ಮಾಡಿದ್ದು ಪ್ರಧಾನಿಯವರ ಬರ್ತಡೇ: ಅವರದ್ದೇ ಮಾತು ಕೇಳಂಗಿಲ್ಲ- ಹೆಂಗಿದೆ ನೋಡಿ ಶಾಸಕ-ಪ್ರಮುಖರ ಒಡನಾಟ..
1 min readಧಾರವಾಡ: ಪ್ರಧಾನಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬವನ್ನ ಬಿಜೆಪಿ ಯುವ ಮೋರ್ಚಾ ಆಚರಣೆ ಮಾಡಿದ್ರು. ಆದರೆ, ಪ್ರಧಾನಿ ನರೇಂದ್ರ ಮೋದಿಯವರ ಮಾತನ್ನ ಮಾತ್ರ ಪಾಲನೆ ಮಾಡದೇ ಇರುವುದು ಕಂಡು ಬಂದಿತು.
ಯುವ ಮೋರ್ಚಾದಿಂದ ನಡೆದ ಕಾರ್ಯಕ್ರಮದಲ್ಲಿ ಸ್ವತಃ ಶಾಸಕ ಮತ್ತು ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ಭಾಗವಹಿಸಿದ್ದರು. ಆದರೆ, ಪ್ರಧಾನಿಯವರು ಕರೆ ನೀಡಿದ ಸಾಮಾಜಿಕ ಅಂತರವಾಗಲಿ, ಮಾಸ್ಕ ಧರಿಸುವುದಾಗಲಿ ಬಹುತೇಕರಲ್ಲಿ ಇರಲೇಯಿಲ್ಲ.
ಅಂದ ಹಾಗೇ ಶಿವಣ್ಣ ಬಡವಣ್ಣನವರ, ರಾಮಣ್ಣ ಬಡಿಗೇರ, ಶಿವು ಹಿರೇಮಠ, ಸಂಜಯ ಕಪಟಕರ, ಕಿರಣ ಉಪ್ಪಾರ, ವಿಜಯಾನಂದ ಶೆಟ್ಟಿ, ಪೂರ್ಣಾ ಪಾಟೀಲ, ಅಮಿತ ಪಾಟೀಲ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಧಾರವಾಡ ಜಿಲ್ಲೆಯಲ್ಲಿ ಪ್ರತಿದಿನವೂ 200ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಪ್ರತಿಯೊಬ್ಬರು ಮಾಸ್ಕ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಹೇಳಲಾಗುತ್ತದೆ. ಆದರೆ, ಆಡಳಿತದ ಚುಕ್ಕಾಣಿ ಹಿಡಿದವರೇ ಹೀಗೆ ಕಾನೂನು ಮುರಿದರೇ ತಡೆಯೋದು ಹೇಗೆ.. ಪ್ರಜ್ಞಾವಂತರು ವಿಚಾರ ಮಾಡಬೇಕಿದೆ.