Karnataka Voice

Latest Kannada News

ಗೋವಾ ಮಾಲು: ಹುಬ್ಬಳ್ಳಿಯ ಇಬ್ಬರ ಬಂಧನ, ಕಾರು ವಶ

ಕಾರವಾರ: ಅಕ್ರಮವಾಗಿ ಕಾರಿನಲ್ಲಿ ಗೋವಾ ಮದ್ಯವನ್ನ ಸಾಗಾಟ ಮಾಡುತ್ತಿದ್ದ ಹುಬ್ಬಳ್ಳಿ ಮೂಲದ ಇಬ್ಬರನ್ನ ಕಾರವಾರ ತಾಲೂಕಿನ ಮಾಜಾಳಿ ಚೆಕ್ ಪೋಸ್ಟ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಬ್ಬಳಿಯ ಆರೋಪಿಗಳಾದ ಸಂದೀಪ ಜರತಾರಘರ ಹಾಗೂ ನಾರಾಯಣ ಎಂಬುವವರು ಗೋವಾದಿಂದ ತಮ್ಮ ಕಾರಿನಲ್ಲಿ ಸುಮಾರು 85800 ರೂ. ಮೌಲ್ಯದ ಮದ್ಯ ಅಕ್ರಮವಾಗಿ ಸಾಗಿಸುತ್ತಿದ್ದರು. ಚೆಕ್ ಪೋಸ್ಟ್ ಬಳಿ ತಪಾಸಣೆ ಮಾಡುತ್ತಿದ್ದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.

ತಪಾಸಣೆ ನಡೆಸುವ ವೇಳೆ ವಾಹನ ನಿಲ್ಲಿಸದೇ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದರು. ಈ ಮಾಹಿತಿ ತಕ್ಷಣ ಚಿತ್ತಾಕುಲಾ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಚಿತ್ತಾಕುಲ ಠಾಣೆಯ ಪಿಎಸೈ ಪ್ರವೀಣಕುಮಾರ ಹಾಗೂ ಕ್ರೈಂ ಪಿಎಸೈ ಮಾಹಾತೇಶ ತಕ್ಷಣ , ಅಕ್ರಮ ಮದ್ಯವಿದ್ದ, ವಾಹನವನ್ನು ಹಿಡಿದು ವಶಕ್ಕೆ ಪಡೆದು, ಇಬ್ಬರನ್ನ ಬಂಧನ ಮಾಡಿದ್ದಾರೆ. ಈ ಬಗ್ಗೆ ಚಿತ್ತಾಕುಲ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *