ಪಾಲಿಕೆ ಸ್ವಚ್ಛತಾ ಸಿಬ್ಬಂದಿ ಆತ್ಮಹತ್ಯೆ ಪ್ರಕರಣ: ಗುತ್ತಿಗೆದಾರ ಇನ್ನೂ ಕೇಸ್ ಇಲ್ಲಾ..
1 min readಧಾರವಾಡ: ಗುತ್ತಿಗೆದಾರನ ಕಿರುಕುಳದಿಂದ ಬೇಸತ್ತು ಮಹಿಳಾ ಕಾರ್ಮಿಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡದ ಜನ್ನತನಗರದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇನ್ನೂವರೆಗೂ ಗುತ್ತಿಗೆದಾರನ ಮೇಲೆ ಯಾವುದೇ ಕಾನೂನು ಕ್ರಮವಾಗದ ಹಿನ್ನೆಲೆಯಲ್ಲಿ ಹಲವು ಸಂಶಯಗಳು ಮೂಡಿವೆ.
19ನೇ ವಾರ್ಡಿನ ಗುತ್ತಿಗೆದಾರ ನರಸಿಂಹ ಸಗಬಾಲ್ ಎನ್ನುವವರ ಕಿರುಕುಳದಿಂದಲೇ ತಾವು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಮಂಜುಳಾ ಮಾದರ ಆರೋಪ ಮಾಡಿದ್ದು, ಪಿಎಫ್ ಹಣ ಕೊಟ್ಟಿಲ್ಲವೆಂದು ದೂರು ನೀಡಿದ್ದಕ್ಕೆ ತಮಗೆ ತೊಂದರೆ ಕೊಡಲಾಗುತ್ತಿದೆ ಎಂದು ಆರೋಪಿಸಿದ್ದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಮಿಕರ ಸ್ಥಿತಿ ಅಧೋಗತಿಗೆ ಹೋಗುತ್ತಿರುವುದಕ್ಕೆ ಗುತ್ತಿಗೆದಾರರೇ ಕಾರಣವೆಂಬ ಹಲವು ಆರೋಪಗಳು ಕೇಳಿ ಬರುತ್ತಿದ್ದವು. ಇದೀಗ ಇಂತಹ ದೂರಿಗೆ ಘಟನೆಯೊಂದು ಸಾಕ್ಷಿಯಾಗಿತ್ತಾದರೂ, ಇಲ್ಲಿಯವರೆಗೆ ರಾಜಕಾರಣಿಗಳ ಒತ್ತಡದಿಂದ ಪ್ರಕರಣವನ್ನ ಪೊಲೀಸರು ದಾಖಲು ಮಾಡಿಲ್ಲವೆಂದು ಹೇಳಲಾಗುತ್ತಿದೆ.
ವಿದ್ಯಾಗಿರಿ ಠಾಣೆಯ ಪೊಲೀಸರು ಪ್ರಕರಣದ ಗಂಭೀರತೆಯನ್ನ ಅರಿತು ನಡೆದುಕೊಳ್ಳುತ್ತಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ಕುಟುಂಬದವರು ದೂರುತ್ತಿದ್ದಾರೆ.