Posts Slider

Karnataka Voice

Latest Kannada News

ಬದಾಮಿ ಅಭಿವೃದ್ಧಿಗೆ 25 ಕೋಟಿ : ಗೆಳೆತನ ನಿಭಾಯಿಸಿದ ಸಿ.ಎಂ. ಯಡಿಯೂರಪ್ಪ

Spread the love

ಬೆಂಗಳೂರು: ಬದಾಮಿ ಕ್ಷೇತ್ರದ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ 25 ಕೋಟಿ ರೂಪಾಯಿ ಕೊಡುವ ಮೂಲಕ ಮಾಜಿ ಸಿಎಂ ಸಿದ್ಧರಾಮಯ್ಯ ಪರವಾಗಿ ತಮಗಿರುವ ಕಾಳಜಿಯನ್ನ ಸಿಎಂ ಯಡಿಯೂರಪ್ಪ ತೋರಿಸಿದ್ದು, ಈ ಇಬ್ಬರ ಸ್ನೇಹ ಎಷ್ಟೊಂದು ಗಾಢವಾಗಿದೆ ಎಂದು ಎಲ್ಲರಿಗೂ ತಿಳಿಯುವಂತಾಗಿದೆ.

ಮೊನ್ನೆ ಮೊನ್ನೆಯಷ್ಟೇ ಸಿಎಂ ಯಡಿಯೂರಪ್ಪ ಬರ್ತಡೇ ಆಚರಿಸಿಕೊಳ್ಳುವಾಗಲೂ ಅರಮನೆ ಮೈದಾನಕ್ಕೆ ಹೋಗಿ ಶುಭಾಶಯ ತಿಳಿಸಿದ್ದ ಮಾಜಿ ಸಿಎಂ ಸಿದ್ಧು, ರಾಜಕೀಯವೇ ಬೇರೆ ಸಂಬಂಧಗಳೇ ಬೇರೆ ಎಂದಿದ್ದರು. ಅಷ್ಟೇ ಅಲ್ಲ, ತಮ್ಮ ಚುನಾಯಿತ ಕ್ಷೇತ್ರಕ್ಕೆ ಹಣ ಬಿಡುಗಡೆ ಮಾಡುವಂತೆ ಕೋರಿ ಈ ಹಿಂದೆ ಸಿದ್ಧು ಪತ್ರವನ್ನ ಕೊಟ್ಟಿದ್ದರು. ಇದನ್ನೇಲ್ಲ ಪರಿಗಣಿಸಿರುವ ಸಿಎಂ ಯಡಿಯೂರಪ್ಪ 25 ಕೋಟಿ ರೂಪಾಯಿ ನೀಡುವ ಮೂಲಕ ತಮ್ಮ ಪ್ರೀತಿಯನ್ನ ಮತ್ತಷ್ಟು ಕಾಯಂಗೊಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *