ಠಾಣೆಯಿಂದ ಎಸ್ಕೇಪ್ ಆದವನನ್ನ ಹೆಡಮುರಿ ಕಟ್ಟಿ ತಂದ ಪೊಲೀಸರು…. “ಹಲ್ಮಂಜ್ ಅಂದರ್”…
ಕಲಬುರಗಿ: ಪೊಲೀಸ್ ಠಾಣೆಯಿಂದ ಎಸ್ಕೇಪ್ ಆಗಿದ್ದ ಪೋಕ್ಸೊ ಪ್ರಕರಣದ ಆರೋಪಿ ಮಂಜುನಾಥ್ನನ್ನು ಅಫಜಲಪುರ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಆರೋಪಿ ಮಂಜುನಾಥ್ ಮಹಾರಾಷ್ಟ್ರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಅಫಜಲಪುರ ತಾಲೂಕಿನ ತೆಲ್ಲೂಣಗಿ ಗ್ರಾಮದ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
- ವಿಶೇಷ ತಂಡದ ಕಾರ್ಯಾಚರಣೆ: ಆರೋಪಿ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅಡ್ಡೂರು ಶ್ರೀನಿವಾಸುಲು ವಿಶೇಷ ತಂಡ ರಚಿಸಿದ್ದರು.
- ಮತ್ತೊಂದು FIR: ಠಾಣೆಯಿಂದ ಓಡಿಹೋಗಿದ್ದಕ್ಕೆ ಆರೋಪಿ ವಿರುದ್ಧ ಈಗ ಮತ್ತೊಂದು ಹೊಸ ಎಫ್ಐಆರ್ ದಾಖಲಾಗಿದೆ.
