Category: ನಮ್ಮೂರು

  • ಮನೆಗಳ್ಳತನಕ್ಕೆ ಹೋದವರು ಕಾರನ್ನೇ ಕದ್ದೋಯ್ದರು..!

    ಹುಬ್ಬಳ್ಳಿ: ಶಹರದ ರೇಣುಕಾನಗರದಲ್ಲಿ ಮನೆಯೊಂದರ ಬಾಗಿಲು ಮುರಿದು ಕಳ್ಳತನ ಮಾಡಲು ಹೋಗಿದ್ದವರಿಗೆ, ಪುಡಿಗಾಸು ಸಿಕ್ಕ ಪರಿಣಾಮ, ಮನೆ ಮುಂದೆ ನಿಲ್ಲಿಸಿದ್ದ ಕಾರನ್ನೇ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

    ಗೋಕುಲ ರಸ್ತೆಯ ರೇಣುಕಾನಗರ ನಿವಾಸಿ ಷಣ್ಮುಖ ವಾಲಿ ಎಂಬುವರ ಮನೆಯಲ್ಲಿಯೇ ಕಳ್ಳತನವಾಗಿದ್ದು, ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗ ಘಟನೆ ನಡೆದಿದೆ.

    ಮನೆಯ ಬಾಗಿಲನ್ನು ಮುರಿದು ಹೋದ ಕಳ್ಳರಿಗೆ ಮನೆಯಲ್ಲಿ ಹತ್ತು ಸಾವಿರ ನಗದು ಜೊತೆಗೆ ಚಿಲ್ಲರೆ ಹಣ ಮಾತ್ರ ಸಿಕ್ಕಿದ್ದು, ಮನೆಯ ಮುಂದೆ ನಿಲ್ಲಿಸಿದ್ದ ಸ್ವಿಫ್ಟ್ ಡಿಸೈರ್ ಕಾರನ್ನು ಕೂಡಾ ಕದ್ದುಕೊಂಡು ಹೋಗಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಹುಬ್ಬಳ್ಳಿ-ಧಾರವಾಡದಲ್ಲಿ ಕಳೆದ ಎರಡು ತಿಂಗಳುಗಳ ಹಿಂದಿನಿಂದ ನಾಲ್ಕು ಕಾರುಗಳ ಕಳ್ಳತನವಾಗಿದ್ದು, ಇಲ್ಲಿಯವರೆಗೆ ಯಾವೊಂದು ವಾಹನವೂ ಪತ್ತೆಯಾಗಿಲ್ಲ..

  • ಹವಾಲ್ದಾರನ ಪತ್ನಿಯೀಗ ಹೆಬ್ಬಳ್ಳಿ ಗ್ರಾಪಂ ಅಧ್ಯಕ್ಷೆ: ಗೆದ್ದು ಬಿದ್ದ ಕಾಂಗ್ರೆಸ್..!

    ಧಾರವಾಡ: ತಾಲೂಕಿನ ಹೆಬ್ಬಳ್ಳಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೊಸದೊಂದು ಇತಿಹಾಸ ಸೃಷ್ಠಿಯಾಗಿದೆ. ಅಷ್ಟೇ ಅಲ್ಲ, ತಮ್ಮನ್ನೇ ಜಾಣರೂ ಎಂದುಕೊಂಡಿದ್ದ ಕಾಂಗ್ರೆಸ್ ಪಕ್ಷದವರ ಯಡವಟ್ಟು ಬಯಲಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಬೆಂಬಲಿತರು, ಬರೋಬ್ಬರಿ 30 ತಿಂಗಳು ಅಧಿಕಾರದಿಂದ ದೂರವುಳಿಬೇಕಾಗಿ ಬಂದಿದ್ದು, ಹೆಬ್ಬಳ್ಳಿ ಗ್ರಾಮ ಪಂಚಾಯತಿಗೆ ಪೊಲೀಸ್ ಇಲಾಖೆಯ ಹವಾಲ್ದಾರ ತಮ್ಮಾಜಿರಾವ ತಲವಾಯಿವರ ಪತ್ನಿ ತೇಜಸ್ವಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

    ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೆಚ್ಚು ಸೀಟು ಹೊಂದಿದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯರು, ಪ್ರವಾಸಕ್ಕೆ ಹೋಗಿ ಮರಳಿ ಬರುವುದರಲ್ಲೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಸಮಯವೇ ಮುಗಿದು ಹೋಗಿತ್ತು. ಹೀಗಾಗಿ, 15 ಸದಸ್ಯರ ಬೆಂಬಲಿವಿದ್ದ ಬಿಜೆಪಿ ಬೆಂಬಲಿತ ಸದಸ್ಯರ ಪೈಕಿ ತೇಜಸ್ವಿನಿ ತಲವಾಯಿ ಅಧ್ಯಕ್ಷ ಸ್ಥಾನಕ್ಕೂ, ವಿಠ್ಠಲ ಇಂಗಳೆ ಉಪಾಧ್ಯಕ್ಷ ಸ್ಥಾನಕ್ಕೂ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿಯೇ, ಅವರೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ನಿನ್ನೆ ನಡೆಯಬೇಕಿದ್ದ ಚುನಾವಣೆಗೆ ಸದಸ್ಯರ ಕೊರತೆಯಿದ್ದ ಕಾರಣ ಇಂದು ಚುನಾವಣೆಗೆ ನಿಗದಿ ಮಾಡಿತ್ತು. ನಾಮಪತ್ರ ಸಲ್ಲಿಸಿದ ಇಬ್ಬರೇ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಹೆಬ್ಬಳ್ಳಿ ಪಂಚಾಯತಿಗೆ ಅಧ್ಯಕ್ಷೆಯಾಗಿರುವ ತೇಜಸ್ವಿ ತಲವಾಯಿ, 94 ಬ್ಯಾಚಿನ ತಮ್ಮಾಜಿರಾವ ತಲವಾಯಿಯವರ ಧರ್ಮಪತ್ನಿಯಾಗಿದ್ದಾರೆ. ಸದಾಕಾಲ ಜನರ ನಡುವೆಯಿರುವ ತಮ್ಮಾಜಿರಾವ್ ಪತ್ನಿಯನ್ನ ಸಾರ್ವಜನಿಕ ಸೇವೆಯಲ್ಲಿ ಇರುವಂತೆ ನೋಡಿಕೊಂಡಿದ್ದು, ಹೆಮ್ಮೆಯ ವಿಷಯವಾಗಿದೆ.

  • ಹುಬ್ಬಳ್ಳಿಯಲ್ಲಿ ಹೊತ್ತಿ ಉರಿದ ಟಾಟಾ ಏಸ್..!

    ಹುಬ್ಬಳ್ಳಿ: ತಾಲೂಕಿನ ಬಂಡಿವಾಡದಿಂದ ನವನಗರದ ಬಳಿಯಿರುವ ಕೃಷಿ ಮಾರುಕಟ್ಟೆಗೆ ಬರುತ್ತಿದ್ದ ಟಾಟಾ ಏಸ್ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಚಾಲುಕ್ಯನಗರದ ಬಳಿಯ ಗದಗ ರಸ್ತೆಯಲ್ಲಿ ನಡೆದಿದೆ.

    ಬಂಡಿವಾಡ ಗ್ರಾಮದಿಂದ ಹುಬ್ಬಳ್ಳಿಯ ಎಪಿಎಂಸಿಗೆ ಮೆಣಸಿನಕಾಯಿ ತರುತ್ತಿದ್ದ ಟಾಟಾ ಏಸ್ ವಾಹನಕ್ಕೆ ತಾಂತ್ರಿಕ ದೋಷದಿಂದ ಬೆಂಕಿ ತಗುಲಿದೆ. ಮಾರುತೆಪ್ಪ ಹನುಮಂತಪ್ಪ ದುರ್ಗಮ್ಮಣ್ಣವರ ಎಂಬುವರಿಗೆ ಸೇರಿದ ವಾಹನದಲ್ಲಿ ಸಾವಿರಾರೂ ರೂಪಾಯಿ ಮೌಲ್ಯದ ಮೆಣಸಿಕಾಯಿ ಕೂಡಾ ಸುಟ್ಟಿದ್ದು, ಉಪಯೋಗಕ್ಕೆ ಬಾರದ್ದಾಗಿದೆ.

    ಬೆಂಕಿ ತಗುಲಿದ ಪ್ರಕರಣ ಗೊತ್ತಾದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೆಲಕಾಲ ಪ್ರಯತ್ನಿಸಿ, ಬೆಂಕಿಯನ್ನ ನಂದಿಸಿದರು. ಆದರೆ, ವಾಹನದ ಬಹುತೇಕ ಭಾಗ ಸುಟ್ಟು ಹೋಗಿದೆ.

    ನಡುರಸ್ತೆಯಲ್ಲೇ ಘಟನೆ ನಡೆದಿದ್ದರಿಂದ ಇನ್ನುಳಿದ ವಾಹನ ಸವಾರರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ದೂರವೇ ನಿಂತು ಬೆಂಕಿ ನಂದಿಸುವವರೆಗೂ ಕಾಯ್ದು ನಂತರ ತೆರಳಿದರು.

    ಘಟನೆಗೆ ಸಂಬಂಧಿಸಿದಂತೆ ಕೇಶ್ವಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

  • AIMIM ಹೋರಾಟ- ಫೇಸ್ ಬುಕ್ ಲ್ಲಿ ಕಾಂಗ್ರೆಸ್ ಅಧ್ಯಕ್ಷ LIKE…!

    ಧಾರವಾಡ: AIMIM ಪಕ್ಷ BJP ಯೊಂದಿಗೆ ಆಂತರಿಕ ಒಡಂಬಡಿಕೆ ಮಾಡಿಕೊಂಡು ಬೇರೆ ಬೇರೆ ರಾಜ್ಯಗಳ ಚುನಾವಣೆಗಳಲ್ಲಿ ಸ್ಪರ್ಧಿಸಿ BJP ಗರ ನೆರವು ಮಾಡುತ್ತಿದೆ ಎಂದು ಆರೋಪಿಸುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡರು AIMIM ಪಕ್ಷ ಕೈಗೊಂಡ ಪ್ರತಿಭಟನೆಯೊಂದರ ಸಾಮಾಜಿಕ ಜಾಲತಾಣದಲ್ಲಿಯ ಪೋಸ್ಟ್ ವೊಂದಕ್ಕೆ ‘Like’ ಮಾಡುವ ಮೂಲಕ ಗೊಂದಲ‌ ಮೂಡಿಸಿದ್ದಾರೆ.

    ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ತಾಫ್ ಹುಸೈನ್ ಹಳ್ಳೂರ್ ರವರು ತಾವು ಸ್ವತಃ ಕೇಂದ್ರ ಸರ್ಕಾರದ ವಿರುದ್ಧ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟಿಸ ದಿದ್ದರೂ ಕಾಂಗ್ರೆಸ್ ಪಕ್ಷದ ವಿರೋಧಿಯಾದ AIMIM ನವರು ನಡೆಸಿದಂತಹ ಪ್ರತಿಭಟನೆಯನ್ನು ಸಮರ್ಥಿಸಿ ಸೋಶಿಯಲ್ ಮೀಡಿಯಾದಲ್ಲಿ ಲೈಕ್ ಮಾಡಿದ್ದಾರೆ. ???? ಪಕ್ಷದ ಜಿಲ್ಲಾಧ್ಯಕ್ಷರೆ ಹೀಗೆ ಮಾಡಿದರೆ ಕಾರ್ಯಕರ್ತರ ಗತಿ ಏನು?

    ನಗರದ ಹಲವಾರು WhatsApp ಗ್ರುಪ್ ಗಳಲ್ಲಿ ಸಂಜೆಯಿಂದ ಹರಿದಾಡುತ್ತಿರುವ ‘Facebook’ನ ಫೋಟೋ ಕ್ಲಿಪ್ ಹಾಗೂ ಅದರೊಂದಿಗಿನ ಮೆಸೇಜ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತಲೆಕೆಡೆಸಿಕೊಳ್ಳುವಂತೆ ಮಾಡಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಭಯದಲ್ಲಿರುವ ಅಲ್ತಾಫ್ ಹಳ್ಳೂರ ಸಾಹೇಬರೆ ಈ ಘಟನೆಗೆ ಕೇಂದ್ರ ಬಿಂದು ಆಗಿರುವುದರಿಂದ ಅವರ ವಿರೋಧಿಗಳು ಇದೇ ಸಂದರ್ಭವನ್ನು ತಮ್ಮ‌ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.

    ಮಹಾನಗರ ಜಿಲ್ಲಾ ಅಧ್ಯಕ್ಷ ಅಲ್ತಾಫ್ ಹಳ್ಳೂರ ಅವರು ‘ದುಶ್ಮನ್ ಕಾ ದುಶ್ಮನ್ ದೋಸ್ತ್’ (ಮೋದಿ ವಿರೋಧಿ) ಎಂದು ಭಾವಿಸಿ AIMIM ಹೋರಾಟದ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್ ಗೆ Like ಮಾಡಲು ಹೋಗಿ ಅವರ ವಿರೋಧಿಗಳಿಗೆ ಆಹಾರವಾಗಿದ್ದಾರಲ್ಲದೆ, ಅವರ ಹಿತೈಷಿಗಳು ‘ಪಾಪ ಅಧ್ಯಕ್ಷರು’ ಎನ್ನುವಂತಾಗಿದೆ.

    ಹಳ್ಳೂರವರ ಈ ಪ್ರಮಾದವನ್ನ ರಾಜಕೀಯಕ್ಕಾಗಿ ಅವರ ಜನರೇ

    ಇದರ ಲಾಭ ಎತ್ತಲು ಎಲ್ಲ ರೀತಿಯ ಹರಸಾಹಸ ಪಡುತ್ತಿದ್ದಾರೆ.

  • ಹುಬ್ಬಳ್ಳಿಯಲ್ಲಿ “ಸಿಲಿಂಡರ್- ಬೈಕ್”  ಶವ ಮಾಡಿ ಪೂಜಿಸಿದ ಕಾಂಗ್ರೆಸ್ಸಿಗರು..!

    ಹುಬ್ಬಳ್ಳಿ: ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡಿದ್ದನ್ನು ಖಂಡಿಸಿ, ಕಾಂಗ್ರೆಸ್ ಕಾರ್ಯಕರ್ತರಿಂದ ನಗರದ ದುರ್ಗದ ಬೈಲ್ ದಲ್ಲಿ ಸಿಲಿಂಡರ್, ಬಾಳೆ ಹಣ್ಣು, ಬೈಕ್ ಅಣುಕು ಶವ ಪೂಜೆ ಮಾಡುವುದರ ಮೂಲಕ ಬೃಹತ್ ಪ್ರತಿಭಟನೆ ಕೈಗೊಳ್ಳಲಾಯಿತು.

    ಈ ವೇಳೆ ದೇಶದ ಆರ್ಥಿಕ ದುಃಸ್ಥಿತಿ, ಪೆಟ್ರೋಲ್ ದರ ಏರಿಕೆ ಹಾಗೂ ಬಿಜೆಪಿಗರಿಂದ ದೇಶದಲ್ಲಿ ಆಂತರಿಕವಾಗಿ ನಡೆಯುತ್ತಿರುವ ಹಿಂಸಾಚಾರಗಳ ವಿರುದ್ಧವಾಗಿಯೂ ಕೂಡ ಪ್ರತಿಭಟಿಸಲಾಯಿತು.

    ಈ ಸಮಯದಲ್ಲಿ ಮಾತನಾಡಿದ ರಜತ ಉಳ್ಳಾಗಡ್ಡಿಮಠ, ಇನ್ನೂರು ಅಥವಾ ಮುನ್ನೂರು ರೂಪಾಯಿ ಪೆಟ್ರೋಲ್ ದರ ಆದರೂ ಕೂಡಾ ಮೋದಿಗಾಗಿ ನಾವು ಪೆಟ್ರೋಲ್ ಖರೀದಿಸುತ್ತೇವೆ ಎನ್ನುವ ಭಕ್ತರಲ್ಲಿ ಕಳಕಳಿಯ ವಿನಂತಿ.

    ದಯವಿಟ್ಟು , ನಿಮ್ಮದೇ ಆದ ಪೆಟ್ರೋಲ್ ಬಂಕ್ ತಯಾರಿ ಮಾಡಿಕೊಳ್ಳಿ, ಅದರಲ್ಲಿ ಸಾವಿರ ರೂಪಾಯಿ ಆದರೂ ಕೊಟ್ಟು ಖರೀದಿಸಿ, ಮಧ್ಯಮ ವರ್ಗದ ಹಾಗೂ ಬಡಪಾಯಿ ಜೀವಿಗಳು ದ್ವಿಚಕ್ರ ವಾಹನಗಳ ಮೂಲಕ ಇತರ ಹಳ್ಳಿಗಳಿಗೆ ತೆರಳಿ ಆಯಾ ದಿನಬಳಕೆಯ ವಸ್ತುಗಳಾಗಿರಬಹುದು ಅಥವಾ ಇನ್ನಿತರ ಗೃಹ ಬಳಕೆಯ ವಸ್ತುಗಳನ್ನು ಮಾರಾಟ ಮಾಡಿ ತಮ್ಮ ಆ ದಿನದ ಉಪಜೀವನವನ್ನು ನೋಡಿಕೊಳ್ಳುವಂತವರಿಗೆ ದಯವಿಟ್ಟು ಕಡಿಮೆ ದರದಲ್ಲಿ ಪೆಟ್ರೋಲ್ ಒದಗಿಸಿ ಎಂದು ಆಗ್ರಹಿಸಿದರು.

    ಪ್ರತಿಭಟನೆಯಲ್ಲಿ ಹುಬ್ಬಳ್ಳಿ-ಧಾರವಾಡ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚೈತನ್ಯ ಬಿಜವಾಡ , ಶಹಜಾನ್ ಮುಜಾಹಿದ್ , ಗೋವಿಂದ್ ಬೆಲ್ದೋನಿ, ಸಮೀರ್ ಖಾನ್, ಭಾರತಿ ಬದ್ದಿ, ನಿರ್ಮಲಾ  ಮಾನೆ, ರಾಹುಲ್ ಚಂದಾವರ್ಕರ್ , ಡ್ಯಾನಿಯಲ್ ಹೆಗಡೆ , ಸೈಫ್ ಮುಲ್ಲಾ , ಸುನಿಲ್ ಮರಾಠೆ  , ನವೀನ ಶಿಸನಳ್ಳಿ, ಮಣಿಕಂಠ ಪಿರಗೊಜಿ, ಪ್ರಜ್ವಲ್ ಮೋರೆ , ನಾಗರಾಜ್ ಹಿರೇಮಠ, ಅಂಕಿತ ಮುಂತಾದವರು ಉಪಸ್ಥಿತರಿದ್ದರು.

  • ಕಂಡ ಕಂಡ ಜಿಲ್ಲೆಗಳಲ್ಲಿ ವಂಚಿಸಿದ್ದ ಆರೋಪಿಯನ್ನ ಬಂಧಿಸಿದ ಇನ್ಸಪೆಕ್ಟರ್ ಪ್ರಭುಗೌಡ ಟೀಂ..!

    ಉತ್ತರಕನ್ನಡ: ಬ್ಯಾಂಕ್ ಎಟಿಎಂಗಳಲ್ಲಿ ಸಹಾಯ ನೆಪದಲ್ಲಿ ಅವರದ್ದೇ ಎಟಿಎಂ ತೆಗೆದುಕೊಂಡು ಹೋಗಿ ವಂಚನೆ ಮಾಡುತ್ತಿದ್ದ ಅಂತರ್ ಜಿಲ್ಲಾ ವಂಚಕನನ್ನ ಬಂಧನ ಮಾಡುವಲ್ಲಿ ಮುಂಡಗೋಡ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಈಗಾಗಲೇ ಮಂಡ್ಯ ಹಾಗೂ ತುಮಕೂರ ಜಿಲ್ಲೆಯಲ್ಲಿ ಎಂಟು ವಂಚನೆ ಮಾಡಿ ಪೊಲೀಸರಿಂದ ಬಂಧನವಾಗಿ ಜಾಮೀನಿನ ಮೇಲೆ ಹೊರಗಿರುವ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಿರೇಮೊರಬ ಗ್ರಾಮದ ಗಿರೀಶ ಸಿದ್ದಪ್ಪ ಮುನಿಯಪ್ಪನವರ ಎಂಬಾತನನ್ನೇ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಗಿರೀಶನ ವಿಚಾರಣೆಯಲ್ಲಿ ಮತ್ತೆ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ, ಆತ ಬಳಕೆ ಮಾಡುತ್ತಿದ್ದ ಬೈಕ್ ಕೂಡಾ ದಾವಣಗೆರೆಯಲ್ಲಿ ಕಳ್ಳತನ ಮಾಡಿದ್ದೆಂದು ಗೊತ್ತಾಗಿದೆ. ಆರೋಪಿಯಿಂದ 47500 ರೂಪಾಯಿ ಹಾಗೂ ಬೈಕನ್ನ ವಶಕ್ಕೆ ಪಡೆಯಲಾಗಿದೆ.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವ ಪ್ರಕಾಶ್ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್ ಬದರಿನಾಥ, ಶಿರಸಿ ಡಿಎಸ್ಪಿ ರವಿ ನಾಯಕ  ಮಾರ್ಗದರ್ಶನದಲ್ಲಿ ಮುಂಡಗೋಡ ಠಾಣೆಯ ಇನ್ಸಪೆಕ್ಟರ್ ಪ್ರಭುಗೌಡ. ಡಿ.ಕೆ ನೇತೃತ್ವದಲ್ಲಿ  ಪಿಎಸ್ಐಗಳಾದ ಬಸವರಾಜ ಮಬನುರ, ಬಾಬುದ್ದಿನ್, ಎಎಸ್ಐಗಳಾದ ಅಶೋಕ ರಾಠೋಡ. ಕೆ.ಎನ್.ಘಟಕಾಂಬಳೆ ಸಿಬ್ಬಂದಿಗಳಾದ ವಿನೋದಕುಮಾರ. ಜಿ. ಬಿ, ಅರುಣಕುಮಾರ ಬಾಗೇವಾಡಿ, ಭಗವಾನ ಗಾಂವಕರ, ರಾಘವೇಂದ್ರ ನಾಯ್ಕ, ತಿರುಪತಿ ಚೌಡಣ್ಣನವರ, ರಾಘವೇಂದ್ರ ಪಟಗಾರ ಟೇಕ್ನಿಕಲ್ ಸೆಲ್ ಕಾರವಾರದ ಸಿಬ್ಬಂದಿಗಳಾದ ಸುಧೀರ ಮಡಿವಾಳ, ಅಣ್ಣಪ್ಪ ಬಡಿಗೇರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

    ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ಘೋಷಣೆ ಮಾಡಿದ್ದಾರೆ.

  • ಎಸ್ಪಿ ಹೆಸರಲ್ಲಿ ಪಿಎಸ್ಐಗೆ ಎಂಟೂವರೆ ಲಕ್ಷ ಪಂಗನಾಮ..!

    ಕಲಬುರಗಿ: ಜಿಲ್ಲೆಯ ಜೇವರ್ಗಿ ಪಿಎಸ್ಐಯೊಬ್ಬರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಹೆಸರನ್ನ ಹೇಳಿ ಬರೋಬ್ಬರಿ ಎಂಟೂವರೆ ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣವೊಂದು ಸ್ವತಃ ಪಿಎಸ್ಐ ಪೊಲೀಸ್ ಠಾಣೆಗೆ ದೂರು ನೀಡುವ ಮೂಲಕ ಬಹಿರಂಗವಾಗಿದೆ.

