Category: ನಮ್ಮೂರು

  • ಧಾರವಾಡದಲ್ಲಿಂದು 232 ಪಾಸಿಟಿವ್- 118 ಗುಣಮುಖ: 4ಸೋಂಕಿತರು ಸಾವು

    ಧಾರವಾಡದಲ್ಲಿಂದು 232 ಪಾಸಿಟಿವ್- 118 ಗುಣಮುಖ: 4ಸೋಂಕಿತರು ಸಾವು

    ಧಾರವಾಡದಲ್ಲಿಂದು 232 ಪಾಸಿಟಿವ್- 118 ಗುಣಮುಖ: 4ಸೋಂಕಿತರು ಸಾವು

    ಧಾರವಾಡ ಜಿಲ್ಲೆಯಲ್ಲಿ 232 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ 16917 ಪಾಸಿಟಿವ್ ಸಂಖ್ಯೆಗಳಾಗಿವೆ. ಜಿಲ್ಲೆಯಲ್ಲಿ ಇಂದು 118 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ 13847 ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೊರೋನಾ ಸೋಂಕಿನಿಂದ 479 ಸಾವಿಗೀಡಾಗಿದ್ದಾರೆ. ಇನ್ನುಳಿದ ಮಾಹಿತಿ ಇಲ್ಲಿದೆ ನೋಡಿ..

  • ಎಲ್ಲ ಲಾಬಿಗಳ ನಡುವೆ ‘ಕೆ.ಬಿ.ಗುಡಸಿ’ ಕವಿವಿ ‘ಕುಲಪತಿ’ ನೇಮಕ

    ಧಾರವಾಡ: ಹಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ಇಲ್ಲಿನ ಕರ್ನಾಟಕವ ವಿಶ್ವವಿದ್ಯಾಲಯದ ಖಾಯಂ ಕುಲಪತಿಯ ಆಯ್ಕೆಗೆ ಇಂದು ತೆರೆ ಬಿದ್ದಿದೆ. ಹಲವು ಕುತೂಹಲಗಳಿಂದ ಕೂಡಿದ್ದ ಕುಲಪತಿಗಳ ಆಯ್ಕೆ ಒಂದಿಲ್ಲೊಂದು ವಿವಾದದಿಂದಾಗಿ ಹಿಂದುಳಿದಿತ್ತು.

    ಜಾತಿಯ ಸೋಂಕು, ಆಯ್ಕೆಯಲ್ಲಿ ಲಾಬಿ ರಾಜಕಾರಣ ಸೇರಿದಂತೆ ಖಾಯಂ ಕುಲಪತಿಯ ನೇಮಕ ಕಗ್ಗಂಟಾಗಿಯೇ ಉಳಿದಿತ್ತು. ಆದರೆ ಇದೀಗ ರಾಜ್ಯಪಾಲರ ಕಛೇರಿಯಿಂದ ಹೋರ ಬಿದ್ದಿದೆ ಎನ್ನಲಾದ ಆದೇಶ ಪ್ರತಿಯೊಂದರ ಅನ್ವಯ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಹಳ ಆಯ್ಕೆಗೆ ನೇಮಿಸಿದ್ದ ಆಯ್ಕೆ ಸಮಿತಿಯ ವರದಿಯನ್ನು ಆಧರಿಸಿ ಇಂದು ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೋ. ಕೆ.ಬಿ.ಗುಡಸಿ ಯವರನ್ನು ಮುಂದಿನ ನಾಲ್ಕು ವರ್ಷಗಳ ಕಾಲ ಕವಿವಿಯ ಕುಲಪತಿಯನ್ನಾಗಿ  ನೇಮಿಸಿರುವ ಕುರಿತು ಆದೇಶ ಹೊರಬಂದಿದೆ.

    ಈ ಹುದ್ದೆಗೆ ಒಟ್ಟು 96 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಅರ್ಹತೆಗಳನ್ನು ಆಧರಿಸಿ 25 ಜನರನ್ನು ಅನರ್ಹರೆಂದು ತಿರಸ್ಕರಿಸಲಾಗಿತ್ತು. ಉಳಿದವರಲ್ಲಿ 3 ಜನರ ಹೆಸರನ್ನು  ಶೋಧನಾ ಸಮಿತಿಯು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಅಂತಿಮವಾಗಿ ಕಳೆದ 15 ತಿಂಗಳುಗಳಿಂದ ಖಾಲಿ ಇರುವ ಕವಿವಿಯ ಕುಲಪತಿ ಕುರ್ಚಿಗೆ ಹಿಡಿದಿದ್ದ ಗ್ರಹಣ ಇಂದು ಸರಿದಂತಾಗಿದೆ.

    ಪ್ರೊ. ಕೆ.ಬಿ.ಗುಡಸಿ ಪ್ರಸ್ತುತ ಕವಿವಿ ಆವರಣದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾಗಿದ್ದರು. ತಮ್ಮ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ನಾಡಿನ ಜನರ ಮೆಚ್ಚುಗೆಯನ್ನು ಗಳಿಸಿದ್ದರು.

    ವಿಜ್ಞಾನ ಕೇಂದ್ರಕ್ಕೆ ಜನಪ್ರಿಯತೆಯನ್ನು ತಂದುಕೊಟ್ಟ ಪ್ರೊಫೆಸರ್

    ಸಮರ್ಥ ಆಡಳಿತಗಾರರಾಗಿ ಅವರು ವಿಜ್ಞಾನ ಕೇಂದ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರು ಬಂದ ನಂತರ ಜನ ಸಾಮಾನ್ಯರಿಗೆ ವಿಜ್ಞಾನವನ್ನು ತಲುಪಿಸುವ ಕಾರ್ಯಕ್ಕೆ ಬಲ ದೊರೆತಿತ್ತು.
    ಸ್ವತಃ ಒಬ್ಬ ವಿಜ್ಞಾನಿಯಾಗಿದ್ದರೂ ತಮ್ಮ ಈ ಕಾರ್ಯಾವಧಿಯಲ್ಲಿ ಅವರು ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಶಿಕ್ಷಕರು, ವಿದ್ಯಾರ್ಥಿಗಳ ಜೊತೆ ಸೇರಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕೀರ್ತಿಯನ್ನು ಬಾನೆತ್ತರಕ್ಕೆ ಕೊಂಡೊಯ್ದಿದ್ದರು.
    ಅವರು ಇತ್ತಿಚಿಗೆ ಆಯೋಜಿಸಿದ್ದ ವಿಜ್ಞಾನ ಸಮ್ಮೇಳನ , ಸೇರಿದಂತೆ ವಿಜ್ಞಾನ ಮತ್ತು ಧರ್ಮದ ಕುರಿತು ಆಯೋಜಿಸಿದ್ದ ಚಿಂತನ ಮಂಥನ ಕಾರ್ಯಕ್ರಮಗಳ ಮೂಲಕ ಪ್ರಾದೇಶಿಕ ವಿಜ್ಞಾನ ಕೇಂದ್ರ ಧಾರವಾಡದ ಹೆಸರನ್ನು ನಾಡಿನೆಲ್ಲೆಡೆ ಪಸರಿಸುವಂತೆ ಮಾಡಿದ್ದರು. ಅವರ ಆಡಳಿತ ಶೈಲಿ ಅವರ ವಾಕ್ ಚಾತುರ್ಯ, ಅವರ ವಿಶಿಷ್ಟ ಕನ್ನಡ ಮಾತನಾಡುವ ಪರಿ, ಎಲ್ಲವೂ ವಿಜ್ಞಾನ ಕೇಂದ್ರಕ್ಕೆ ಬೇಟಿ ನೀಡಿದವರನ್ನು ಆಕರ್ಶಿಸಿದ್ದವು.
    ಪ್ರೊ. ಗುಡಸಿ ಅವರ ನೇತ್ರತ್ವದಲ್ಲಿ ವಿಜ್ಞಾನ ಕೇಂದ್ರದಲ್ಲಾದ ಬದಲಾವಣೆಗಳು ಮತ್ತು ನಾವೀನ್ಯತೆಯಿಂದಾಗಿ ಧಾರವಾಡದಲ್ಲಿ ಮತ್ತೊಂದು ಪ್ರವಾಸಿಗರನ್ನು ಆಕರ್ಶಿಸುವ ತಾಣವಾಗಿ ವಿಜ್ಞಾನ ಕೇಂದ್ರ ಮನ್ನಣೆಗಳಿಸಿರುವುದು ವಿಶೇಷ.

    ಇಂದು ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಡಾ.ಕೆ ಬಿ ಗೂಢಸಿ ಅವರು ನೇಮಕ ಆಗಿದ್ದಾರೆ…ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇರುವ `#ಅಮರ್_ಜವಾನ’ ಸ್ಮಾರಕಕ್ಕೆ ನಮನ ಸಲ್ಲಿಸುವ ಮುಖಾಂತರ ಅಧಿಕಾರ ವಹಿಸಿಕೊಂಡು #ರಾಷ್ಟ್ರೀಯತೆ ಮೆರೆದ ಕರ್ನಾಟಕ ರಾಜ್ಯದ ಮೊದಲ ಕುಲಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.. ಸಿಂಡಿಕೇಟ್ ಸದಸ್ಯರಾದ ರವಿ ಮಾಳಗೇರ, ಅಧ್ಯಕ್ಷ ಅಮಿತ್ ಶಿಂಧೆ, ಡಾ.ಶಿವು ಭಜಂತ್ರಿ , ಡಾ. ಕಿರಣ್ ಹೊಂಬಾಳ, ಡಾ. ಸಂತೋಷ್ ಉಪಸ್ಥಿತರಿದ್ದರು…

                              ಧನ್ಯವಾದಗಳೊಂದಿಗೆ

    ಮಂಜು ಹೊಂಗಲದ
    ಗೌರವಾಧ್ಯಕ್ಷರು,
    ಕರ್ನಾಟಕ ವಿಶ್ವವಿದ್ಯಾಲಯ
    ಸಂಶೋಧನಾ ವಿದ್ಯಾರ್ಥಿಗಳ ಸಂಘ
    ಧಾರವಾಡ

  • ಸೋಮವಾರ ಬಂದ್ ಹಿನ್ನೆಲೆ: ಬಿಎ/ಬಿಕಾಂ ಪರೀಕ್ಷೆ ಮುಂದೂಡಿಕೆ: ಕವಿವಿ

    ಧಾರವಾಡ: ಸೋಮವಾರ ರೈತರ ಪ್ರತಿಭಟನೆ ಇರುವುದರಿಂದ ಅಂದು ನಡೆಯಬೇಕಾಗಿದ್ದ ಸ್ನಾತಕ ಪರೀಕ್ಷೆಗಳನ್ನ ಮುಂದೂಡಲಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ತಿಳಿಸಿದೆ.

    ಈ ಬಗ್ಗೆ ಸುತ್ತೋಲೆಯನ್ನ ಹೊರಡಿಸಿರುವ ಕವಿವಿ, ಕರ್ನಾಟಕ ರಾಜ್ಯದ ವಿವಿಧ ರೈತ ಸಂಘಟನೆಗಳು ಸೆಪ್ಟಂಬರ್ 28ರಂದು ರಸ್ತೆ ತಡೆ ಹಾಗೂ ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ಏರುಪೇರಾಗುವ ಸಾಧ್ಯತೆಯಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುವ ಸಂಭವಿದೆಯಾದ್ದರಿಂದ ಅಂದು ನಡೆಯಬೇಕಿದ್ದ ಸ್ನಾತಕ/ದೂ ಸಂಪರ್ಕ ಶಿಕ್ಷಣದಡಿ ಬರುವ ಬಿ.ಎ/ಬಿಕಾಂ ಪರೀಕ್ಷೆಗಳನ್ನ ಮುಂದೂಡಲಾಗಿದೆ ಎಂದು ತಿಳಿಸಿದೆ.

    ಮುಂದೂಡಿದ ವಿಷಯದ ಪರೀಕ್ಷೆಗಳ ದಿನಾಂಕವನ್ನ ಸಧ್ಯದಲ್ಲೇ ತಿಳಿಸಲಾಗುವುದೆಂದು ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯ ಮಾಪಾನ ವಿಭಾಗ ತಿಳಿಸಿದೆ.

  • ಕುಂದಗೋಳದ ಬಳಿ ಕಾರು-ಬಸ್ ಡಿಕ್ಕಿ-ಇಬ್ಬರಿಗೆ ಗಂಭೀರ ಗಾಯ

    ಧಾರವಾಡ: ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಹೊರಟಿದ್ದ ಬಸ್ ಗೆ ಹಾಗೂ ಕುಂದಗೋಳದಿಂದ ಬರುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

    ಕಾರಿನ ಮುಂಭಾಗಕ್ಕೆ ಬಸ್ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದವರಿಗೆ ತೀವ್ರ ಥರದ ಗಾಯಗಳಾಗಿದ್ದು, ಇಬ್ಬರನ್ನೂ ಕಿಮ್ಸಗೆ ರವಾನೆ ಮಾಡಲಾಗಿದೆ.

    ಯರೇಬೂದಿಹಾಳ ಕ್ರಾಸ್ ಬಳಿ ನಡೆದ ಘಟನೆಯಲ್ಲಿ ಗಾಯಗೊಂಡವರ ಬಗ್ಗೆ ಹೆಚ್ಚಿನ ಮಾಹಿತಿ ಬರಬೇಕಿದ್ದು, ಪ್ರಕರಣ ಕುಂದಗೋಳ ಠಾಣೆಯಲ್ಲಿ ದಾಖಲಾಗಿದೆ. ಬಸ್ ಚಾಲಕನಿಂದ ಅಪಘಾತದ ಬಗ್ಗೆ ಮಾಹಿತಿಯನ್ನ ಪಡೆಯಲಾಗುತ್ತಿದೆ.

  • “ಚಹಾ” ಮಾರೋ ವೇಷ- ಕಾಲಿ”ಮಿರ್ಜಿ” ಕಾರ್ಯಾಚರಣೆ- ಮಾರೋರ ರಾಬರಿ ಬಯಲು..!

    ಹುಬ್ಬಳ್ಳಿ: ನೀವೂ ಟ್ರೇನನಲ್ಲಿ ಹೋಗುತ್ತಿದ್ದರೇ ಚಾ.. ಚಾ.. ಚಾ.. ಎಂದು ಧ್ವನಿಯನ್ನ ಕೇಳಿಯೇ ಇರುತ್ತೀರಿ. ಹಾಗೇ ಬಂದು ಹೋಗುವವರೇ ನಿಮ್ಮ ಬ್ಯಾಗನ್ನೂ ಎಗರಿಸಿ ಹೋಗುತ್ತಿದ್ದರೆಂಬ ಸತ್ಯವನ್ನ ರೇಲ್ವೆ ಪೊಲೀಸರು ಬಯಲು ಮಾಡಿದ್ದು, ಆರೋಪಿಗಳಿಬ್ಬರನ್ನ ಬಂಧನ ಮಾಡಿದ್ದಾರೆ.

    ಚಲಿಸುವ ರೇಲ್ವೆಯಲ್ಲಿ ಚಹಾ ಮಾರಾಟ ಮಾಡುತ್ತಲೇ ಮಹಿಳೆಯರನ್ನ ಬ್ಯಾಗನ್ನ ಕದ್ದು ಹೊರಗೆ ಎಸೆದು ಕಳ್ಳತನ ಮಾಡುತ್ತಿದ್ದ ಮಂಟೂರ ರಸ್ತೆಯ ಯೋಹಾನಕುಮಾರ ಪ್ರಾನ್ಸಿಸ್ ಕೂಂದರ್ತಿ ಹಾಗೂ ಪ್ರೇಮಕುಮಾರ ಅಲಿಯಾಸ್ ಚಿಂಟುವನ್ನ ಬಂಧನ ಮಾಡಲಾಗಿದೆ.

    ಬಂಧಿತರಿಂದ ಸುಮಾರು ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನ ಹಾಗೂ ಮೊಬೈಲ್ ಗಳನ್ನ ವಶಕ್ಕೆ ಪಡೆಯಲಾಗಿದೆ.

    ಚಾಲಾಕಿ ಕಳ್ಳರು, ಮಹಿಳೆಯರ ಬ್ಯಾಗನ್ನ ಕದ್ದು ಹೊರಗೆ ಒಗೆದು ಆ ಜಾಗವನ್ನ ಗುರುತು ಮಾಡಿಕೊಳ್ಳುತ್ತಿದ್ದರು. ನಂತರ ಮುಂಬರುವ ನಿಲ್ದಾಣದಲ್ಲಿಳಿದು ನಡೆದುಕೊಂಡು ಬಂದು ಬ್ಯಾಗಿನಲ್ಲಿದ್ದ ಎಲ್ಲವನ್ನೂ ದೋಚಿ, ಬ್ಯಾಗನ್ನ ಅಲ್ಲಿಯೇ ಒಗೆದು ಹೋಗುತ್ತಿದ್ದರು.

    ರೇಲ್ವೆ ಠಾಣೆಯ ಇನ್ಸಪೆಕ್ಟರ್ ಜೆ.ಎಂ.ಕಾಲಿಮಿರ್ಚಿ, ಪಿಎಸೈ ಎಂ.ಸತ್ಯಪ್ಪ, ಸಿಬ್ಬಂದಿಗಳಾದ ಪ್ರವೀಣ ಪಾಟೀಲ, ರಮೇಶ ಲಮಾಣಿ, ಸುಭಾಸ ದಳವಾಯಿ, ರಮೇಶಕುಮಾರ ಕಟಗಿ, ಸುಭಾಸ ದಳವಾಯಿ, ರಾಯಪ್ಪ ಗುಂಡಗಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

  • ನಾಳೆ ಬಂದ್ : ಅವಳಿನಗರದಲ್ಲಿ ಪೊಲೀಸರ ಕಟ್ಟೇಚ್ಚರ: ಕಿಡಗೇಡಿಗಳಿಗೆ ಎಚ್ಚರಿಕೆ..

    ಹುಬ್ಬಳ್ಳಿ: ವಿವಿಧ ಕನ್ನಡಪರ, ರೈತಪರ, ದಲಿತಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು “ಕರ್ನಾಟಕ ಬಂದ್” ಕರೆ ನೀಡಿದ್ದು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕಟ್ಟೇಚ್ಚರ ವಹಿಸಿದೆ.

    ರೈತರ ಹೆಸರಿನಲ್ಲಿ ಕಿಡಿಗೇಡಿತನ ಮಾಡುವಂತಹವರ ಮೇಲೆ ನಿಗಾ ವಹಿಸಿದ್ದೇವೆ ಎಂದು ಹೇಳಿಕೊಂಡಿರುವ ಪೊಲೀಸ್ ಪ್ರಕಟಣೆ, ಹುಬ್ಬಳ್ಳಿ-ಧಾರವಾಡ ಅವಳಿನಗರದ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಅಧಿಕಾರಿ, ಸಿಬ್ಬಂದಿಗಳನ್ನು ಬಂದೋಬಸ್ತ ನಿಯೋಜನೆ ಮಾಡಿದ್ದಾರಂತೆ.

    ಕೆಎಸ್‌ಆರ್‌ಪಿ ಪ್ಲಟೂನ್‌ಗಳು, ಸಿಎಆರ್ ಪಾರ್ಟಿಗಳು, ಅಗ್ನಿಶಾಮಕ ವಾಹನಗಳು

    ಹಾಗೂ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ವಾಹನಗಳು, ಹೈ-ವೇ ಪೆಟ್ರೋಲಿಂಗ್ ವಾಹನಗಳನ್ನು ಬಂದೋಬಸ್ತ ಕರ್ತವ್ಯಕ್ಕೆ  ನಿಯೋಜನೆ ಮಾಡಿರುವ ಬಗ್ಗೆ ಮಾಹಿತಿಯನ್ನ ನೀಡಿದ್ದಾರೆ.

    ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಿದ್ದಲ್ಲಿ ಅಂತವರ ಮೇಲೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂಬುದನ್ನೂ ಪ್ರಕಟಣೆಯಲ್ಲಿ ನಮೂದು ಮಾಡಿದ್ದಾರೆ.

