ಬಿಜೆಪಿಯಲ್ಲಿದ್ದಾಗ “ಸರಿ”- ಕಾಂಗ್ರೆಸ್ಗೆ ಬಂದಾಗ “ತಪ್ಪು”: ಅದೆಂಗ್ರಿ ಲಿಂಬಿಕಾಯಿ ಸರ್..!? ಹೋರಾಟಗಾರ “ಬಿಕೆ” ನೇರ ಪ್ರಶ್ನೆ…
ಧಾರವಾಡ: ಶಾಸಕರ ಪರವಾಗಿ ಮೌನ ಮೆರವಣಿಗೆ ಮಾಡಿದ್ದು, ಅವರ ಇಷ್ಟ. ಆದರೆ, ಕಾನೂನು ಗೊತ್ತಿರುವ ಮಾಜಿ ವಿಧಾನಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಅವರು ದಾರಿ ತಪ್ಪಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದು ಬೇಸರ ಮೂಡಿಸಿದೆ ಎಂದು ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈಗ ಕಾಂಗ್ರೆಸ್ ಸೇರಿರುವ ಮೋಹನ ಲಿಂಬಿಕಾಯಿ ಅವರಿಗೆ ಬಿಜೆಪಿಯಲ್ಲಿ ಇದ್ದಾಗ ಈ ಪ್ರಕರಣದಲ್ಲಿ ತಪ್ಪಾಗಿದೆ ಎಂದು ಅನಿಸಲಿಲ್ಲವೇ. ಪಕ್ಷ ಬದಲಾದ ತಕ್ಷಣ ಅಭಿಪ್ರಾಯಗಳು ಬದಲಾದರೇ ಹೇಗೆ ಎಂದು ಬಸವರಾಜ ಅವರು ಪ್ರಶ್ನಿಸಿದರು.
ಮೌನ ಮೆರವಣಿಗೆ ಮಾಡಿದ್ದು ಮತ್ತು ಶಾಸಕರ ಕುಟುಂಬದ ಪರವಾಗಿ ನಿಂತಿರುವುದು ಅವರ ಅಭಿಪ್ರಾಯ. ಅದಕ್ಕೆ ನನ್ನದೇನು ಅಭ್ಯಂತರವಿಲ್ಲ. ಕಾನೂನು ರೀತಿಯ ಹೋರಾಟ ನನ್ನಿಂದ ಈ ವಿಷಯದಲ್ಲಿ ಮುಂದುವರೆಯತ್ತೆ ಎಂದರು.
ಇಂದು ಬೆಳಿಗ್ಗೆ ಮಾಧ್ಯಮದವರ ಜೊತೆ ಮಾತನಾಡಿರುವ ಬಸವರಾಜ ಕೊರವರ ಅವರ ಹೇಳಿಕೆಯನ್ನ ಕೆಲವರು ತಪ್ಪಾಗಿ ಅರ್ಥೈಸಿಕೊಂಡು, ಇದಕ್ಕೆ ಬೇರೆ ಸ್ವರೂಪ ಕೊಡುವ ಪ್ರಯತ್ನ ಮಾಡುತ್ತಿರುವುದು ತಮಗೆ ಸೋಜಿಗ ಮೂಡಿಸಿದೆ ಎಂದು ಆಭಿಪ್ರಾಯಪಟ್ಟಿದ್ದಾರೆ.