    ಕಲಬುರಗಿ ಎಸ್ಪಿ ಸಿಮಿ ಮರಿಯಮ್ ಜಾರ್ಜ್ ಹೆಸರಲ್ಲಿ ಜೇವರ್ಗಿ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ಹೂಗಾರ್ ಬಳಿ ಹಣ ವಸೂಲಿ ಮಾಡಲಾಗಿದೆ. ಇಂತಹ ವಂಚನೆ ಮಾಡಿದ್ದು ಜೇವರ್ಗಿ ತಾಲ್ಲೂಕಿನ ಕೊಂಡಗುಳಿ ಗ್ರಾಮದ ಖಾಸಿಂ ಪಟೇಲ್ ಎಂಬಾತ. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಜೊತೆ ಪಿಎಸ್ಐಗೆ ಫೋಟೊ ತೋರಿಸಿದ್ದ ಖಾಸಿಂ ಪಟೇಲ್, ಕಾನೂನು ಸುವ್ಯವಸ್ಥೆಯಲ್ಲಿ ತೊಡಕು ಉಂಟಾದ್ರೆ ಬಗೆಹರಿಸೋದಾಗಿ ಪಿಎಸ್ಐ ಮಂಜುನಾಥ ಹೂಗಾರಗೆ ನಂಬಿಸಿದ್ದ.

    ಕಲಬುರಗಿ ಎಸ್ಪಿ ಸಿಮಿ ಮರಿಯಮ್ ಜಾರ್ಜ್ ಅವರ ತೀರಾ ಪರ್ಸನಲ್  ನಂಬರ್  ಅಂತಾ ಹೊಸದೊಂದು ನಂಬರನ್ನ ಖಾಸಿಂ‌ ಪಟೇಲ್ ಪಿಎಸ್ಐಗೆ ನೀಡಿದ್ದ. 7411447060 ನಂಬರನ್ನ ಪಿಎಸ್ಐ ಮೊಬೈಲ್‌ನಲ್ಲಿ ಎಸ್ ಎಂ ಜಿ ಅಂತಾ ಸೇವ್ ಕೂಡಾ ಮಾಡಿದ್ದ ಖಾಸಿಂ ಪಟೇಲ್. ಎಸ್ ಎಂ ಜಿ ಅಂತಾ ಸೇವ್ ಮಾಡಿರುವ ನಂಬರ್ ಗೆ ವಾಟ್ಸ್ ಆಪ್ ನಲ್ಲಿ  ಕಲಬುರಗಿ ಎಸ್ ಪಿ ಫೋಟೊ ಅಳವಡಿಸಿದ್ದ ಖಾಸಿಂ ಪಟೇಲ್.

    ಎಸ್ ಎಂ ಜಿ ನಂಬರ್ ಇದು ನನಗೆ, ನಿನಗೆ ಮತ್ತು ಎಸ್ಪಿಗೆ ಮಾತ್ರ ಗೊತ್ತಿರುವ ನಂಬರ್ ಅಂತಾ ಸೇವ್ ಮಾಡಿಸಿದ್ದ ಖಾಸಿಂ, ಬಳಿಕ ಎಸ್ ಎಂ ಜಿ ನಂಬರನಿಂದ ತುರ್ತಾಗಿ ಹಣ ಬೇಕಾಗಿದೆ ಎಂದು 2.5 ಲಕ್ಷ ಮತ್ತು 6 ಲಕ್ಷ ಹಣ ಪಡೆದಿದ್ದ. ಕಳೆದ ಎರಡು ದಿನದ ಹಿಂದೆ ಅದೆ ನಂಬರ್ ನಿಂದ ವಾಟ್ಸ್ ಆಪ್ ವಾಯ್ಸ್ ಕಾಲ್ ರಿಸೀವ್ ಮಾಡಿದ್ದ ಪಿಎಸ್ಐ ಮಂಜುನಾಥ್ ಹೂಗಾರಗೆ, ವಾಟ್ಸ್ ಆಪ್ ವಾಯ್ಸ್ ಕಾಲ್ ನಲ್ಲಿ ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲಿ ಹೆಣ್ಣು ಮಕ್ಕಳು ಮಾತಾಡಿರುವ ಧ್ವನಿ ಕೇಳಿ ಅನುಮಾನ ಬಂದಿದೆ.

    ಅನುಮಾನದ ಹಿನ್ನೆಲೆಯಲ್ಲಿ ಕಲಬುರಗಿ ಎಸ್ಪಿ ಸಿಮಿ ಮರಿಯಮ್ ಜಾರ್ಜರನ್ನ ಭೇಟಿ ಮಾಡಿ ವಿಚಾರಿಸಿದಾಗ ನಿಜ ಸ್ವರೂಪ ಬಯಲಾಗಿದೆ. ಎಚ್ಚೆತ್ತ ಪಿಎಸ್ಐ ಹೂಗಾರ ಸ್ಷೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಖಾಸಿಂ ಪಟೇಲ್ ನಿಂದ 2 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

  • ಹುಬ್ಬಳ್ಳಿಯಲ್ಲಿ “ಕುಲಕರ್ಣಿ” ಕಾರು ಅಡ್ಡಗಟ್ಟಿ ಚಿನ್ನದ ಸರ ದರೋಡೆ..!

