Posts Slider

Karnataka Voice

Latest Kannada News

ಅಮರಗೋಳದಲ್ಲಿ ಶಾಸಕ ಮುನೇನಕೊಪ್ಪ: ಗ್ರಾಮಸ್ಥರಿಗೆ ಅಭಯ- ಮರುಮತದಾನಕ್ಕೆ ಭರವಸೆ

1 min read
Spread the love

ಧಾರವಾಡ: ಮತಪಟ್ಟಿಯ ಗೊಂದಲದಿಂದ ಇಂದು ನಡೆಯಬೇಕಿದ್ದ ನವಲಗುಂದ ತಾಲೂಕಿನ ಅಮರಗೋಳ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗ್ರಾಮಸ್ಥರು ಭಾಗವಹಿಸದ ಹಿನ್ನೆಲೆಯಲ್ಲಿ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿದರು.

ಗ್ರಾಮದ ದೇವಸ್ಥಾನದಲ್ಲಿ ಜಮಾಯಿಸಿದ್ದ ಗ್ರಾಮಸ್ಥರನ್ನ ಭೇಟಿ ಮಾಡಿದ ಶಾಸಕರು, ಮತಪಟ್ಟಿಯಿಂದ ತಮಗೆ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆ. ನಿಮ್ಮ ಬಯಕೆಯಂತೆ ಚುನಾವಣೆ ಆಯೋಗಕ್ಕೆ ಮನವಿ ಮಾಡಿಕೊಂಡು ಮರು ಮತದಾನವನ್ನ ನಡೆಸುವಂತೆ ಕೋರಿಕೊಳ್ಳುವುದಾಗಿ ಹೇಳಿದರು.

ಗ್ರಾಮಸ್ಥರು ಒಗ್ಗಟ್ಟಿನಿಂದ ಇರುವಾಗ ತಾಂತ್ರಿಕ ತೊಂದರೆ ನಿಮಗೆಲ್ಲ ಇಂದು ಚುನಾವಣೆಗೆ ಮತದಾನ ಮಾಡದಂತೆ ಆಗಿದೆ ಹೊರತು. ಎಲ್ಲರಿಗೆ ಆಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಯೋಗದ ಜೊತೆಗೆ ಸಂಪರ್ಕ ಮಾಡುವುದಾಗಿ ಶಾಸಕ ಮುನೇನಕೊಪ್ಪ ಹೇಳಿದರು.

ಅಮರಗೋಳದ ಗ್ರಾಮದವರೇ ಶಾಸಕರಿಗೆ ಗ್ರಾಮಸ್ಥರು, ತಮಗಾದ ತೊಂದರೆಯನ್ನ ವಿವರಿಸಿದರು. ಮತದಾನ ಮಾಡುವ ಹಿಂದಿನ ದಿನವಾದರೂ ತೊಂದರೆ ಗೊತ್ತಾಯಿತು. ಇಲ್ಲದಿದ್ದರೇ ದೊಡ್ಡ ಆವಾಂತರ ಸೃಷ್ಠಿಯಾಗುತ್ತಿತ್ತು ಎಂದು ಹೇಳಿದಾಗ, ಶಾಸಕರು ಎಲ್ಲರಿಗೂ ತಿಳುವಳಿಕೆ ನೀಡಿ, ಮರು ಚುನಾವಣೆ ನಡೆಸುವ ಬಗ್ಗೆ ಶೀಘ್ರವೇ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.


Spread the love

Leave a Reply

Your email address will not be published. Required fields are marked *