Karnataka Voice

Latest Kannada News

ಧಾರವಾಡ ಕಾಂಗ್ರೆಸ್ ಅಭ್ಯರ್ಥಿಗೆ “ಹಾರ್ಟ್ ಅಟ್ಯಾಕ್”…!

ಧಾರವಾಡ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆಯಲ್ಲಿ ಭೀ ಪಾರ್ಮ್ ಪಡೆದಿದ್ದ ಅಭ್ಯರ್ಥಿಗೆ ಹೃದಯಾಘಾತವಾಗಿದ್ದು, ನಡೆಯಲಾಗದ ಹಿನ್ನೆಲೆಯಲ್ಲಿ ಭೀ ಫಾರ್ಮ್ ಮರಳಿ ಪಡೆಯಲಾಗಿದೆ.

13ನೇ ವಾರ್ಡಿನಿಂದ ಟಿಕೆಟ್ ಪಡೆದಿದ್ದ ಆನಂದ ಜಾಧವ ಅವರು ಕೋರ್ಟ್ ಅಪಿಡೆವೇಟ್ ಮಾಡುವ ಸಮಯದಲ್ಲಿ ಕುಸಿದು ಬಿದ್ದಾಗ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಆನಂದ ಜಾಧವ ಅವರ ಭೀ ಫಾರ್ಮ ಮರಳಿ ಪಡೆದಿದ್ದು, ಪಕ್ಷದಲ್ಲಿ ಬಂಡಾಯವೆದ್ದಿದ್ದ ಹೇಮಂತ ಗುರ್ಲಹೊಸೂರ ಅವರಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *