Category: ನಮ್ಮೂರು

  • ನಾಳೆಯ ಬಂದ್ ಗೆ ಆಮ್ ಆದ್ಮಿ ಬೆಂಬಲ: ಜಿಲ್ಲಾಧ್ಯಕ್ಷ ಸಂತೋಷ ನರಗುಂದ

    ಹುಬ್ಬಳ್ಳಿ: ರೈತ, ಕಾರ್ಮಿಕ ಹಾಗೂ ಜನಪರ ಸಂಘಟನೆಗಳು ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ವ್ಯಾಪಾರಸ್ಥರ ಸಂಘದ ಸಭಾ ಭವನದಲ್ಲಿಂದು ಚಿಂತನಾ ಸಮಾವೇಶ ಹಮ್ಮಿಕೊಂಡಿತ್ತು. ಅದರಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಭಾಗವಹಿಸಿದ್ದರು.

    ಈ ವೇಳೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಪಿಎಂಸಿ, ಭೂ ಸುಧಾರಣಾ ಕಾರ್ಮಿಕ ಕಾನೂನುಗಳ ತಿದ್ದುಪಡಿ ತರುವ ಮೂಲಕ ಭಾರತದ ಏಕೈಕ ಆಶಾಕಿರಣವಾದ ಕೃಷಿ ಕ್ಷೇತ್ರವನ್ನು ಸರ್ವನಾಶ ಮಾಡಲು ಹೊರಟಿರುವುದು ದುರಂತ. ಕೃಷಿಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಪ್ರಮುಖ ಮಸೂದೆಗಳ ಬಗ್ಗೆ ಉಭಯ ಸದನಗಳಲ್ಲಿ ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಮತ್ತು ಮಸೂದೆಗಳನ್ನು ಆಯ್ಕೆ ಸಮಿತಿಯ ಪರಿಶೀಲನೆಗೊಳಪಡಿಸಬೇಕು ಎಂಬ ವಿರೋಧಪಕ್ಷಗಳ ಬೇಡಿಕೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದರು.

    ದುರ್ಬಲರು, ಅಸಹಾಯಕರು ಮತ್ತು ಅಸಂಘಟಿತರಾಗಿರುವ ಶೇಕಡಾ 80ರಷ್ಟಿರುವ ಸಣ್ಣ ಮತ್ತು ಮಧ್ಯಮ ರೈತರಿಗೆ ಕೃಷಿಮಾರುಕಟ್ಟೆಯನ್ನು ಸರ್ಕಾರದ ನೆರವಿಲ್ಲದೆ ಸ್ವಯಂನಿಯಂತ್ರಿಸಲಾರರು. ಆ ಕೆಲಸ ಮಾಡುತ್ತಿದ್ದ ಎಪಿಎಂಸಿಯನ್ನು ನಾಶಮಾಡುವುದೆಂದರೆ ಪೂರ್ಣ ಕೃಷಿಕ್ಷೇತ್ರವನ್ನು ಮಣ್ಣುಪಾಲು ಮಾಡುವುದು ಎಂದರ್ಥ. ಎಪಿಎಂಸಿಗಳ ನಿಯಂತ್ರಣವಿಲ್ಲದೆ ಸ್ವತಂತ್ರವಾಗಿ ವ್ಯಾಪಾರ ನಡೆಸುವ ಅವಕಾಶಕ್ಕಾಗಿ ಪ್ರಯತ್ನಿಸುತ್ತಲೇ ಬಂದಿರುವ ಖಾಸಗಿ ಕಂಪೆನಿಗಳಿಗೆ ಹೆಬ್ಬಾಗಿಲು ತೆರೆಯುವುದೇ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ( ಉತ್ತೇಜನ ಮತ್ತು ಸೌಲಭ್ಯ) ಮಸೂದೆಯ ದುರುದ್ದೇಶ. ಇದು ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿರುವ ರೈತರ ಬೆನ್ನು ಮುರಿಯುವ ಕೆಲಸ ಎಂದು ದೂರಿದರು.

