Karnataka Voice

Latest Kannada News

ಬಚ್ಚಾಖಾನ್ ಹುಬ್ಬಳ್ಳಿ ಪೊಲೀಸರ ಕಸ್ಟಡಿಯಲ್ಲಿ: ಏನೇನೂ ಮಾತಾಡಿದ್ದಾನೆ ಗೊತ್ತಾ..?

ಹುಬ್ಬಳ್ಳಿ: ಬೆಂಗಳೂರಿನ ಬಿಲ್ಡರ್ ಸುಬ್ಬರಾಜು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಯ್ಯದ ಸುಲೇಮಾನ ಬಚ್ಚಾಖಾನ ಖಾದ್ರಿಯನ್ನ, ಹುಬ್ಬಳ್ಳಿಯಲ್ಲಿ ನಡೆದ ಪ್ರೂಟ್ ಇರ್ಫಾನ್ ಕೊಲೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಳೇಹುಬ್ಬಳ್ಳಿ ಪೊಲೀಸರು ಕರೆತಂದಿದ್ದಾರೆ.

ಮೈಸೂರು ಜೈಲಿನಲ್ಲಿದ್ದ ಬಚ್ಚಾಖಾನನ್ನ ಐದು ದಿನಗಳ ಮಟ್ಟಿಗೆ ಪೊಲೀಸ್ ಕಸ್ಟಡಿ ಪಡೆದಿರುವ ಪೊಲೀಸರು, ಇರ್ಫಾನ್ ಹಂಚಿನಾಳ ಅಲಿಯಾಸ್ ಪ್ರೂಟ್ ಇರ್ಪಾನ್ ಕೊಲೆಯಲ್ಲಿ ಇರುವ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಹಳೇಹುಬ್ಬಳ್ಳಿ ಠಾಣೆಯ ಇನ್ಸ್ ಪೆಕ್ಟರ ಶಿವಾನಂದ ಕಮತಗಿ ಮತ್ತು ಸಿಸಿಬಿ ಇನ್ಸ್ ಪೆಕ್ಟರ್ ಅಲ್ತಾಪ ಮುಲ್ಲಾ ನೇತೃತ್ವದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಬಚ್ಚಾಖಾನ ‘ತಲೆನೋವಾಗಿ ಪರಿಣಮಿಸಿದ್ದಾನೆ’.

ತಾನೋಬ್ಬ ದೊಡ್ಡ ಡಾನ್ ಎಂದು ತೋರಿಸುವುದೇ ಆತನ ಕಾಯಕವಾಗಿದ್ದು, ತನಗೆ ಎಷ್ಟು ಜನ ಹೆಂಡಿರು ಇದ್ದಾರೆ. ತನಗೆ ಯಾರು ಜಾಮೀನು ಮಾಡಿಸುತ್ತಾರೆ.. ತನಗೆ ಸಾಕಷ್ಟು ಹುಡುಗರು ಇದ್ದಾರೆ.. ತಾನು ಮನಸ್ಸು ಮಾಡಿದ್ರೇ.. ಹಾಗೇ.. ಹೀಗೆ.. ತನ್ನನ್ನ ತಾನೂ ವರ್ಣನೆ ಮಾಡಿಕೊಳ್ಳುವುದರಲ್ಲೇ ಸಮಯ ಕಳೆಯುತ್ತಿದ್ದಾನೆ.

ಪ್ರೂಟ್ ಇರ್ಫಾನ್ ಜೊತೆಗೆ ಯಾವ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಗಳವಾಗಿತ್ತು. ಅದಕ್ಕೆ ಯಾರೂ ಸಹಕಾರ ನೀಡಿದ್ದರೆಂಬುದರ ಬಗ್ಗೆ ಇನ್ನೂ ಬಚ್ಚಾಖಾನ ಬಾಯಿಬಿಟ್ಟಿಲ್ಲ ಎಂದು ಹೇಳಲಾಗಿದೆ.

ಐದು ದಿನ ಕಸ್ಟಡಿಗೆ ಪಡೆದಿರುವ ಪೊಲೀಸರು, ಬಚ್ಚಾಖಾನನ ಬಾಯಿಚಪಲದಿಂದಲೇ  ಹೈರಾಣಾಗಿರುವುದಂತೂ ಸುಳ್ಳಲ್ಲವೆನ್ನಲಾಗುತ್ತಿದೆ.

Leave a Reply

Your email address will not be published. Required fields are marked *