೋಂಕಿತರ ಸಾವು

    ಧಾರವಾಡದಲ್ಲಿಂದು 145 ಪಾಸಿಟಿವ್ –123 ಗುಣಮುಖ-  4 ಸೋಂಕಿತರ ಸಾವು

    ಧಾರವಾಡದಲ್ಲಿಂದು 145 ಪಾಸಿಟಿವ್ –123 ಗುಣಮುಖ-  4 ಸೋಂಕಿತರ ಸಾವು

    ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತೆ 145 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಪಾಸಿಟಿವ್ ಸಂಖ್ಯೆ 17346 ಕ್ಕೇರಿದೆ. ಇಂದು 123 ಸೋಂಕಿತರು ಗುಣಮುಖರಾಗಿದ್ದು, ಈ ಮೂಲಕ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 14377 ಕ್ಕೇರಿದೆ.

    ಜಿಲ್ಲೆಯಲ್ಲಿ ಒಟ್ಟು 486 ಸೋಂಕಿತರು ಕೊರೋನಾ ಪಾಸಿಟಿವ್ ನಿಂದ ಸಾವಿಗೀಡಾಗಿದ್ದಾರೆ.

    ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ

  • ಹೆಬ್ಬಳ್ಳಿಯಲ್ಲಿ ಭಗತಸಿಂಗ್ ಯುವಕ ಮಂಡಳ ರಾತ್ರೋರಾತ್ರಿ ಏನೂ ಮಾಡಿದೆ ಗೊತ್ತಾ..?

    ಧಾರವಾಡ: ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ ಭಗತಸಿಂಗ  ಜನ್ಮದಿನಾಚರಣೆಯನ್ನ ತಾಲೂಕಿ ಹೆಬ್ಬಳ್ಳಿ ಗ್ರಾಮದ ಭಗತ್ ಸಿಂಗ್ ಯುವಕ ಮಂಡಳ ಸರಳವಾಗಿ ಮನಸೆಳೆಯುವ ರೀತಿಯಲ್ಲಿ ಆಚರಣೆ ಮಾಡಿದ್ರು.

    ಯುವಕರಲ್ಲಿ ಭಗತಸಿಂಗ್ ವಿದ್ಯಾರ್ಥಿ ಜೀವನದಲ್ಲಿ ಅಸಹಕಾರ ಚಳುವಳಿಯನ್ನ ಆರಂಭಿಸಿದ್ದರು. ಹೀಗಾಗಿಯೇ ಯುವ ಸಮೂಹದಲ್ಲಿ ಭಗತಸಿಂಗ್ ಹೆಸರು ಸಂಚಲನ ಮೂಡಿಸುತ್ತಿದೆ. ಇಂತಹ ಮಹಾನ್ ವ್ಯಕ್ತಿಯ 111ನೇ ಜನ್ಮದಿನಾಚರಣೆಯನ್ನ ಆಚರಿಸಲಾಯಿತು.

    ಭಗತ್ ಸಿಂಗ್ ಯುವಕ ಮಂಡಳಿ ಅಧ್ಯಕ್ಷ ಬಸವರಾಜ ಸುಂಕದ, ಸಚಿನ್ ವಾಲಿ, ಸಂಜು ಮೊರಬದ, ವೀರೇಶ ಚುಳಕಿ, ಮಹಾಂತೇಶ ಸುಂಕದ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಇಂದಿನ ಯುವಕರು ಭಗತಸಿಂಗ್ ಅವರ ಜೀವನ ಚರಿತ್ರೆಯನ್ನ ಅರಿತುಕೊಂಡು, ದೇಶಪ್ರೇಮವನ್ನ ಬೆಳೆಸಿಕೊಳ್ಳಬೇಕೆಂದು ಯುವಕ ಮಂಡಳದವರು ಯುವಸಮೂಹಕ್ಕೆ ಕರೆ ನೀಡಿದ್ದಾರೆ.

  • ಶಾಲೆ ಆರಂಭ ಸಧ್ಯಕ್ಕಿಲ್ಲ: ಅಕ್ಟೋಬರ್ 15ರ ವರೆಗೆ ಭೇಟಿಯೂ ಮಾಡುವಂಗಿಲ್ಲ- ಹೊಸ ಆದೇಶ

    ಬೆಂಗಳೂರು: ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ ಹೊರಡಿಸಿದ್ದು, ಅಕ್ಟೋಬರ್ 15ರ ವರೆಗೆ ವಿದ್ಯಾರ್ಥಿಗಳು ಶಾಲೆಗೂ ಭೇಟಿ ನೀಡುವಂತಿಲ್ಲ ಎಂದು ಹೊಸ ಆದೇಶವನ್ನ ಹೊರಡಿಸಿದೆ.