    ಕೇಂದ್ರ ಸರ್ಕಾರದ ಹೊಸ ತಿದ್ದುಪಡಿ ಕಾನೂನಿನಲ್ಲಿ ಬೆಂಬಲ ಬೆಲೆಯ ರಕ್ಷಣೆಯನ್ನು ಕಿತ್ತೊಗೆದು ರೈತರನ್ನು ಅನಾಥರನ್ನಾಗಿ ಮಾಡಲಾಗಿದೆ. ಅಲ್ಲದೇ ಪ್ರಸ್ತುತ ರಾಜ್ಯದಲ್ಲಿ ಅನುಷ್ಠಾನದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ರೈತರ ಹಿತಾಸಕ್ತಿ ರಕ್ಷಣೆಗೆ ಬದ್ಧವಾಗಿದೆ ಎಂದಿರುವ ಅವರು, ಸೆಕ್ಷನ್ 8 ರ ಪ್ರಕಾರ ‘’ಎಪಿಎಂಸಿ ಮಾರುಕಟ್ಟೆ ಯಾರ್ಡ್ ಒಳಗೆ ಇಲ್ಲವೆ ಹೊರಗೆ ಯಾರೂ ಕೂಡಾ ಅಧಿಕೃತ ಲೈಸೆನ್ಸ್ ಇಲ್ಲದೆ ವ್ಯಾಪಾರ ನಡೆಸುವಂತಿಲ್ಲ’’. ಇದಕ್ಕೆ ತಿದ್ದುಪಡಿ ಮಾಡಲಾಗಿದೆ. ಸೆಕ್ಷನ್ 66 ಮತ್ತು 67ರ ಪ್ರಕಾರ ಯಾರ್ಡ್ ನ ಮಾರುಕಟ್ಟೆ ವ್ಯಾಪ್ತಿಯಲ್ಲಿ ಅಕ್ರಮ ವ್ಯಾಪಾರ, ಕಾಳಸಂತೆ ಮತ್ತು ಅಕ್ರಮ ದಾಸ್ತಾನು ನಿಯಂತ್ರಿಸಲು ಅವಕಾಶವಿದೆ. ಈಸೆಕ್ಷನ್ ಗೂ ತಿದ್ದುಪಡಿ ಮಾಡಲಾಗಿದೆ. ರೈತರಿಗೆ ನ್ಯಾಯಬದ್ಧ ಬೆಲೆ ಸಿಗುವಂತೆ ಮಾಡಲು ಖಾಸಗಿ ಸಂಸ್ಥೆಗಳ ಲೆಕ್ಕಪತ್ರ ಪರಿಶೀಲಿಸಬಹುದು. ಸೆಕ್ಷನ್ 114,116 ಮತ್ತು 117ರಡಿಯಲ್ಲಿ ತಪ್ಪಿತಸ್ಥರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶ ಇದೆ. ಈ ಆರೂ ಸೆಕ್ಷನ್ ಗಳನ್ನು ತಿದ್ದುಪಡಿ ಮೂಲಕ ಬದಲಾಯಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಿವೆ. ಈ ಮೂಲಕ ಬಹುರಾಷ್ಟ್ರೀಯ ಕಂಪೆನಿಗಳು ಕಾಯ್ದೆ ತಿದ್ದುಪಡಿ ಮೂಲಕ ಮೀಸೆ ತುರುಕಿಸಿ ಒಳಪ್ರವೇಶಿಸಿದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಅಪ್ರಸ್ತುತ ಗೊಳಿಸಿ, ನಾಶ ಮಾಡಲು ಬಹಳ ದಿನಗಳು ಬೇಕಾಗಲಾರದು. ಎಪಿಎಂಸಿಯ ಹೊಸ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರಕ್ಕೆ ಎಂಪಿಎಂಸಿಯಿಂದ ಹೊರಗಿರುವ ವರ್ತಕರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಈ ಮೂಲಕ ಮಾರುಕಟ್ಟೆಯನ್ನು ತಮ್ಮ ನಿಯಂತ್ರಣಕ್ಕೆ ಪಡೆದು ನಿಧಾನವಾಗಿ ಎಪಿಎಂಸಿಗಳನ್ನು ಅಪ್ರಸ್ತುತಗೊಳಿಸುವುದು ಇದರ ಹಿಂದಿನ ನಿಜವಾದ ದುರುದ್ದೇಶ ಎನ್ನುವುದನ್ನು ರೈತರು ಅರ್ಥಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ರೈತ, ಕಾರ್ಮಿಕ ಹಾಗೂ ಜನಪರ ಸಂಘಟನೆಗಳು ಒಂದಾಗಿ ಕಾಯಿದೆಯನ್ನು ತೀವ್ರವಾಗಿ ವಿರೋಧಿಸಬೇಕು. ಈ ಹಿನ್ನೆಲೆಯಲ್ಲಿ ರೈತ‌ ವಿರೋಧಿ ಕಾಯಿದೆ ವಿರೋಧಿಸಿ ನಾಳೆ ನಡೆಯಲಿರುವ ಸ್ವಯಂ ಪ್ರೇರಿತವಾದ ಬಂದ್ ಗೆ ಆಮ್ ಆದ್ಮಿ ಪಕ್ಷ ಬೆಂಬಲ ಸೂಚಿಸಲಿದೆ ಎಂದರು.

  • ‘ಗಂಡನ ಜೀವ’ ಹೋದ ಕ್ಷಣವೇ “ಆಕೆಯ ಉಸಿರು” ನಿಂತಿದೆ- ಕುಂದಗೋಳದಲ್ಲಿ ಆಗಿದ್ದೇನು..?

    ಕುಂದಗೋಳ : ಪತಿ ಸಾವಿನ ಆಘಾತ ಪತ್ನಿಯೂ ಹೃದಯಾಘಾತದಿಂದ ಸಾವು

    ಕುಂದಗೋಳ : ಸತಿ-ಪತಿಗಳು ಒಂದಾದ ಭಕ್ತಿ ಶಿವನಿಗೆ ಒಪ್ಪುವ ಮಾತಿನಂತೆ ಕುಂದಗೋಳ ಪಟ್ಟಣದ ಕುಂಬಾರಗಲ್ಲಿಯಲ್ಲಿ ಸಾವಿನಲ್ಲೂ ದಂಪತಿಗಳು ಒಂದಾಗಿದ್ದಾರೆ.

    ಫೆರಿದ್ಧೀನ್ ಇಮಾಮಸಾಬ್ ಪಠಾಣ್ (74) ಎಂಬುವವರು ಇಂದು ಬೆಳಿಗ್ಗೆ 6-30 ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಕುಟುಂಬಸ್ಥರು, ಸಂಬಂಧಿಗಳು ಅವರ ಶವ ಸಂಸ್ಕಾರ ಮುಗಿಸಿ ಮನೆಗೆ ಮರಳುವ ಹೊತ್ತಿಗಾಗಲೇ ಅವರ ಪತ್ನಿ ಹುಸೇನಬಿ ಫೆರುದ್ಧೀನ್ ಪಠಾಣ್ (70) ಪತಿಯ ಸಾವಿನ ದು:ಖ ತಾಳಲಾರದೆ ಇಂದು ಸಾಯಂಕಾಲ 4 ಗಂಟೇಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದು ಸಾವಿನಲ್ಲೂ ದಂಪತಿಗಳು ಒಂದಾಗಿದ್ದಾರೆ.

    ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದ್ದು ಸಾವಿನಲ್ಲೂ ಒಂದಾದ ಸತಿ ಪತಿಗಳ ಹೊಂದಾಣಿಕೆಗೆ ಇಡೀ ಕುಂದಗೋಳ ಪಟ್ಟಣವೇ ಕಂಬನಿ ಮಿಡಿಯುತ್ತಿದೆ.

