Posts Slider

Karnataka Voice

Latest Kannada News

ನರೇಂದ್ರ ಕೊಲೆ ಪ್ರಕರಣ: ಆರೋಪಿ ಬಂಧನ- ಮಿಸ್ಸಿಂಗ್ ಕೇಸ್ ಕಿಸ್ಸಿಂಗ್ ಎಂದು ಗೊತ್ತಾಗಿದ್ದು ಹೇಗೆ..!

1 min read
Spread the love

ಧಾರವಾಡ: ಕಳೆದ ಮೂರು ದಿನಗಳ ಹಿಂದೆ ಕಾಣೆಯಾಗಿದ್ದಾನೆಂದುಕೊಂಡು ದಾಖಲಾಗಿದ್ದ ಪ್ರಕರಣ ಕೊಲೆ ಎಂದು ಪತ್ತೆಯಾಗಿದ್ದು ಹೇಗೆ. ಸೊಸೆಯ ಬಗ್ಗೆ ಅತ್ತೆ ಕೊಟ್ಟ ಮಾಹಿತಿಯೇ ಪ್ರಕರಣಕ್ಕೆ ಹೊಸ ತಿರುವು ನೀಡಿತಾ.. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಾಡಿದ ‘ಚಾಣಾಕ್ಷತನವಾದರೂ’ ಏನು.. ಈ ವರದಿಯನ್ನ ಪೂರ್ತಿಯಾಗಿ ಓದಿ ತಿಳಿಯಿರಿ..

ನರೇಂದ್ರ ಗ್ರಾಮದಲ್ಲಿ ಪೀರಸಾಬ ನದಾಫ ಎಂಬ ವ್ಯಕ್ತಿ ಕಳೆದ ಎರಡು ದಿನದಿಂದ ಕಾಣೆಯಾಗಿದ್ದಾನೆಂದು ಆಕೆಯ ತಾಯಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದಳು. ದೂರು ಆಧರಿಸಿ ತನಿಖೆ ಕೈಗೊಂಡ ಪಿಎಸೈ ಮಹೇಂದ್ರಕುಮಾರ ನಾಯಕ, ಮೊದಲು ಕಾಣೆಯಾದ ಪೀರಸಾಬನ ಪೋಟೊ ಬಹುತೇಕ ಠಾಣೆಗಳಿಗೆ ರವಾನೆ ಮಾಡಿ, ಸುಮ್ಮನೆ ಕೂಡಲಿಲ್ಲ.

ನರೇಂದ್ರ ಗ್ರಾಮದ ಕಾಣೆಯಾದ ಪೀರಸಾಬನ ತಾಯಿಯ ಜೊತೆ ಮಾಹಿತಿ ಸಂಗ್ರಹಿಸಿದ್ರು. ಆಗಲೇ ಬೇರೆ ವಿಷಯ ಗೊತ್ತಾಗತ್ತೆ. ಆಗ ಮಹಾನ್ ವ್ಯಕ್ತಿಗೆ ಪೊಲೀಸ್ ಠಾಣೆಗೆ ಕರೆಸುವ ಪ್ರಯತ್ನ ಮಾಡಿದರೂ ಬರೋದೆಯಿಲ್ಲ. ಆಗ ಅನಿವಾರ್ಯವಾಗಿ ಪೊಲೀಸಗಿರಿಗೆ ನಿಂತಾಗ ಹೊರಬರತ್ತೆ ಈ ಕೊಲೆ ಪ್ರಕರಣ.

ಪೀರಸಾಬನನ್ನ ಕೊಲೆ ಮಾಡಿ ಮುಗುಟಖಾನ ಹುಬ್ಬಳ್ಳಿ ಬಳಿಯಿರುವ ನದಿಯಲ್ಲಿ ಹಾಕಿ ಬಂದು ಏನೂ ಆಗೇ ಇಲ್ಲವೆಂಬಂತೆ ಕೂತವರಿಗೆ ಪಿಎಸೈ ಟ್ರೀಟ್ ಮೆಂಟ್ ಸತ್ಯವನ್ನ ಹೇಳಿಸುವಂತೆ ಮಾಡಿಸತ್ತೆ. ಇದೀಗ ಈ ಕೊಲೆಗೆ ಪೀರಸಾಬನ ಹೆಂಡತಿ ಫರವೀನಭಾನು ಮತ್ತು ಇನ್ನೋಬ್ಬ ಸಾಥ್ ನೀಡಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.


Spread the love

Leave a Reply

Your email address will not be published. Required fields are marked *