‘ಸಾಬೂನು-ಸಾವುಕಾರ’ಗೆ ಸೇಬು ಮಾಲೆ: ವಾಣಿಜ್ಯನಗರಿಯಲ್ಲೂ ಆರಂಭವಾಯಿತು ಬೆಂಗಳೂರು ಮೋಡಿ..
1 min readಹುಬ್ಬಳ್ಳಿ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕಂಪನಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುವ ನಗರದ ಭಾರತೀಯ ಜನತಾ ಪಕ್ಷದ ಮುಖಂಡ ಮಲ್ಲಿಕಾರ್ಜುನ ಸಾವುಕಾರ ಅವರಿಗೆ ಸೇಬು ಹಣ್ಣಿನ ಮಾಲೆಯನ್ನ ಹಾಕುವ ಮೂಲಕ ಅವರ ಅನುಯಾಯಿಗಳು ಶುಭಾಶಯ ಕೋರಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕೆ ವಿಭಾಗದಲ್ಲಿ ಬರುವ ಕಂಪನಿಗೆ ನೇಮಕವಾದ ಕಾರಣ, ಮಲ್ಲಿಕಾರ್ಜುನ ಸಾವುಕಾರ ಅವರಿಗೆ ಸತ್ಕಾರ ಮಾಡಿರುವುದು ಹೊಸತನದಿಂದ ಕೂಡಿದೆ.
ಕೇವಲ ರಾಜಧಾನಿ ಬೆಂಗಳೂರಿಗೆ ಸೀಮಿತವಾಗಿದ್ದ ಸೇಬಿನ ಹಾರಗಳು ಇದೀಗ ವಾಣಿಜ್ಯನಗರಿಗೂ ಬಂದಿದೆ. ಕೊರೋನಾ ಮಹಾಮಾರಿ ಹೆಚ್ಚುತ್ತಿರುವ ಸಮಯದಲ್ಲೂ ಇಂತಹ ನಿರ್ಣಯವನ್ನ ಸಾವುಕಾರ ಅನುಯಾಯಿಗಳು ತೆಗೆದುಕೊಂಡಿದ್ದಾರೆ.
ಭಾರತೀಯ ಜನತಾ ಪಕ್ಷದಲ್ಲಿ ತಮ್ಮದೇ ಆದ ಪ್ರಾಮುಖ್ಯತೆಯನ್ನ ಹೊಂದಿರುವ ಮಲ್ಲಿಕಾರ್ಜುನ ಸಾವುಕಾರ, ಇದಕ್ಕೇಲ್ಲ ಅವಕಾಶ ಕೊಡುವವರು ಅಲ್ಲ, ಆದರೂ ಕೊರಳನ್ನ ಕೊಟ್ಟು ಮಾಲೆ ಹಾಕಿಸಿಕೊಂಡಿದ್ದಾರೆ. ಇದೇ ಹಣ್ಣು ಬಡವರಿಗೆ ಸೇರುವಂತೆ ಮಾಡಿದ್ದರೇ, ಶುಭಾಶಯದ ಸತ್ಕಾರ ಇನ್ನೂ ಸೊಬಗಿನಿಂದ ಕೂಡಿರುತ್ತಿತ್ತು ಅಲ್ಲವೇ..!