  • ಅಣ್ಣಿಗೇರಿ ತಾಲೂಕು ಪಂಚಾಯತಿಗೆ ಬೀಗ: ಕೋನರೆಡ್ಡಿ ವಿರುದ್ಧ ಮುನೇನಕೊಪ್ಪ ಟೀಕೆ

    ಧಾರವಾಡ: ಇನ್ನೂ ಉದ್ಘಾಟನೆಯಾಗದ ತಾಲೂಕು ಪಂಚಾಯತಿ ಕಚೇರಿಯನ್ನ ಉದ್ಘಾಟನೆ ಮಾಡಿ ಶಿಷ್ಟಚಾರ ಉಲ್ಲಂಘನೆಯಾಗಿರುವ ಪರಿಣಾಮ ಅಧಿಕಾರಿಗಳು ನವಲಗುಂದ ಕ್ಷೇತ್ರದ ಅಣ್ಣಿಗೇರಿ ತಾಲೂಕು ಪಂಚಾಯತಿ ಕಚೇರಿಗೆ ಬೀಗ ಹಾಕಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಇಡೀ ಪ್ರಕರಣದ ಬಗ್ಗೆ ವೀಡಿಯೋದಲ್ಲಿ ನೋಡಿ ತಿಳಿಯಿರಿ..

    ಅಣ್ಣಿಗೇರಿ ತಾಲೂಕು ರಚನೆಯಾದ ಮೇಲೆ ಆಯ್ಕೆಯಾಗಿದ್ದ ಅಧ್ಯಕ್ಷ, ಉಪಾಧ್ಯಕ್ಷರು ತಮ್ಮ ಕೊಠಡಿಗಳನ್ನ ಪೂಜೆ ಮಾಡಿಕೊಂಡು ಅಧಿಕಾರ ಸ್ವೀಕರಿಸುವ ಬದಲು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಉಪಸ್ಥಿತಿಯಲ್ಲಿ ಉದ್ಘಾಟನೆಯೇ ಆಗದ ತಾಲೂಕು ಪಂಚಾಯತಿ ಕಾರ್ಯಾಲಯವನ್ನೇ ಉದ್ಘಾಟನೆ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ.

    ಓರ್ವ ಶಾಸಕ ಮಂತ್ರಿಯಾದ್ರೇ, ಅವರು ತಮ್ಮ ಕೊಠಡಿಯನ್ನ ಪೂಜೆ ಮಾಡಿಕೊಳ್ಳುತ್ತಾರೋ ಅಥವಾ ವಿಧಾನಸೌಧವನ್ನೇ ಉದ್ಘಾಟನೆ ಮಾಡುತ್ತಾರೋ ಎಂದು ಕೇಳುವಂತಾಗಿದೆ.

    ಅಧಿಕಾರಿಗಳು ಮಾಡಿದ ಯಡವಟ್ಟನ್ನ ಸರಿ ಮಾಡಿಕೊಳ್ಳಲು ಅಧಿಕಾರಿಗಳು ತಾವೇ ಖುದ್ದಾಗಿ ತಾಲೂಕು ಪಂಚಾಯತಿ ಕಚೇರಿಗೆ ಬೀಗ ಹಾಕಿದ್ದು, ನೂತನವಾಗಿ ಆಯ್ಕೆಯಾದವರ ಸ್ಥಿತಿ ಕಚೇರಿಗೆ ಹೋಗದ ಹಾಗಾಗಿದೆ.

    ನೂತನ ಕಾರ್ಯಾಲಯಗಳು ಉದ್ಘಾಟನೆಯಾಗಬೇಕಾದರೇ ಅದಕ್ಕೊಂದು ಶಿಷ್ಟಾಚಾರವಿರತ್ತೆ. ಅದನ್ನ ಮೀರಿ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ನಡೆದುಕೊಂಡಿದ್ದಾರೆ ಎಂದು ಹಾಲಿ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಹೇಳಿದ್ದಾರೆ.

  • ‘ಹೆಬ್ಬಟ್ಟು ಮಂದಿ’ ದೂರಿಡಿ: ಸಕತ್ ಹೇಳಿಕೆ ಕೊಟ್ಟ ವಿನೋದ ಅಸೂಟಿ

    ‘ಹೆಬ್ಬಟ್ಟು ಮಂದಿ’ ದೂರಿಡಿ: ಸಕತ್ ಹೇಳಿಕೆ ಕೊಟ್ಟ ವಿನೋದ ಅಸೂಟಿ

    ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆಗಳು ಸಮೀಪಿಸುತ್ತಿದಂತೆ ನವಲಗುಂದ ಕಾಂಗ್ರೆಸ್ ಯುವನಾಯಕ ಹಾಗೂ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನೋದ ಅಸೂಟಿ ಹೇಳಿಕೆಯೊಂದನ್ನ ನೀಡಿದ್ದು, ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

    ಗ್ರಾಮ ಪಂಚಾಯತಿಗಳಲ್ಲಿ ವಿದ್ಯಾವಂತರು ಬರಬೇಕು. ಆ ಮೂಲಕ ಗ್ರಾಮೀಣ ಅಭಿವೃದ್ಧಿಯಾಗಬೇಕು ಎಂಬುದನ್ನ ಮನಗಂಡಂತೆ ಹೇಳಿಕೆ ನೀಡಿರುವ ವಿನೋದ ಅಸೂಟಿ, ಹೆಬ್ಬಟ್ಟು ರಾಜಕೀಯ ಮಂದಿಯಿಂದ ದೂರವಿರಿ ಎಂದು ಕೇಳಿಕೊಂಡಿದ್ದಾರೆ.

    ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನಕ್ಷರಸ್ಥರು ಚುನಾವಣೆಗೆ ನಿಲ್ಲುವುದು ಮತ್ತೂ ಬುದ್ಧಿವಂತರೂ ಅವರನ್ನ ನಡೆಸಿಕೊಂಡು ಹೋಗುವುದು ನಡೀತಾನೇಯಿದೆ. ಹೀಗಾಗಿ ಕ್ಷೇತ್ರದಲ್ಲಿ ಈ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

    ಅಂದ ಹಾಗೇ ವಿನೋದ ಅಂದಿದ್ದೇನು ನೋಡಿ ಇಲ್ಲಿದೆ..

    “ಗ್ರಾಮ ಪಂಚಾಯತ್ ಚುನಾವಣೆ”

    ಹಿನ್ನಲೆಯಲ್ಲಿ ಹೆಬ್ಬೆಟ್ಟು ರಾಜಕೀಯ  ಮಂದಿಯಿಂದ ದೂರ ಇರಿ ನಿಮ್ಮ ಊರಿನ ಅಭಿವೃದ್ಧಿ ಆಗಬೇಕಾದರೆ ಸ್ವಲ್ಪನಾದರು ವಿದ್ಯೆ ಬುದ್ದಿ ಇರೋ ಬುದ್ದಿವಂತರನ್ನ ಆಯ್ಕೆ ಮಾಡಿ ಊರಿನ ಮೂಲಬುತ ಸೌಕರ್ಯಗಳನ್ನ ಯಾರು ಪರಿಹರಿಸಲು ಮುಂದಾಗಬಲ್ಲರಿಗೆ ಮತ ನೀಡಿ.

    ಈಗಾಗಲೇ ಯುವಕರಿಗೆ ಡಾಬಾ, ರೆಸ್ಟೋರೆಂಟ್ ಗಳಲ್ಲಿ ಎಣ್ಣೆ ಬಾಡೂಟ ಆಮಿಷ  ತೋರಿಸುವ ಕೆಲಸ ಪ್ರಾರಂಭವಾಗಿದೆ, ಊರಿನ ಅಭಿವೃದ್ಧಿ ಮಾಡದೆ ಇದ್ದವರನ್ನು ಮತ್ತೊಮ್ಮೆ ಗದ್ದುಗೆಗೆ ಕೂರಿಸಬೇಡಿ ಹಣ, ಹೆಂಡಕ್ಕೆ ಜಾತಿ, ಅಂತ ನಿಮ್ಮ ಅಮೂಲ್ಯ ಮತ ಮಾರಿಕೊಳ್ಳಬೇಡಿ.

    ಗ್ರಾಮಗಳು ಉದ್ದಾರವಾಗಬೇಕಾದರೆ ಗ್ರಾಮ ಪಂಚಾಯ್ತಿ  ಸದಸ್ಯ ವಿದ್ಯಾವಂತನಾಗಿರಬೇಕು. ಕನಿಷ್ಠ ವಿದ್ಯಾರ್ಹತೆ ಇರೋರನ್ನ ಆಯ್ಕೆ ಮಾಡಿ.

    ನಿಮ್ಮೂರ ಅಭಿವೃದ್ಧಿ. ನಿಮ್ಮ  ಕೈಯಲ್ಲಿ..

    ಇಂತಿ ನಿಮ್ಮ

    ವಿನೋದ ಕೆ.ಅಸೂಟಿ

    ಯೂತ್ ಕಾಂಗ್ರೆಸ್ ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷರು

  • ಗೋಪೂಜೆ ಮುನ್ನವೇ ಕೆರೆಯಲ್ಲಿ ಬಾಲಕರಿಬ್ಬರ ಸಾವು: ಧಾರವಾಡ ತಾಲೂಕಲ್ಲಿ ಹೃದಯವಿದ್ರಾವಕ ಘಟನೆ

    ಧಾರವಾಡ: ಮಂಗಳವಾರ ಗೋವಿನ ಪೂಜೆ ಮಾಡುವ ಪರಿಪಾಠ ಹೊಂದಿರುವ ಕುಟುಂಬದ ಗೋವುಗಳ ಮೈ ತೊಳೆಯಲು ಹೋಗಿದ್ದ ಬಾಲಕರಿಬ್ಬರು, ಕೆರೆಯಲ್ಲಿ ಮುಳುಗಿ ಸಾವಿಗೀಡಾದ ಘಟನೆ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ.


    ಕ್ಯಾರಕೊಪ್ಪ ಗ್ರಾಮದ ಹೊರವಲಯದಲ್ಲಿ ಇರುವ ಕೆರೆಯಲ್ಲಿ ಆಕಳಿನ ಮೈ ತೊಳೆಯಲು ಹೋಗಿದ್ದ ಮೃತ್ಯುಂಜಯ ಕಾಮಧೇನು ಹಾಗೂ ರೋಹಿತ ಪೂಜಾರಿ ಸಾವಿಗೀಡಾಗಿದ್ದಾರೆ.
    ಹದಿಮೂರು ಹದಿನಾಲ್ಕು ವಯಸ್ಸಿನ ಬಾಲಕರು ಆಕಳಿನ ಜೊತೆಗೆ ಕೆರೆಯ ಒಳಗಡೆ ಹೋಗಿದ್ದಾರೆ. ಆದರೆ, ಮರಳಿ ಬರಲು ಪ್ರಯತ್ನಿಸಿದಾಗ ಹೊರಗಡೆ ಬರದೇ ನೀರಲ್ಲಿ ಮುಳುಗಿದ್ದಾರೆ.
    ಬಾಲಕರು ಬಾರದೇ ಆಕಳುಗಳಷ್ಟೇ ಮನೆಗೆ ಬಂದಾಗ ಆವಾಂತರ ನಡೆದಿದ್ದು ಗೊತ್ತಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಗ್ರಾಮೀಣ ಠಾಣೆಯ ಪೊಲೀಸರು, ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

  • ಮೂಕ ಪ್ರಾಣಿಯ ಮೂಕ ರೋಧನ: ವಾಣಿಜ್ಯನಗರಿಯ ‘ತಾಯಿ ಪ್ರೀತಿ’

    ಹುಬ್ಬಳ್ಳಿ: ಆಕೆ ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಅದನ್ನ ಮತ್ತಷ್ಟು ಪ್ರೀತಿಯಿಂದ ಸಾಕುತ್ತಿದ್ದಳು. ತನಗೆ ತಿನ್ನಲು ಏನೂ ಸಿಗದಿದ್ದರೂ ಪರ್ವಾಗಿಲ್ಲ, ತನ್ನ ಮಗುವಿಗೆ ಮಾತ್ರ ಹಾಲನ್ನ ಉಣಿಸುತ್ತಲೇ ಇರುತ್ತಿದ್ದಳು.. ಆದ್ರೇ, ಅಷ್ಟೊಂದು ಪ್ರೀತಿಯಿಂದ ಸಾಕಿದ ತನ್ನ ಕರುಳಕುಡಿಯನ್ನ ರಸ್ತೆಯಲ್ಲಿ ಹೆಣವಾಗಿ ನೋಡಿ, ತಾಯಿಯ ಸ್ಥಿತಿ ಏನಾಗಿರಬೇಡಾ..