    ಎಕ್ಸಕ್ಲೂಸಿವ್ ಬೈಟ್..

    ಹುಬ್ಬಳ್ಳಿ: ನಗರದ ಹೊರವಲಯದ ರಿಲೆಯನ್ಸ್ ಪ್ರೇಶ್ ಶಾಪ್ ಬಳಿಯಲ್ಲಿ ಕಾರೊಂದನ್ನ ಅಡ್ಡಗಟ್ಟಿ, ಸ್ಕೂಟಿಯಲ್ಲಿ ಬಂದ ಇಬ್ಬರು ಸರಗಳ್ಳತನ ಮಾಡಿಕೊಂಡು ಪರಾರಿಯಾದ ಘಟನೆ ನಡೆದಿದೆ.

    ಡಿಯೋ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮೂವರು ಪೆಟ್ರೋಲ್ ಬಂಕ್  ಕೇಳುವ ನೆಪ ಮಾಡಿ ಮೊದಲು ಕಾರನ್ನ ಅಡ್ಡಗಟ್ಟಿದ್ದಾರೆ. ಆಗ ಕಿಡಕಿಯಿಂದ ಮಾತನಾಡುತ್ತಿದ್ದ ಹಾಗೇ ಚಿನ್ನದ ಸರವನ್ನ ದೋಚಿ ಪರಾರಿಯಾಗಿದ್ದಾರೆ.  ಅಷ್ಟೇ ಅಲ್ಲ, ಚಾಕುವನ್ನ ತೋರಿಸಿ ಹಣವನ್ನ ಕೇಳಿದ್ದಾರೆ. ತಮ್ಮಲ್ಲಿದ್ದ ಮೂವತ್ತು ರೂಪಾಯಿಗಳನ್ನು ಕಾರಿನಲ್ಲಿದ್ದ ರಾಜು ಶ್ರೀಪತಿರಾವ ಕುಲಕರ್ಣಿಅವರಿಗೆ ಕೊಟ್ಟಿದ್ದಾರೆ.

    ಚಿನ್ನದ ಸರವನ್ನ ಎಗರಿಸಿ ಪರಾರಿಯಾಗಿರುವ ಮೂವರು ಶಹರದೊಳಗೆ ಬಂದಿರಬಹುದೆಂದು ಶಂಕಿಸಲಾಗಿದ್ದು, ದ್ವಿಚಕ್ರ ವಾಹನದ ಬಣ್ಣದಿಂದ ಪತ್ತೆ ಹಚ್ಚಲು ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

    ಹಿಂದಿಯಲ್ಲಿ ಮಾತನಾಡುತ್ತಿದ್ದ ಮೂವರು ಯಾರಿಗಾದರೂ ಹೇಳಿದರೇ ಚಾಕು ಹಾಕುವುದಾಗಿ ಬೆದರಿಕೆ ಹಾಕಿದರು. ಹಾಗಾಗಿ ನಾವೂ ಯಾರಿಗೂ ಹೇಳಿಲ್ಲ ಎಂದು ದರೋಡೆಗೆ ಒಳಗಾದ ರಾಜು ಕುಲಕರ್ಣಿ ಕರ್ನಾಟಕವಾಯ್ಸ್.ಕಾಂಗೆ ಮಾಹಿತಿಯನ್ನ ನೀಡಿದರು.

    ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು, ನಗರದಲ್ಲಿ ನಾಕಾ ಬಂದಿ ಹಾಕಲಾಗಿದೆ.

  • ಟೈಯರ್, ಟ್ಯೂಬ್ ಕಳ್ಳರನ್ನ ಬಂಧನ ಮಾಡಿದ ಗೋಕುಲ ಠಾಣೆ ಪೊಲೀಸರು..!

    ಹುಬ್ಬಳ್ಳಿ: ಗೋಕುಲ ರಸ್ತೆಯ ಇಂಡಸ್ಟ್ರೀಯಲ್ ಎಸ್ಟೇಟನಲ್ಲಿನ ಶ್ರೀ ಶೀವಶಕ್ತಿ ಎಂಟರ್ ಪ್ರೈಜಿಸ್ ಗೋಡೌನದಲ್ಲಿ ಟೈಯರ್, ಟ್ಯೂಬ್ ಮತ್ತು ಪ್ಲ್ಯಾಪಗಳನ್ನ ಕಳ್ಳತನ ಮಾಡಿದ್ದ ಇಬ್ಬರನ್ನ ಬಂಧನ ಮಾಡುವಲ್ಲಿ ಗೋಕುಲ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತರನ್ನ ಗೋಕುಲ ರಸ್ತೆಯ ಮಾರುತಿನಗರದ ಹಳ್ಳೇಪ್ಪ ದೇವಪ್ಪ ಪೂಜಾರ ಮತ್ತು ಗದಗ-ಬೆಟಗೇರಿ ನರಸಾಪೂರದ ವಸೀಮ ಮಕ್ತುಮಸಾವ ಸೈದಾಪೂರ ಎಂದು ಗುರುತಿಸಲಾಗಿದ್ದು, ಟ್ರಕ್ಕಿನ 11 ಟೈಯರ್, ಟ್ಯೂಬ್ ಹಾಗೂ ಪ್ಲ್ಯಾಪಗಳನ್ನ ವಶಕ್ಕೆ ಪಡೆಯಲಾಗಿದೆ. ಇವುಗಳ  ಮೌಲ್ಯ ಅಂದಾಜು 2.10.000 ರೂಪಾಯಿ ಎನ್ನಲಾಗಿದೆ.