    ಒಂಬತ್ತನೇಯ ತರಗತಿಯಿಂದ12 ನೇ ತರಗತಿವರೆಗೆ ಸಂದೇಹ ಪರಿಹಾರಕ್ಕಾಗಿಯೂ ಶಾಲೆಗಳಿಗೆ ಬರಯವಂತಿಲ್ಲವೆಂದು ಆದೇಶ ಹೊರಡಿಸಲಾಗಿದೆ. ಈ ಮೊದಲು ಶಿಕ್ಷಕರನ್ನ ಭೇಟಿಯಾಗಿ ಸಂದೇಹ ಪರಿಹಾರಕ್ಕಾಗಿ ಅನುಮತಿ ಕೊಡಲಾಗಿತ್ತು.
    ಕೊರೋನಾ ಹೆಚ್ಚುತ್ತಿರುವುದರಿಂದ ಹೊಸ ಆದೇಶವನ್ನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿದ್ದಾರೆ.

  • ಧಾರವಾಡದಲ್ಲಿ ‘ಪವರ್’ಗಾಗಿ ಪ್ರತಿಭಟನೆ: ಕುನ್ನಿಭಾವಿ ನೇತೃತ್ವ

    ಧಾರವಾಡ: ಪವರ್ ಟಿವಿ ಬಂದ್ ಮಾಡಿರುವ ಕ್ರಮವನ್ನ ಖಂಡಿಸಿ ಧಾರವಾಡದಲ್ಲಿಂದು ಜಿಲ್ಲಾಧಿಕಾರಿ ಕಚೇರಿ ಎದುರು ಪತ್ರಕರ್ತರು ಪ್ರತಿಭಟನೆ ನಡೆಸಿದರು.

    ಸಿಎಂ ಪುತ್ರನ ವಿರುದ್ಧನ ವರದಿ ಪ್ರಸಾರವಾದ ಹಿನ್ನೆಲೆಯಲ್ಲಿ ಪವರ್ ಟಿವಿಯನ್ನ ಕಳೆದ ಎರಡು ದಿನದಿಂದ ಬಂದ್ ಮಾಡಲಾಗಿದ್ದು, ನಿನ್ನೆ ರಾಜ್ಯದ ಪತ್ರಕರ್ತರು ಸಿಎಂಗೆ ಭೇಟಿ ನೀಡಿ, ಮನವಿ ಮಾಡಿದ್ದರು.

    ಸಿಎಂ ಯಡಿಯೂರಪ್ಪ ಕೂಡಾ ಇದಕ್ಕೆ ಸ್ಪಂಧಿಸಿದ್ದರೂ ಎಂದು ಹೇಳಲಾಗಿತ್ತಾದರೂ, ಇಲ್ಲಿಯವರೆಗೆ ಪವರ್ ಟಿವಿ ಆರಂಭಿಸಲು ಬೇಕಾಗಿರುವ  ತಾಂತ್ರಿಕ ಸಲಕರಣೆಗಳು ನೀಡಿಲ್ಲ.

    ಪವರ್ ಟಿವಿ ಮೇಲೆ ನಡೆದಿರುವ ದಬ್ಬಾಳಿಕೆಯನ್ನ ಖಂಡಿಸಿ ಧಾರವಾಡದಲ್ಲಿ ಪತ್ರಕರ್ತ ಮುಸ್ತಫಾ ಕುನ್ನಿಭಾವಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಿಎಂಗೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ಮಿಲಿಂದ ಫಿಸೆ, ರಾಜು ಕರಣಿ, ಸೂರ್ಯಕಾಂತ ಶಿರೂರ, ಜಾವೇದ ಅಧೋನಿ, ಪ್ರಶಾಂತ ದಿನ್ನಿ, ಮಂಜುನಾಥ ಯಡಳ್ಳಿ, ವಾಸೀಮ ಭಾವಿಮನಿ, ಗುರುನಾಥ ಕಟ್ಟಿಮನಿ, ನಾಗರಾಜ ಕಿರಣಗಿ, ಅರ್ಬಾಜ, ವಿಠ್ಠಲ ಕರಡಿಗುಡ್ಡ, ಮಂಜು ಕವಳಿ, ಶ್ರೀಧರ ಮುಂಡರಗಿ, ಓಂಕಾರಿ, ಮಹಾಂತೇಶ ಕಣವಿ, ವೆಂಕನಗೌಡ, ವಿನಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಬಾಬರಿ ಮಸೀದಿ ಧ್ವಂಸ: ಆಕಸ್ಮಿಕ ಘಟನೆಯಂತೆ- ಆಡ್ವಾಣಿ, ಉಮಾಭಾರತಿಗೆ ಬಿಗ್ ರಿಲೀಫ್