    ಹುಬ್ಬಳ್ಳಿಯ ಜನನಿಬೀಡ ಪ್ರದೇಶದಲ್ಲಿ ನಾಲ್ಕು ತಿಂಗಳ ಕರುವೊಂದು ಚೆಂಗಾಟವಾಡುತ್ತಿದ್ದಾಗಲೇ ಕಾರು ಡಿಕ್ಕಿ ಹೊಡೆದು, ಸ್ಥಳದಲ್ಲಿಯೇ ಅದು ತೀರಿಕೊಂಡಿದೆ. ತನ್ನ ಮುಂದೆ ಓಡಾಡುತ್ತಿದ್ದ, ಪ್ರೀತಿಯಿಂದ ಸಾಕಿದ ಕರುಳುಕುಡಿ ಇಲ್ಲದ್ದನ್ನ ಮನಗಂಡ ಆಕಳು, ಮೃತದೇಹದ ಮುಂದೆ ನಿಂತು ರೋಧಿಸುತ್ತಿತ್ತು.

    ಕಾರು ಡಿಕ್ಕಿ ಹೊಡೆದಾತ, ಕರುವಿಗೆ ನೀರು ಹಾಕುವ ಪ್ರಯತ್ನವನ್ನ ಮಾಡಿದ್ರು, ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿಯೇ, ತಾಯಿ ಆಕಳು, ರಸ್ತೆಯಲ್ಲೇ ಕೆಲವು ಹೊತ್ತು ನಿಂತು.. ಮಗುವಿನ ಕೊನೆಯ ದರ್ಶನ ಮಾಡಿತು. ಈ ದೃಶ್ಯವನ್ನ ನೋಡಿ ಅನೇಕರು ಕಣ್ಣೀರಾದ ಘಟನೆಯೂ ನಡೆಯಿತು.

  • ಡಿವೈಡರ್ ಬೈಕ್ ಡಿಕ್ಕಿ_ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರ

    ಧಾರವಾಡ: ವೇಗವಾಗಿ ಬೈಕ್ ಚಲಾಯಿಸುತ್ತಿದ್ದ ಸಮಯದಲ್ಲಿ ಆಯತಪ್ಪಿ ಡಿವೈಡರಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾದ ಘಟನೆ ನಗರದಲ್ಲಿ ಸಂಭವಿಸಿದೆ.

    ರಾಯಾಪುರದ ಸಮೀಪ ಬೈಕಿನಲ್ಲಿ ಹೋಗುತ್ತಿದ್ದ ಧಾರವಾಡ ಸರಸ್ವತಿಪುರದ ನಿವಾಸಿ ನಿತಿನ ನಾಗರಾಜ ಹಾಗೂ ಸರಸ್ವತಿಪುರ ಭವಾನಿನಗರದ ಕಾರ್ತಿಕ ಬಸವರಾಜ ಬಾರಕೇರ ಎಂಬ ವಿದ್ಯಾರ್ಥಿಗಳೇ ಡಿವೈಡರಗೆ ಬೈಕಿನಿಂದ ಹೊಡೆದಿದ್ದಾರೆ.

    ತೀವ್ರವಾಗಿ ಗಾಯಗೊಂಡಿರುವ ನಿತಿನ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿದೆ. ಜೊತೆಗಿದ್ದ ಕಾರ್ತಿಕನ ಕೈ ಮುರಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ದ್ವಿಚಕ್ರ ವಾಹನವನ್ನ ವೇಗವಾಗಿ ಚಲಾಯಿಸುತ್ತಿದ್ದ ಸಮಯದಲ್ಲಿ ಡಿಕ್ಕಿ ಹೊಡೆದ ಪರಿಣಾಮ, ಡಿವೈಡರ್ ಕೂಡಾ ಸಂಪೂರ್ಣ ಬಾಗಿದ್ದು, ಬೈಕ್ ನಜ್ಜಗುಜ್ಜಾಗಿದೆ. ಪ್ರಕರಣ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ.