    ಗೋಡೌನದ ಸಿಮೆಂಟ್ ಸೀಟಿನ ನಟ್ ಬೋಲ್ಟ್ ಬಿಚ್ಚಿ ಗೋಡೌನದಲ್ಲಿ ಇಳಿದು ಕಳ್ಳತನ ಮಾಡಿರುವುದು ಬಂಧಿತರಿಂದ ಗೊತ್ತಾಗಿದೆ. ಪೊಲೀಸ್ ಕಮೀಷನರ್ ಲಾಬುರಾಮ್, ಡಿಸಿಪಿಗಳಾದ ಕೆ.ರಾಮರಾಜನ್, ಆರ್.ಬಿ.ಬಸರಗಿ, ಎಸಿಪಿ ವಿನೋದ ಮುಕ್ತೆದಾರ ಮಾರ್ಗದರ್ಶನದಲ್ಲಿ ಗೋಕುಲ ಠಾಣೆಯ ಇನ್ಸಪೆಕ್ಟರ್ ಜಗದೀಶ ಹಂಚಿನಾಳ, ಸಿಬ್ಬಂದಿಗಳಾದ ಎಎಸ್ಐ ಎಚ್.ಎನ್.ವೆಂಕಣ್ಣನವರ, ಬಸವರಾಜ ಬೆಳಗಾವಿ, ರಾಜು ಹೊಂಕಣನವರ, ಮಹಾದೇವ ಹೊನ್ನಪ್ಪನವರ, ಸುಲೇಮಾನ ಚೋಪದಾರ, ಮಹೇಶ ಬೆನ್ನೂರ, ಸಂಜೀವರೆಡ್ಡಿ ಕಣಬೂರ ಆರೋಪಿಗಳನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಆರೋಪಿತರಿಗೆ ಸಹಕಾರ ನೀಡಿರುವ ಇನ್ನುಳಿದ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದು, ಕಳ್ಳತನವಾಗಿರುವ ಇನ್ನೂಳಿದ ಮಾಲನ್ನ ವಶಪಡಿಸಿಕೊಳ್ಳಲು ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ.

  • ಹೆಬ್ಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಮುಂದೂಡಿಕೆ..!

    ಧಾರವಾಡ: ತಾಲೂಕಿನ ಹೆಬ್ಬಳ್ಳಿ ಗ್ರಾಮ ಪಂಚಾಯತಿ ಚುನಾವಣೆಯನ್ನ ಕೋರಂ ಅಭಾವದಿಂದ ಚುನಾವಣಾಧಿಕಾರಿಗಳು ಮುಂದೂಡಿದ ಪ್ರಕರಣ ನಡೆದಿದೆ.

    ಹೆಬ್ಬಳ್ಳಿ ಗ್ರಾಮ ಪಂಚಾಯತಿಗೆ ಇಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯ ದಿನಾಂಕವನ್ನ ನಿಗದಿ ಮಾಡಿತ್ತು. ಆದರೆ, ನಿಗದಿತ ಸಮಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಂದು, ಉಪಾಧ್ಯಕ್ಷ ಸ್ಥಾನಕ್ಕೆ ಒಂದು ನಾಮಪತ್ರ ಸಲ್ಲಿಕೆಯಾಗಿದೆ.

    ಚುನಾವಣೆಯ ಸಮಯವನ್ನ ಮಧ್ಯಾಹ್ನ 2 ಗಂಟೆಗೆ ನಿಗದಿ ಮಾಡಲಾಗಿತ್ತು. ಆದರೆ, 32 ಸದಸ್ಯರ ಪೈಕಿ ಕೇವಲ 15 ಜನ ಸದಸ್ಯರು ಸಭೆಗೆ ಹಾಜರಾಗಿದ್ದಾರೆ. ಹೀಗಾಗಿ, ಇದು ಕೋರಂ ಆಗುವುದಿಲ್ಲವೆಂದು ಇಂದಿನ ಚುನಾವಣೆಯನ್ನ ಮುಂದೂಡಲಾಗಿದೆ.

    ನಾಳೆ ಸಂಜೆ 4 ಗಂಟೆಗೆ ಮತ್ತೆ ಹೆಬ್ಬಳ್ಳಿ ಗ್ರಾಮ ಪಂಚಾಯತಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸಭೆ ಕರೆಯಲಾಗಿದೆ.