Karnataka Voice

Latest Kannada News

2028ಕ್ಕೆ ನವಲಗುಂದ ಕ್ಷೇತ್ರಕ್ಕೆ “ವಿನೋದ ಅಸೂಟಿ Mla”- ಅಜ್ಮೀರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ “ಮೂಲ ಕಾಂಗ್ರೆಸ್ಸಿಗರು”…

ನವಲಗುಂದ: ವಿನೋದ ಅಸೂಟಿ ಗೆಲುವಿಗಾಗಿ ಅಜ್ಮೀರ್ ದರ್ಗಾದಲ್ಲಿ ಅಭಿಮಾನಿಗಳ ವಿಶೇಷ ಪ್ರಾರ್ಥನೆ

ನವಲಗುಂದ: ಕ್ಷೇತ್ರದ ಯುವ ಕಾಂಗ್ರೆಸ್ ಮುಖಂಡ ವಿನೋದ ಅಸೂಟಿ ಅವರ ಮೇಲಿನ ಜನಾಭಿಮಾನ ಗಡಿ ದಾಟಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರ ಗೆಲುವಿಗಾಗಿ ಅಭಿಮಾನಿಗಳು ಹಾಗೂ ಮತದಾರರು ಜಗತ್ ಪ್ರಸಿದ್ಧ ಅಜ್ಮೀರ್‌ನ ಖ್ವಾಜಾ ಗರೀಬ್ ನವಾಜ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ (ದುವಾ) ಸಲ್ಲಿಸಿದ್ದಾರೆ.

​ದರ್ಗಾದಲ್ಲಿ ನಾಯಕನ ಭಾವಚಿತ್ರ ಹಿಡಿದು ಭಾವುಕರಾಗಿ ಪ್ರಾರ್ಥಿಸಿದ ಬೆಂಬಲಿಗರು, “ವಿನೋದ ಅಸೂಟಿ ಅವರು ಶಾಸಕರಾಗುವುದು ಕೇವಲ ನಮ್ಮ ಕನಸಲ್ಲ, ಕ್ಷೇತ್ರದ ಪ್ರತಿಯೊಬ್ಬ ಬಡವನ ಹಾರೈಕೆಯಾಗಿದೆ” ಎಂದು ನುಡಿದಿದ್ದಾರೆ. ಜಾತಿ-ಧರ್ಮದ ಬೇಧ ಮರೆತು ನಡೆದ ಈ ವಿಶೇಷ ಪ್ರಾರ್ಥನೆ, ಕ್ಷೇತ್ರದಲ್ಲಿ ಅಸೂಟಿ ಅವರು ಜನಸಾಮಾನ್ಯರ ಹೃದಯದಲ್ಲಿ ಎಷ್ಟು ಆಳವಾಗಿ ಮನೆಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *