Karnataka Voice

Latest Kannada News

“ಹಿಂದೂಗಳ ಗಟ್ಟಿ ಧ್ವನಿ” ಜಯತೀರ್ಥ ಕಟ್ಟಿ ‘Mla’ ಆಗ್ಲಿ- ಸಿದ್ಧಾರೂಢನ ಸನ್ನಿಧಿಯಲ್ಲಿ ಮಾರ್ಧನಿಸಿದ ಘೋಷಣೆ…

ಹುಬ್ಬಳ್ಳಿ: ಸದಾಕಾಲ ಹಿಂದೂಗಳ ಪರವಾಗಿ ಹೋರಾಟ ನಡೆಸುತ್ತ ಬಂದಿರುವ ‘ಹಿಂದೂಗಳ ಗಟ್ಟಿ ಧ್ವನಿ’ ಎಂದೇ ಗುರುತಿಸಲ್ಪಡುವ ಜಯತೀರ್ಥ ಕಟ್ಟಿ ಅವರು ಮುಂಬರುವ ದಿನಗಳಲ್ಲಿ ಶಾಸಕರಾಗಬೇಕೆಂದು ಅಭಿಮಾನಿಗಳು ಶ್ರೀ ಸಿದ್ಧಾರೂಢನ ಸನ್ನಿಧಿಯಲ್ಲಿ ಘೋಷಣೆ ಕೂಗಿದರು.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢನ ಜಾತ್ರೆಯ ಅಂಗವಾಗಿ ಭಕ್ತರಿಗೆ ಪ್ರಸಾದ ಕಾರ್ಯವನ್ನ ಆಯೋಜನೆ ಮಾಡಿದ್ದ ಜಯತೀರ್ಥ ಕಟ್ಟಿ ಅಭಿಮಾನಿ ಬಳಗದಲ್ಲಿ, ಕಟ್ಟಿಯವರ ಸಾಮಾಜಿಕ ಬದ್ಧತೆಯನ್ನ ಸ್ಮರಿಸಲಾಯಿತು.

ಇಲ್ಲಿದೆ ನೋಡಿ ಸಂಪೂರ್ಣ ವೀಡಿಯೋ…

ಸಾವಿರಾರು ಹಿಂದೂಗಳ ಮನದಲ್ಲಿ ಮನೆ ಮಾಡಿರುವ ಜಯತೀರ್ಥ ಕಟ್ಟಿಯವರು, ಸಾಕಷ್ಟು ಕೆಲಸಗಳನ್ನ ಸದ್ದಿಲ್ಲದೆ ಮಾಡಿ ಮುಗಿಸಿರುತ್ತಾರೆ. ಒಂದು ಕೈಯಿಂದ ಮಾಡಿದ ಕೆಲಸವನ್ನ ಮತ್ತೊಂದು ಕೈಗೆ ಗೊತ್ತಾಗದಂತೆ ನೋಡಿಕೊಳ್ಳುತ್ತಾರೆ. ಇಂಥವರು ಮುಂದಿನ ದಿನಗಳಲ್ಲಿ ಶಾಸಕರಾಗಬೇಕೆಂದು ಆರೂಢನಲ್ಲಿಯೂ ಪ್ರಾರ್ಥಿಸಿದರು.

ಭಕ್ತರಿಗೆ ಇದೇ ಸಮಯದಲ್ಲಿ ಪ್ರಸಾಧವನ್ನ ಜಯತೀರ್ಥ ಕಟ್ಟಿಯವರು ಸೇರಿದಂತೆ ಹಲವರು ವಿತರಣೆ ಮಾಡಿ, ಶ್ರೀ ಸಿದ್ಧಾರೂಢರ ಕೃಪೆಗೆ ಪಾತ್ರರಾದರು.

Leave a Reply

Your email address will not be published. Required fields are marked *