  • ಅಣ್ಣಿಗೇರಿಯಲ್ಲಿ ರೈತಪರ ಹೋರಾಟ ಹೇಗಿತ್ತು ಗೊತ್ತಾ..!

    ಧಾರವಾಡ: ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶವ್ಯಕ್ತಪಡಿಸಿ, ಹೋರಾಟವನ್ನ ನಡೆಸಲಾಯಿತು.

    ಹೋರಾಟ ನಡೆದಿದ್ದು ಹೇಗಿತ್ತು ನೋಡಿ..

    ಅಣ್ಣಿಗೇರಿ ರೈತ ಹೋರಾಟ ಸಮಿತಿ ಹಾಗೂ ಕಿಸಾನ್ ಕಾಂಗ್ರೆಸ್ ನಿಂದ ನಡೆದ ಹೋರಾಟದಲ್ಲಿ ಶಿವಶಂಕರ ಕಲ್ಲೂರ, ಭಗವಂತಪ್ಪ ಪುಟ್ಟಣ್ಣನವರ, ಜಯರಾಜ ಹೂಗಾರ, ಜಿಲ್ಲಾ ಕಿಸಾನ ಕಾಂಗ್ರೆಸ್ ಉಪಾಧ್ಯಕ್ಷ ವಿ.ವಿ.ಬೆಂತೂರ, ಪ್ರಕಾಶ ಅಂಗಡಿ, ಶಂಕರ ಕುರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

  • ಧಾರವಾಡದ ಹೋರಾಟದಲ್ಲಿ ACHR-DSS- ಜಯ ಕರ್ನಾಟಕ ಮಾಡಿದ್ದೇನು ಗೊತ್ತಾ..

    ಧಾರವಾಡ: ರೈತರಿಗಾಗಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಡೆದ ಹೋರಾಟದಲ್ಲಿ ಬಹುತೇಕ ಸಂಘಟನೆಗಳು ಹೋರಾಟ ಮಾಡಿದವು. ಆದರೆ, ಎಸಿಎಚ್ ಆರ್, ಡಿಎಸ್ ಎಸ್ ಹಾಗೂ ಜಯ ಕರ್ನಾಟಕ ಸಂಘಟನೆಗಳು ನಡೆಸಿದ ಹೋರಾಟ ವಿಭಿನ್ನವಾಗಿತ್ತು..

    ಅವರ ನಡೆಸಿದ ಹೋರಾಟ ಹೇಗಿತ್ತು ಎಂಬುದನ್ನ ನೀವೂ ನೋಡಿ..

  • ಧಾರವಾಡದಲ್ಲಿಂದು 145 ಪಾಸಿಟಿವ್ –236 ಗುಣಮುಖ- ಓರ್ವ ಸೋಂಕಿತರ ಸಾವು

    ಧಾರವಾಡದಲ್ಲಿಂದು 145 ಪಾಸಿಟಿವ್ –236 ಗುಣಮುಖ- ಓರ್ವ ಸೋಂಕಿತರ ಸಾವು

    ಧಾರವಾಡದಲ್ಲಿಂದು 145 ಪಾಸಿಟಿವ್ –236 ಗುಣಮುಖ- ಓರ್ವ ಸೋಂಕಿತರ ಸಾವು

    ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತೆ 145 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಪಾಸಿಟಿವ್ ಸಂಖ್ಯೆ 17201 ಕ್ಕೇರಿದೆ. ಇಂದು 236 ಸೋಂಕಿತರು ಗುಣಮುಖರಾಗಿದ್ದು, ಈ ಮೂಲಕ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 14252 ಕ್ಕೇರಿದೆ.

    ಜಿಲ್ಲೆಯಲ್ಲಿ ಒಟ್ಟು 482 ಸೋಂಕಿತರು ಕೊರೋನಾ ಪಾಸಿಟಿವ್ ನಿಂದ ಸಾವಿಗೀಡಾಗಿದ್ದಾರೆ.

    ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..