Karnataka Voice

Latest Kannada News

ಪಿಯುಸಿ ದ್ವೀತಿಯ ಪರೀಕ್ಷೆ ರದ್ದು: ಸಚಿವ ಸುರೇಶಕುಮಾರ ಘೋಷಣೆ..

ಬೆಂಗಳೂರು: ಕೇಂದ್ರ ಸರಕಾರ ಸಿಬಿಎಸ್ಸಿ ದ್ವೀತಿಯ ಪಿಯುಸಿ ಪರೀಕ್ಷೆ ರದ್ದು ಮಾಡಿದ ಹಿನ್ನೆಲೆಯಲ್ಲಿ, ಕರ್ನಾಟಕ ಕೂಡಾ ಪಿಯುಸಿ ದ್ವೀತಿಯ ಪರೀಕ್ಷೆಯನ್ನ ರದ್ದು ಮಾಡಿ ಆದೇಶ ಮಾಡಿದೆ.

ಈ ಬಗ್ಗೆ ಸಚಿವ ಸುರೇಶಕುಮಾರ ಮಾತನಾಡಿದ್ದು, ಪರೀಕ್ಷೆ ನಡೆಸದೇ ಪಿಯುಸಿ ದ್ವೀತಿಯ ವರ್ಗದ ವಿದ್ಯಾರ್ಥಿಗಳನ್ನ ಪಾಸ್ ಮಾಡಲಾಗುವುದು. ಪ್ರಥಮ ಪಿಯುಸಿಯ ಗ್ರೇಡ್ ಆಧರಿಸಿ, ಕ್ರಮ ತೆಗೆದುಕೊಳ್ಳಲಾಗುವುದೆಂದು ಹೇಳಿದರು.

ಆದರೆ, ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನ ನಡೆಸಲು ರಾಜ್ಯ ಸರಕಾರ ಮುಂದಾಗಿದ್ದು, ಗಣಿತ, ವಿಜ್ಞಾನ, ಸಾಮಾಜಿಕ ವಿಜ್ಞಾನ ಒಂದೇ ಮಾಡಿ ಮಾಡಲಾಗುವುದೆಂದು ಹೇಳಿದರು.

ಪರೀಕ್ಷೆಯನ್ನ ಜುಲೈ ಮೂರನೇಯ ವಾರದಲ್ಲಿ ಮಾಡಲು ತೀರ್ಮಾನ ಮಾಡಲಾಗುವುದೆಂದು ಸಚಿವರು ಹೇಳಿದರು.

Leave a Reply

Your email address will not be published. Required fields are marked *