  • ಧಾರವಾಡ: “ಬಂದ್” DSS-ACHR-ಜಯ ಕರ್ನಾಟಕ ಬೆಂಬಲ

    ಧಾರವಾಡ: ರೈತವಿರೋಧಿ ಕಾಯ್ದೆಗಳನ್ನು ಬಲವಂತವಾಗಿ ಹೇರುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಡಿ.ಎಸ್.ಎಸ್ (ಅಂಬೇಡ್ಕರ ವಾದ), ಜಯ ಕರ್ನಾಟಕ ಸಂಘಟನೆ ಹಾಗೂ ಎ.ಸಿ.ಎಚ್.ಆರ್  ಸಂಘಟನೆಗಳ  ಬೆಂಬಲ ನೀಡಿವೆ.

    ರೈತರು ಈ ದೇಶದ ಅನ್ನದಾತರು ಇಡೀ ದೇಶಕ್ಕೆ ಹೆಮ್ಮೆಯ ಪ್ರಜೆಗಳು.  ಜೈ ಜವಾನ್ ಜೈ ಕಿಸಾನ್ ಎಂಬ ಹಿರಿಯರ ಉಕ್ತಿಯಂತೆ ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ದುಡಿದು ಸುಣ್ಣವಾಗುವ ಮುಗ್ದ ಜೀವಿ ಇವರು.

    ಸಮಸ್ತ ದೇಶದ ಕೋಟ್ಯಂತರ ಜನರ ಹೊಟ್ಟೆ ತುಂಬಿಸುವ ರೈತರ ಭಾವನೆಗಳನ್ನು ಹತ್ತಿಕ್ಕುವ ವಿವಾದಾತ್ಮಕ ವಿಧೇಯಕಗಳನ್ನು ಬಲವಂತವಾಗಿ ಹೇರಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿಲುವನ್ನು ತೀವ್ರವಾಗಿ ವಿರೋಧಿಸಿ ನಗರದ ಆಲೂರ ವೆಂಕಟರಾವ್ ವೃತ್ತದಲ್ಲಿ ನಾಳೆ ಬೆಳಿಗ್ಗೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಿವೆ.

    ಉದ್ದೇಶಿತ ಪ್ರತಿಭಟನೆಯ ನೇತೃತ್ವವನ್ನು ಲಕ್ಷ್ಮಣ ಈ ದೊಡಮನಿ, ಸುಧೀರ ಮುಧೋಳ, ಬಸವರಾಜ ಆನೇಗುಂದಿ, ನಾರಾಯಣ ಮಾದರ, ಪರಶುರಾಮ ಕೊರವರ, ಹನುಮಂತ ಮೊರಬ, ಶಬ್ಬೀರ ಅತ್ತಾರ, ಅಂದರಖಂಡಿ, ಅಲ್ತಾಫ ಜಾಲೇಗಾರ, ಕಿಶೋರ ಕಟ್ಟಿ, ಭಾಸ್ಕರ್ ಭೋಗಲೆ, ಡಿ.ಟಿ. ಚಲವಾದಿ, ಚಂದ್ರು ಅಂಗಡಿ, ಮಂಜು ಸುತಗಟ್ಟಿ, ಸಿಡ್ಲೆಪ್ಪ ಹೆಗಡೆ, ಬಸವರಾಜ ಮಾದರ, ಪ್ರಕಾಶ ಹೂಗಾರ, ರಾಮು ಹರಿಜನ, ಕರಿಯಪ್ಪ ಮಾಳಗಿಮನಿ, ಪಂಚಯ್ಯ ಪೂಜಾರ ಮುಂತಾದವರು ವಹಿಸಲಿದ್ದಾರೆ.

  • ನಾಳೆ ಹುಬ್ಬಳ್ಳಿ-ಧಾರವಾಡ ಬಂದ್- ಬೆಂಬಲ ನೀಡಿದ್ದು ಯಾರು ಯಾರೂ ಗೊತ್ತಾ.. ?

    ಹುಬ್ಬಳ್ಳಿ: ಎಪಿಎಂಸಿಯಲ್ಲಿಯ ವ್ಯಾಪಾರಸ್ಥರ ಸಂಘದ ಸಭಾ ಭವನದಲ್ಲಿ ನಡೆದ ರೈತ, ಕಾರ್ಮಿಕ ಕನ್ನಡಪರ, ದಲಿತ ಹಾಗೂ ಜನಪರ ಸಂಘಟನೆಗಳ ಸಮಾವೇಶವು ಎಪಿಎಂಸಿ, ಭೂ ಸುಧಾರಣಾ, ಕಾರ್ಮಿಕ ಕಾನೂನುಗಳು ಸೇರಿದಂತೆ ವಿವಿಧ ಜನವಿರೋಧಿ ಕಾನೂನುಗಳ ತಿದ್ದುಪಡಿ ವಿರೋಧಿಸಿ ಸೆಪ್ಟೆಂಬರ್ 28 ರಂದು ಕರೆ ನೀಡಲಾದ ಕರ್ನಾಟಕ ಬಂದ್ ಕರೆಯನ್ನು ಹುಬ್ಬಳ್ಳಿ ಧಾರವಾಡದಲ್ಲಿ ಯಶಸ್ವಿಗೋಳಿಸಲು 50ಕ್ಕೂ ಹೆಚ್ಚು ಸಂಘಟನೆ ಸರ್ವಾನುಮತದ ತೀರ್ಮಾನ ಮಾಡಿದವು.

