Posts Slider

Karnataka Voice

Latest Kannada News

ಕೊರೋನಾಗೆ ಶಿಕ್ಷಕ ಬಲಿ- ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂತಾಪ

1 min read
Spread the love

ಧಾರವಾಡ: ಶಿಕ್ಷಕ ವೃತ್ತಿಯನ್ನ ಅತೀವವಾಗಿ ಪ್ರೀತಿಸುತ್ತಲೇ ಕೊರೋನಾ ಸಮಯದಲ್ಲೂ ವಠಾರ ಶಾಲೆಯ ಪಾಠ ಮಾಡಿದ್ದ ಶಿಕ್ಷಕ ಮೋತಿಲಾಲ ರಾಠೋಡ ಕೋವಿಡ್‌ನಿಂದ ಸಾವನ್ನಪ್ಪಿರುವುದಕ್ಕೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡ ತೀವ್ರ ಸಂತಾಪ ವ್ಯಕ್ತಪಡಿಸಿದೆ.


ಈ ಕುರಿತು ಹೇಳಿಕೆ ನೀಡಿರುವ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಬಿ, ಗಂಗಾವತಿ ತಾಲೂಕಿನ ಬಸವಕಲ್ಯಾಣ ತಾಂಡಾದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಮೋತಿಲಾಲ ರಾಠೋಡ ಕೊರೋನಾ ಪಾಸಿಟಿವ್‌ನಿಂದ ನಿಧನರಾಗಿದ್ದು ಶಿಕ್ಷಕ ಬಳಗಕ್ಕೆ ತೀವ್ರ ದುಃಖಕರ ಸಂಗತಿಯಾಗಿದೆ ಎಂದಿದ್ದಾರೆ.
ನಾಲ್ಕು ದಿನದ ಹಿಂದೆಯೂ ತಮ್ಮ‌ ಸೇವೆ ಸಲ್ಲಿಸಿದ ಶಿಕ್ಷಕ ನಮ್ಮನ್ನ ಅಗಲಿದ್ದು, ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಪ್ರಾರ್ಥಿಸಿದ್ದಾರೆ.


Spread the love

Leave a Reply

Your email address will not be published. Required fields are marked *