    ಲಕ್ನೋ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಅಂತೀಮ ತೀರ್ಪು ನೀಡಿದ್ದು, ಮಸೀದಿ ಧ್ವಂಸವಾಗಿದ್ದು ಪೂರ್ವನಿಯೋಜಿತವಲ್ಲ, ಅದೊಂದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಹೇಳಿದೆ.

    ಲಕನೌ ಸಿಬಿಐ ವಿಶೇಷ ಕೋರ್ಟನಿಂದ ತೀಪ್ರು ಹೊರಬಿದ್ದಿದ್ದು ಎಲ್ಲ 32 ಆರೋಪಿಗಳು ನಿರ್ದೋಷಿಯಂದು ಆದೇಶ ಹೊರಡಿಸಿದೆ. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲರಿಗೂ ಕ್ಲೀನ್ ಚಿಟ್ ನೀಡಲಾಗಿದೆ.

    ಪ್ರಕರಣದಲ್ಲಿ ಪ್ರಮುಖವಾಗಿ ಎಲ್.ಕೆ.ಆಡ್ವಾಣಿ, ಉಮಾಭಾರತಿ ಸೇರಿದಂತೆ ಎಲ್ಲರಿಗೂ ಕ್ಲೀನ್ ಚಿಟ್ ನೀಡಿ ಸಿಬಿಐ ನ್ಯಾಯಾಧೀಶ ಎಸ್.ಕೆ.ಯಾದವ ಆದೇಶ ನೀಡಿದೆ.

    ಮಸೀದಿ ಧ್ವಂಸಕ್ಕೆ ಕ್ರಿಮಿನಲ್ ಸಂಚು ರೂಪಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದೊಂದು ಆಕಸ್ಮಿಕವಾಗಿ ನಡೆದ ಘಟನೆಯಾಗಿದ್ದರಿಂದ ಎಲ್ಲರಿಗೂ ಕ್ಲೀನ್ ಚಿಟ್ ನೀಡಲಾಗಿದೆ.

  • Exclusive-ಹುಬ್ಬಳ್ಳಿಯಲ್ಲಿ ಶ್ರೀಗಂಧಚೋರರ ಬಂಧನ- ಹೇಗಿತ್ತು ಗೊತ್ತಾ ಕಾರ್ಯಾಚರಣೆ..?

    ಹುಬ್ಬಳ್ಳಿ: ಬೇರೆ ಜಿಲ್ಲೆಯ ತಾಲೂಕೊಂದರಲ್ಲಿ ಶ್ರೀಗಂಧದ ಗಿಡವನ್ನ ಕಡಿದು ಮನೆಯೊಳಗೆ ಮುಚ್ಚಿಟ್ಟುಕೊಂಡು, ಗಿರಾಕಿ ಜೊತೆಗೆ ವ್ಯವಹಾರ ಕುದುರಿಸುತ್ತಿರುವಾಗಲೇ ಪೊಲೀಸರು ದಾಳಿ ನಡೆಸಿ, ಇಬ್ಬರನ್ನೂ ಬಂಧಿಸುವಲ್ಲಿ ಗೋಕುಲ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಹುಬ್ಬಳ್ಳಿ ಸಹದೇವನಗರದ ಸಿದ್ಧಾರೂಢ ಉಪ್ಪಾರ ಹಾಗೂ ಕಿರಣ ಬಸವ ಎಂಬ ಖದೀಮರೇ, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಶ್ರೀಗಂಧದ ಮರವನ್ನ ಕಡಿದುಕೊಂಡು ಮನೆಯಲ್ಲೇ ಶ್ರೀಗಂಧವನ್ನ ಮುಚ್ಚಿಟ್ಟಿದ್ದರು.

