ರೇಪ್ ಮಾಡೋರ್ ಜನನಾಂಗ ಕತ್ತರಿಸಿ: ಧಾರವಾಡದಲ್ಲಿ ಸ್ವಾಮೀಜಿಗಳ ಹೇಳಿಕೆ
1 min readಧಾರವಾಡ: ಅತ್ಯಾಚಾರವೆಸಗುವ ದುಷ್ಕರ್ಮಿಗಳನ್ನ ಬಂಧಿಸಿ, ಅವರ ಜನನಾಂಗವನ್ನ ಕತ್ತರಿಸಬೇಕೆಂದು ಶ್ರೀ ಬಸವಪ್ರಕಾಶ ಸ್ವಾಮೀಜಿಗಳು ಧಾರವಾಡದಲ್ಲಿ ಹೇಳಿದರು.
ನಮ್ಮ ರಾಜ್ಯದಲ್ಲಿ ಪದೇ ಪದೇ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವಾಗುತ್ತಿರುವುದು ಅಮಾನವೀಯ. ಇದು ದೇಶವೇ ತಲೆತೆಗ್ಗಿಸುವಂತ ಘಟನೆಯಾಗಿದೆ ಎಂದರು.
ಅತ್ಯಾಚಾರವೆಸಗಿದ ದುಷ್ಕರ್ಮಿಗಳ ಜನನಾಂಗ ಕತ್ತರಿಸಿ ಕೊಲೆ ಮಾಡಬೇಕು. ಹೆಣ್ಣುಮಕ್ಕಳು ಕೂಡಾ ಮೈ ಮುಚ್ಚುವ ಗೌರವ ಪೂರ್ಣವಾದ ಉಡುಗೆಯನ್ನ ತೊಡಬೇಕೆಂದು ಹೇಳಿದರು.
ಭಾರತದ ಸಂಸ್ಕೃತಿಯನ್ನ ಉಳಿಸಿಕೊಂಡು ಹೋಗುವುದನ್ನ ಇಂದಿನ ಯುವ ಜನಾಂಗ ಕಲಿಯಬೇಕು. ಬಸವಣ್ಣ, ಮಹಾತ್ಮಾ ಗಾಂಧೀಜಿ, ಡಾ.ಅಂಬೇಡ್ಕರ ಕಂಡ ಭಾರತವನ್ನ ನೋಡಬೇಕೆಂದು ಸ್ವಾಮೀಜಿ ಹೇಳಿದರು.
ಮಾಗಡಿ ತಾಲೂಕಿನ ಅತ್ಯಾಚಾರ ಪ್ರಕರಣ
ಅತ್ಯಾಚಾರಿಗಳ ಜನನಾಂಗ ಕಟ್ ಮಾಡುವಂತೆ ಶ್ರೀ ಬಸವ ಪ್ರಕಾಶ ಸ್ವಾಮೀಜಿ ಆಗ್ರಹ
ಬಾಗಲಕೋಟೆ ಕೂಡಲ ಸಂಗಮದ ಬಸವ ಧರ್ಮಪೀಠದ ಸ್ವಾಮೀಜಿ ಹೇಳಿಕೆ
ಧಾರವಾಡದಲ್ಲಿ ಸ್ವಾಮೀಜಿ ಹೇಳಿಕೆ
ಪೊಲೀಸರು ಬಂಧಿಸೋದು, ಜಾಮೀನು ಕೊಡವುದು ಆಗಬಾರದು
ಅತ್ಯಾಚಾರಿಗಳ ಜನನಾಂಗ ಕಟ್ ಮಾಡುಗ ಕಾನೂನು ಬರಬೇಕು
ಆಗ ಮಾತ್ರ ಭಾರತದಲ್ಲಿ ಅತ್ಯಾಚಾರ ಕಡಿಮೆ ಆಗುತ್ತವೆ
ಹೆಣ್ಣು ಮಕ್ಕಳು ಉಡುಗೆ ತೊಡುಗೆ ಬಗ್ಗೆಯೂ ಕಾಳಜಿ ವಹಿಸಬೇಕು
ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮ ತಲೆ ಮೇಲೆ ಸೆರಗು ಹಾಕಿಕೊಂಡು ಯುದ್ಧ ಮಾಡಿದ್ದಾರೆ
ಆದರೆ ನಮ್ಮ ಯುವತಿಯರು
ಹೊಸ ವರ್ಷ ಬಂದರೆ ಎಂಜಿ, ಬ್ರಿಗೆಡ್ ರೋಡ್ನಲ್ಲಿ ಇರತಾರೆ
ತುಂಡು ಬಟ್ಟೆ ಹಾಕಿಕೊಂಡು ಕುಣಿಯುತ್ತಾರೆ
ಇದರಿಂದ ಪುರುಷರ ಮನುಷ್ಯ ಪ್ರಚೋದನೆಗೊಳಗಾಗಿ ಕೆಲ ಸಂದರ್ಭಗಳಲ್ಲಿ ಅತ್ಯಾಚಾರ ಆಗುತ್ತಿವೆ
ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಇದರಿಂದ ಅತ್ಯಾಚಾರ ಆಗುತ್ತಿವೆ
ಸ್ತ್ರೀಯರು ಮೊದಲು ತಾವು ಹೇಗೆ ಇರಬೇಕು ಅನ್ನೋದು ಗೊತ್ತಿರಬೇಕಲ್ವ
ಉಡುಗೆ, ತೊಡುಗೆಯಲ್ಲಿ ಎಚ್ಚೆತ್ತುಕೊಳ್ಳಬೇಕಲ್ವ