‘ಮಾಸ್ತರ್’ ಬಸವರಾಜ ಗುರಿಕಾರಗೆ ಕೈ ಕೊಟ್ಟ ಶಿಕ್ಷಕ ಸಮುದಾಯ..!
1 min readಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಸಾಕಷ್ಟು ಕ್ರೇಜ್ ಹುಟ್ಟಿಸಿದ್ದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಶಿಕ್ಷಕ ವಲಯವೇ ಕೈ ಹಿಡಿಯಲಿಲ್ಲವೇ ಎಂಬ ಪ್ರಶ್ನೆ ಮೂಡತೊಡಗಿದ್ದು, ಅದೇ ಕ್ಷೇತ್ರದಿಂದ ಬಂದ ಗುರಿಕಾರ ಅವರಿಗೆ ಹೀಗೇಕಾಯಿತು ಎಂಬ ಪ್ರಶ್ನೆ ಮೂಡುತ್ತಿದೆ.
ಧಾರವಾಡ, ಗದಗ, ಉತ್ತರ ಕನ್ನಡ ಹಾಗೂ ಹಾವೇರಿ ಜಿಲ್ಲೆಯಲ್ಲಿ ಶಿಕ್ಷಕರ ಬಗ್ಗೆ ಸಾಕಷ್ಟು ಭರವಸೆಯನ್ನ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಹೊಂದಿದ್ದರು. ಅಷ್ಟೇ ಅಲ್ಲ, ಸಿಪಿಎಂ, ಜೆಡಿಎಸ್ ಪಕ್ಷಗಳು ಬೆಂಬಲ ನೀಡಿದ್ದವು. ಆದರೂ, ಇಷ್ಟೊಂದು ಕಡಿಮೆ ಮತಗಳನ್ನ ಪಡೆಯಲು ಕಾರಣವಾಗಿದ್ದು, ಗುರಿಕಾರರಿಗೆ ಶಿಕ್ಷಕರೂ ಕೈ ಹಿಡಿದಿಲ್ಲ ಎಂದು ಗೋಚರವಾಗುತ್ತಿದೆ.
ಈಗಾಗಲೇ ಮೂರನೇಯ ಹಂತದ ಮತ ಎಣಿಕೆ ಆರಂಭವಾಗಿದ್ದು, ಒಟ್ಟು ಮತ ಎಣಿಕೆಯ ಶೇಕಡಾ ಹತ್ತರಷ್ಟು ಮತಗಳನ್ನ ಗುರಿಕಾರ ಪಡೆದಿದ್ದಾರೆ. ಹಾಗಾಗಿಯೇ ಶಿಕ್ಷಕರ ವಲಯ, ಇವರನ್ನ ಕೈ ಹಿಡಿದಿಲ್ಲ ಎಂಬುದು ಮೇಲು ನೋಟಕ್ಕೆ ಗೊತ್ತಾಗುತ್ತಿದೆ.
ಬಸವರಾಜ ಗುರಿಕಾರ ಶಿಕ್ಷಕರ ಸಂಘ, ಸರಕಾರ ನೌಕರರ ಸಂಘದಲ್ಲಿಯೇ ಇದ್ದು ದಶಕಗಳೇ ಕಳೆದರೂ ಯಾವುದೇ ಪ್ರಯೋಜನ ಈ ಚುನಾವಣೆಗೆ ಆಗದೇ ಇರುವುದು, ಫಲಿತಾಂಶದಲ್ಲಿ ಕಂಡು ಬರುತ್ತಿದೆ.