    ಹದಿನೈದು ಕೆಜಿ ಶ್ರೀಗಂಧದ ಕಟ್ಟಿಗೆಯನ್ನ ಮಾರಾಟ ಮಾಡಲು ಗಿರಾಕಿಯನ್ನ ಸಂಪರ್ಕಿಸಿದ್ದ ಖದೀಮರು, ಖರೀದಿ ಮಾಡುವವ ಜೊತೆಗೆ ಮಾತುಕತೆ ನಡೆಸುವ ಸಮಯದಲ್ಲಿ ದಾಳಿ ಮಾಡಿದಾಗ, ಮರ ಕಡಿದು ತಂದಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಇಬ್ಬರನ್ನೂ ಬಂಧನ ಮಾಡಿರುವ ಗೋಕುಲ ಠಾಣೆಯ ಪೊಲೀಸರು, ಅವರಿಂದ 15 ಕೆಜಿ ಶ್ರೀಗಂಧವನ್ನ ವಶಕ್ಕೆ ಪಡೆದಿದ್ದಾರೆ.

  • ತವರು ಮನೆಯ ಪ್ರೀತಿ ನೀಡಿದ ಸರಕಾರಿ ಅಧಿಕಾರಿಗಳು: ‘ಆ’ ಗ್ರಾಮದಲ್ಲಿ ತಾಯಿ ಪ್ರೇಮ ಕಂಡ ಬಾಣಂತಿಯರು..

    ಧಾರವಾಡ: ಜಿಲ್ಲೆಯ ಕುಂದಗೊಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಅಪರೂಪದ ಕಾರ್ಯಕ್ರಮವೊಂದು ನಡೆಯಿತು. ಕೋವಿಡ್-19 ಸಮಯದಲ್ಲಿಯೂ ಯಾವುದೇ ರೀತಿಯ ಭಯವಿಲ್ಲದೇ, ಬಾಣಂತಿ ಮಹಿಳೆಯರಿಗೆ ಅದೇನು ಮಾಡಿದ್ರು ಗೊತ್ತಾ..

    ಈ ವೀಡಿಯೋ ನೋಡಿ.. ನೀವೂ ಭಾವುಕರಾಗ್ತೀರಿ..

  • ಬಿಆರ್ ಟಿಎಸ್ ಅವೈಜ್ಞಾನಿಕ: ಬೆಲ್ಲದ ಹೇಳಿಕೆ ಸತ್ಯ.. ಸತ್ಯ.. ಸತ್ಯ.. ಮತ್ತೆ ಬೇರೆಡೆ ಕುಸಿದಿದೆ ಸೇತುವೆ..

    ಧಾರವಾಡ: ಬಿಜೆಪಿಯ ಮಹತ್ವಾಕಾಂಕ್ಷೆಯ ಬಿಆರ್ ಟಿಎಸ್ ಯೋಜನೆಯ ಸ್ಥಿತಿಯನ್ನ ಒಮ್ಮೆ ಸ್ಥಳಕ್ಕೆ ಭೇಟಿ ಕೊಟ್ಟು ನೋಡಬನ್ನಿ. ಒಂದು ಕಡೆ ಬಿದ್ದಿದೆ ಮತ್ತೂ ರಿಪೇರಿಯಾಗುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೊಂದು ಕಡೆ ಕುಸಿದು, ಮತ್ತಷ್ಟು ಆತಂಕ ಮೂಡಿಸುತ್ತಿದೆ.

    ಏನಾಗ್ತಿದೆ ವೀಡಿಯೋ ಇದೆ ನೋಡಿ..

    ಧಾರವಾಡದಿಂದ ಜೋಗೆಲ್ಲಾಪುರಕ್ಕೆ ಹೋಗುವ ಕಡೆ ಮತ್ತೆ ಸೇತುವೆ ಕುಸಿದು ಬೀಳುತ್ತಿದೆ. ಕಳೆದ ವಾರ ಬಿದ್ದಿದ್ದನ್ನ ದುರಸ್ತಿ ಮಾಡಲಾಗುತ್ತಿದೆ. ಆದರೆ, ಮತ್ತೊಂದು ಕಡೆ ಕುಸಿಯುತ್ತಿರುವುದು ಕಾಮಗಾರಿಯ ಬಗ್ಗೆ ಸಂಶಯ ಮೂಡಿಸುತ್ತಿದೆ.