    ಕರ್ನಾಟಕ ವಾಣಿಜ್ಯೋಧ್ಯಮ ಸಂಸ್ಥೆ, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಕಿಸಾನ್ ಸೆಲ್, ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ, ಕರ್ನಾಟಕ ಕಳಸಾ ಬಂಡೂರಿ ಹೋರಾಟ ಸಮಿತಿ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಸಿಐಟಿಯು, ಎಐಟಿಯುಸಿ, ಟಿಯುಸಿಸಿ, ವಿಮಾ ನೌಕರರ ಸಂಘ, ಗ್ರಾಮೀಣ ಬ್ಯಾಂಕ ನೌಕರರ ಸಂಘ. ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಕರ್ನಾಟಕ ಸಂಗ್ರಾಮ ಸೇನೆ, ಅಟೋ ಚಾಲಕರ ಸಂಘಗಳು, ಪೌರ ಕಾರ್ಮಿಕರ ಸಂಘ, ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘ, ಬೀದಿಬದಿ ವ್ಯಾಪಾರಸ್ಥರ ಸಂಘ, ಹುಬ್ಬಳ್ಳಿ ನಾಗರಿಕ ಹೋರಾಟ ಸಮಿತಿ, ಜೈ ಭೀಮ ಸೇನೆ, ಕರ್ನಾಟಕ ದಲಿತ ವಿಮೋಚನಾ ಸಮಿತಿ, ಸಂವಿಧಾನ ಸುರಕ್ಷಾ ಸಮಿತಿ, ಎಪಿಎಂಸಿ ವ್ಯಾಪಾರಸ್ಥರ ಸಂಘಗಳು, ಜಮಾತೆ ಇಸ್ಲಾಮ್, ಸಮುದಾಯ ಸಾಂಸ್ಕೃತಿಕ ಸಂಘಟನೆ, ರಂಗಭೂಮಿ ಗೊಂಬೆ ಆಟದ ಸಂಸ್ಥೆ, ಮುಂತಾದ ಜನಪರ ಸಂಘಟನೆಗಳು ಹಾಗೂ ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ, ಸಿಪಿಐ, ಆಮ್ ಆದ್ಮಿ ಪಕ್ಷಗಳು ಹುಬ್ಬಳ್ಳಿ ಧಾರವಾಡ ಬಂದ್ ಬೆಂಬಲಿಸಲಿವೆ.

    ಕೃಷಿ ಕ್ಷೇತ್ರವನ್ನು ಕಾರ್ಪೋರೇಟ ವಲಯಕ್ಕೆ ಒತ್ತೆ ಇಡುವ, ಲೂಟಿಗೆ ಅವಕಾಶ ಮಾಡಿಕೊಡುವ, ಕಾರ್ಮಿಕರನ್ನು ನವಗುಲಾಮಗಿರಿಗೆ ತಳ್ಳಲಿರುವ, ಸಾರ್ವಜನಿಕರ ಮೇಲೆ ತೀವ್ರ ದಾಳಿ ನಡೆಸಲಿರುವ ಜನವಿರೋಧಿ ಕಾನೂನು ತಿದ್ದುಪಡಿಗಳನ್ನು ವಾಪಸ್ಸ ಪಡೆಯಲು ಸಮಾವೇಶ ಕೇಂದ್ರ ರಾಜ್ಯ ಸರಕಾರಗಳನ್ನು ಒತ್ತಾಯಿಸಿತಲ್ಲದೇ ಇದರ ವಿರುದ್ದ ತೀವ್ರವಾದ ಚಳುವಳಿಯನ್ನು ನಡೆಸಲು ತೀರ್ಮಾನಿಸಿತು.

