Karnataka Voice

Latest Kannada News

ಧಾರವಾಡದ ಇಟಿಗಟ್ಟಿ ಬಳಿ ಅಪಘಾತ ಸತ್ತವರ ಸಂಖ್ಯೆ 10ಕ್ಕೇರಿಕೆ

ಧಾರವಾಡ: ತಾಲೂಕಿನ ಇಟಿಗಟ್ಟಿ ಗ್ರಾಮದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆ 10ಕ್ಕೇರಿದ್ದು, ಇನ್ನೂ ಕೆಲವರ ಸ್ಥಿತಿ ಗಂಭೀರವಾಗಿದೆ.

ಧಾರವಾಡ ಗ್ರಾಮೀಣ ಠಾಣೆ ಸಬ್ ಇನ್ಸಪೆಕ್ಟರ್ ಮಹೇಂದ್ರಕುಮಾರ ಉಪಸ್ಥಿತಿಯಲ್ಲಿ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದ್ದು, ಟೆಂಪೋದಲ್ಲಿ ಸಿಲುಕಿಕೊಂಡ ಹತ್ತು ಶವಗಳನ್ನ ಈಗಾಗಲೇ ಹೊರಗೆ ತೆಗೆಯಲಾಗಿದೆ.

ದಾವಣಗೆರೆಯ ವಿವಿದ ಪ್ರದೇಶದಿಂದ ಬೆಳಗಿನ ಜಾವ ಮೂರು ಗಂಟೆಗೆ ಹೊರಟಿದ್ದ ಟೆಂಪೋ ಇಟಿಗಟ್ಟಿ ಸಮೀಪ ಟಿಪ್ಪರವೊಂದಕ್ಕೆ ಡಿಕ್ಕಿ ಹೊಡೆದಿದೆ. ಒಟ್ಟು 17 ಮಹಿಳೆಯರು ಪ್ರವಾಸಕ್ಕೆ ಗೋವಾಗೆ ಹೊರಟಿದ್ದು, ಸಂಕ್ರಮಣ ಆಚರಣೆ ಮಾಡಲು.

ಬಹಳ ದಿನಗಳ ನಂತರ ಎಲ್ಲರ ಸೇರಿಕೊಂಡು ಪ್ಲಾನ್ ಮಾಡಿದ್ದ ಪ್ರವಾಸಕ್ಕೆ ಜವರಾಯ ಅಡ್ಡಿಯಾಗಿದ್ದು, ಗೋವಾಗೆ ಹೋಗುವ ಮುನ್ನವೇ ಹತ್ತು ಜನರು ಸಾವಿಗೀಡಾಗಿದ್ದಾರೆ. ಇನ್ನೂ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಧಾರವಾಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

Leave a Reply

Your email address will not be published. Required fields are marked *