    ಇದು ನಿಮ್ಮದೇ ಪಕ್ಷದ ಮಹತ್ವಾಕಾಂಕ್ಷೆಯ ಯೋಜನೆ. ಈಗಾಗಲೇ ಇದು ಅವೈಜ್ಞಾನಿಕವಾಗಿದೆ ಎಂದು ನಿಮ್ಮದೇ ಪಕ್ಷದ ಶಾಸಕ ಅರವಿಂದ ಬೆಲ್ಲದ ಮುಖ್ಯಮಂತ್ರಿಗಳಿಗೆ ಹೇಳಿ ಬಂದಿದ್ದಾರೆ. ಇದು ಹಾಗೇ ಆಗಿದೆ ಎನ್ನುವುದಕ್ಕೆ ಸಾಕ್ಷಿಗಳು ಸೇತುವೆ ಕುಸಿಯುವ ಮೂಲಕ ಸಿಗುತ್ತಿವೆ..

  • ಹುಬ್ಬಳ್ಳಿ: ಹೈದರಾಬಾದ್ ಬಸ್ ಸಂಚಾರ ಪುನರಾರಂಭ

    ಹುಬ್ಬಳ್ಳಿ: ಕೋವಿಡ್-19 ಲಾಕ್ ಡೌನ್ ಕಾರಣದಿಂದ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿಯಿಂದ ಹೈದರಾಬಾದ್ ಗೆ ಸಾರಿಗೆ ಬಸ್ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ. ಸರ್ಕಾರದ ಮಾರ್ಗದರ್ಶಿ ನಿರ್ದೇಶನಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಬಸ್ಸುಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.ಈ ಬಸ್ಸುಗಳು ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಹಾಗೂ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಾಕರಸಾಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

    ಮೊದಲ ಹಂತದಲ್ಲಿ 1ಎಸಿ ಸ್ಲೀಪರ್(ರಾತ್ರಿ 8-00ಕ್ಕೆ), 1ನಾನ್ ಎಸಿ ಸ್ಲೀಪರ್(ಸಂಜೆ 7-00ಕ್ಕೆ), 1ರಾಜಹಂಸ( ಸಂಜೆ 7-30ಕ್ಕೆ) ಹಾಗೂ 2 ವೇಗದೂತ ಬಸ್ಸುಗಳ (ಬೆಳಿಗ್ಗೆ 7-00 ಮತ್ತು 8-00ಕ್ಕೆ) ಸಂಚಾರವನ್ನು ಆರಂಭಿಸಲಾಗಿದೆ.

    ಬೆಳಿಗ್ಗೆ 7-00ಗಂಟೆಗೆ ಹೊರಡುವ ವೇಗದೂತ ಮತ್ತು ಎಲ್ಲಾ ಐಶಾರಾಮಿ ಬಸ್ಸುಗಳು ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು, ರಾಯಚೂರು, ಮೆಹಬೂಬ ನಗರ, ಝಡ್ ಚರ್ಲಾ ಮಾರ್ಗವಾಗಿ ಸಂಚರಿಸುತ್ತವೆ.

    ಬೆಳಿಗ್ಗೆ 8-00ಗಂಟೆಗೆ ಹೊರಡುವ ವೇಗದೂತ ಬಸ್ಸು ನವಲಗುಂದ, ರೋಣ, ಗಜೇಂದ್ರಗಡ, ಕುಷ್ಟಗಿ, ಸಿಂಧನೂರು, ರಾಯಚೂರು, ಮೆಹಬೂಬ್ ನಗರ, ಝಡ್ ಚರ್ಲಾ ಮಾರ್ಗವಾಗಿ ಸಂಚರಿಸುತ್ತದೆ.

    ಕೋವಿಡ್-19 ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಎಲ್ಲ ಪ್ರಯಾಣಿಕರು ಮಾಸ್ಕ್ ಧರಿಸುವದು ಕಡ್ಡಾಯವಾಗಿರುತ್ತದೆ. ಬಸ್ಸಿನಲ್ಲಿ ಬ್ಲಾಂಕೆಟ್ ಮತ್ತು ನೀರಿನ ಬಾಟಲಿಗಳನ್ನು ನೀಡುವುದಿಲ್ಲ. ಎಲ್ಲಾ ಬಸ್ಸುಗಳಿಗೆ ಆನ್ ಲೈನ್ ಮತ್ತು ಮುಂಗಡ ಬುಕ್ಕಿಂಗ್ ಕೌಂಟರುಗಳ ಮೂಲಕ ಆಸನಗಳನ್ನು ಕಾಯ್ದಿರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ.

    ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ವೋಲ್ವೋ ಬಸ್ ಸಂಚಾರ ಆರಂಭಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.