    ಖ್ಯಾತ ಭಾಷಾ ತಜ್ಞ ಪದ್ಮಶ್ರೀ ಡಾ. ಜಿ.ಎನ್.ದೇವಿ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ಕಾರ್ಮಿಕ ಮುಖಂಡ ಮಹೇಶ ಪತ್ತಾರ ಪ್ರಸ್ತಾವಣೆಯನ್ನು ಸಲ್ಲಿಸಿದರು. ಪ್ರಸ್ತಾವಣೆಯ ಮೇಲೆ ವಿವಿಧ ಸಂಘಟನೆಗಳ ಮುಖಂಡರಾದ ಮಾಜಿ ಶಾಸಕ ಎನ್.ಎಚ್.ಕೊನರೆಡ್ಡಿ, ವಾಣಿಜ್ಯೋಧ್ಯ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲಡ್ಡದ, ಎಪಿಎಂಸಿ ಅಧ್ಯಕ್ಷ ಸಹದೇವಪ್ಪ, ಸುಡೇಕನವರ, ಮಾಜಿ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಅಬ್ದುಲ್ ವಹಾಬ ಮುಲ್ಲಾ, ಕಾಂಗ್ರೆಸ್ ಮುಖಂಡರಾದ ಪಿ.ಎಚ್.ನೀರಲಕೇರಿ, ಅನ್ವರ ಮುಧೋಳ, ಸಂವಿಧಾನ ಸುರಕ್ಷಾ ಸಮಿತಿ ಸಂಚಾಲಕ ಅಶ್ರಫ್ ಅಲಿ ಬಸೀರ, ಗ್ರಾಮೀಣ ಕೂಲಿಕಾರರ ಸಂಘಟನೆಯಿಂದ ಶಾರದಾ ದಾಬಡೆ, ರೈತ ಮುಖಂಡರಾದ ಕಲ್ಮೇಶ ಲಿಗಾಡಿ, ಶೋಭಾ ಚಲವಾದಿ, ಬಿ.ಎಸ್.ಸೊಪ್ಪಿನ,  ಸಿದ್ದು ತೇಜಿ, ಶಿವಣ್ಣ ಹುಬ್ಬಳ್ಳಿ, ಕಾರ್ಮಿಕ ಮುಖಂಡರಾದ ಪುಂಡಲೀಕ ಬಡಿಗೇರ, ವಿಜಯ ಗುಂಟ್ರಾಳ, ಬಾಬಾಜಾನ ಮುಧೋಳ, ಗುರುಸಿದ್ದಪ್ಪ ಅಂಬಿಗೇರ, ಬಿ.ಐ.ಈಳಿಗೇರ ಕನ್ನಡಪರ ಸಂಘಟನೆಗಳಿಂದ ಅಮೃತ ಇಜಾರಿ,  ಸಂಜು ದುಮ್ಮಕನಾಳ , ಮುತ್ತು ಬೆಳ್ಳಕ್ಕಿ, ದಲಿತ ಸಂಘಟನೆಗಳಿಂದ ಸುರೇಶ ಖಾನಾಪೂರ, ಲಕ್ಷ್ಮಣ ಬಕ್ಕಾಯಿ,  ಆಮ್ ಆದ್ಮೀ ಪಕ್ಷದ ಸಂತೋಷ ನರಗುಂದ, ವ್ಯಾಪಾರಸ್ಥರ ಸಂಘದ ಬಸವರಾಜ ಏಕಲಾಸಪೂರ, ಗಂಗನಗೌಡ ಪಾಟೀಲ, ಎ.ಎ.ಅತ್ತಾರ, ಸಲೀಂ ಬ್ಯಾಹಟ್ಟಿ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿ ಬೆಂಬಲಿಸಿ  ಮಾತನಾಡಿದರು. ಶಂಕರ ಹಲಗತ್ತಿ ಕಾರ್ಮಯಕ್ರಮ ನಿರೂಪಿಸಿದರು. ಎಪಿಎಂಸಿ ಸದಸ್ಯ ಜಗನ್ನಾಥಗೌಡ ಸಿದ್ದನಗೌಡರ, ಯುವ ಕಾಂಗ್ರಸ್ ಮುಖಂಡ ರಜತ ಉಳ್ಳಾಗಡ್ಡಿಮಠ, ರಂಗಕರ್ಮಿ ಪ್ರಕಾಶ ಗರೂಡ,  ವಿಶ್ರಾಂತ ಕುಲಪತಿ ವಿ.ಬಿ.ಮಾಗನೂರ, ಅಬ್ದುಲ್ ರೇಹಮಾನ ಮುಲ್ಲಾ, ರಮೇಶ ಭೂಸ್ಲೆ, ವೀರಣ್ಣ ನೀರಲಗಿ, ಕರಿಯಪ್ಪ ದಳವಾಯಿ, ಮಂಜುನಾಥ ಹುಜರಾತಿ ಕರಿಯಪ್ಪ ಗಿರಿಸಾಗರ, ಕತಾಲಸಾಬ ಮುಲ್ಲಾ, ಬಸವಣ್ಣೆಪ್ಪ ನೀರಲಗಿ, ವಿನಾಯಕ ಗಾಳಿವಡ್ಡರ, ಚಿದಾನಂದ ಸವದತ್ತಿ, ನಿಂಗನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

  • ಧಾರವಾಡದಲ್ಲಿಂದು 139 ಪಾಸಿಟಿವ್ –171 ಗುಣಮುಖ- 2ಸೋಂಕಿತರ ಸಾವು

    ಧಾರವಾಡದಲ್ಲಿಂದು 139 ಪಾಸಿಟಿವ್ –171 ಗುಣಮುಖ- 2ಸೋಂಕಿತರ ಸಾವು

    ಧಾರವಾಡದಲ್ಲಿಂದು 139 ಪಾಸಿಟಿವ್ –171 ಗುಣಮುಖ- 2ಸೋಂಕಿತರ ಸಾವು

    ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತೆ 139 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಪಾಸಿಟಿವ್ ಸಂಖ್ಯೆ 17056ಕ್ಕೇರಿದೆ. ಇಂದು 171 ಸೋಂಕಿತರು ಗುಣಮುಖರಾಗಿದ್ದು, ಈ ಮೂಲಕ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 14018 ಕ್ಕೇರಿದೆ.

    ಜಿಲ್ಲೆಯಲ್ಲಿ ಒಟ್ಟು 481 ಸೋಂಕಿತರು ಕೊರೋನಾ ಪಾಸಿಟಿವ್ ನಿಂದ ಸಾವಿಗೀಡಾಗಿದ್ದಾರೆ.

    ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ

  • ಅರವಿಂದ ಬೆಲ್ಲದ್ರೇ, ಮೊಸಳೆ ಕಣ್ಣೀರು ಹಾಕಬೇಡಿ: ಆಮ್ ಆದ್ಮಿ ಪಾರ್ಟಿ

    ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ  ಮಹತ್ವಾಕಾಂಕ್ಷೆಯ ಬಿಆರ್ ಟಿಎಸ್ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವುದು ಸೋಜಿಗ ಮೂಡಿಸಿದೆ. ಈ ಯೋಜನೆಯ ಬಗ್ಗೆ ಮೊದಲು ಸಾರ್ವಜನಿಕರು ಮಾತನಾಡುತ್ತಿದ್ದರು. ಇದೀಗ ಬಿಜೆಪಿ ಶಾಸಕರೇ ಮಾತನಾಡುತ್ತಿರುವುದನ್ನೇ ನೋಡಿದರೇ, ಬಿಆರ್ ಟಿಎಸ್ ಕಳಪೆ ಕಾಮಗಾರಿ ಬಗ್ಗೆ ಅನುಮಾನ ಕಾಡದೇ ಇರದು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕ ಹೇಳಿದೆ.

    ಶಾಸಕ ಅರವಿಂದ ಬೆಲ್ಲದ ಅವರು ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ಸತತ 2 ಬಾರಿ ಆಯ್ಕೆ ಆಗಿದ್ದಾರೆ. ಆದರೆ ಬಿಆರ್ ಟಿಎಸ್ ಕಾಮಗಾರಿ ಪ್ರಾರಂಭವಾದಾಗ ಇದರ ಬಗ್ಗೆ ಮಾತಾಡಬೇಕಿತು. ಅಲ್ಲದೇ ಕಳಪೆ ಕಾಮಗಾರಿ ಬಗ್ಗೆ ಸಾಮಾನ್ಯ ಜನರು ಕೂಡಾ ಗುಣಮಟ್ಟದ ಪರಿಶೀಲನೆ ಮಾಡುವ ಹಕ್ಕಿರುವಾಗ ಈ ಭಾಗದ ಶಾಸಕರಾಗಿ ನೂರಾರು ಕೋಟಿ ಕಾಮಗಾರಿ ಬಗ್ಗೆ ಕಾಳಜಿ ವಹಿಸದೇ ಇರುವುದು ಖಂಡನೀಯ. ‌ಇದೀಗ ಕಳಪೆ ಕಾಮಗಾರಿ ಬಹಿರಂಗದ ನಂತರ. ಸುಮ್ಮನೆ ಶಾಸಕರು ಕಾಟಾಚಾರಕ್ಕೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ ಎಂದಿದೆ.

    ಇನ್ನು ಅರವಿಂದ ಬೆಲ್ಲದ ಅವರು ಒಬ್ಬ ಶಾಸಕರಾಗಿ ಅವರದ್ದೇ ಆದ ವಿಶೇಷ ಅಧಿಕಾರಗಳನ್ನು ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಕಳಪೆ ಕಾಮಗಾರಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಲು ಅವಕಾಶಗಳಿದ್ದರು ಸಹಿತ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿರುವುದು ಇತಿಹಾಸದಲ್ಲಿ ಇದು ಮೊದಲ ಬಾರಿ ಎನ್ನಿಸುವುದು. ಬಿಆರ್ ಟಿಎಸ್ ಯೋಜನೆಯನ್ನು ಅವಳಿನಗರಕ್ಕೆ ನಾವು ತಂದಿದ್ದೇವೆ ಎಂದು ಹೇಳಿಕೊಳ್ಳುವ ಜಿಲ್ಲೆಯ ಉಸ್ತುವಾರಿ ಸಚಿವರು ಜನರು ಸಂಕಷ್ಟದಲ್ಲಿರುವಾಗ  ಈ ಬಗ್ಗೆ ಮಾತನಾಡದೇ ಇರುವುದು ಕಳವಳಕ್ಕೆ ಕಾರಣವಾಗಿದೆ‌ ಎಂದು ಹೇಳಿದೆ.

    ಶಾಸಕ ಅರವಿಂದ ಬೆಲ್ಲದ ಅವರಿಗೆ ಜನರ ಮೇಲೆ ನಿಜವಾದ ಕಾಳಜಿ ಎಂಬುದು ಇದ್ದರೆ ಈಗಲಾದರೂ ತಮ್ಮ ಜವಾಬ್ದಾರಿ ಅರಿತು ವಿಧಾನಸಭೆಯಲ್ಲಿ ಈ ವಿಷಯವಾಗಿ ಧ್ವನಿ ಎತ್ತಿ ಪ್ರಾಮಾಣಿಕವಾಗಿ ಉನ್ನತಮಟ್ಟದ ತನಿಖೆಗೆ ಆಗ್ರಹಿಸಬೇಕು. ಕಳಪೆ ಕಾಮಗಾರಿ ನಡೆಸಿದ ತಪ್ಪಿತಸ್ಥ ಅಧಿಕಾರಿಗಳು, ಇಂಜಿನಿಯರ್, ಪ್ರಭಾವಿಗಳಿದ್ದರೂ ಅವರ ಮೇಲೂ ಕಾನೂನು ಕ್ರಮ ತೆಗೆದುಕೊಳ್ಳುವಲ್ಲಿ ಶಾಸಕರು ಮುಂದಾಗಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ.