Posts Slider

Karnataka Voice

Latest Kannada News

EXCLUSIVE ಪ್ರೂಟ್ ಇರ್ಫಾನ್ ಕೊಲೆ- ಗುಂಡು ಹಾರಿಸಿದ್ದು ಬಾಂಬೆಯವರಲ್ಲ..! ಬಂಧನವಾದ ಮತ್ತೀಬ್ಬರು ಎಲ್ಲಿಯವರು ಗೊತ್ತಾ..?

1 min read
Spread the love

ಹುಬ್ಬಳ್ಳಿ: ಆಗಸ್ಟ್ 6 ರಂದು ಹಾಡುಹಗಲೇ ಕೊಲೆ ಮಾಡಿ ಪರಾರಿಯಾಗಿದ್ದ ಸುಪಾರಿ ಕಿಲ್ಲರ್ ಗಳನ್ನ ಬಂಧಿಸುವಲ್ಲಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಬಾಂಬೆಯವರಲ್ಲ ಮೈಸೂರಿನವರು ಎಂಬುದು ಗೊತ್ತಾಗಿದೆ.

ದಿನಾಂಕ: 06.08.2020 ರಂದು ಸಂಜೆ 5-30 ಗಂಟೆಯ ಸುಮಾರಿಗೆ  ಹುಬ್ಬಳ್ಳಿಯ ಕಾರವಾರ ರಸ್ತೆ, ಅಲ್ ತಾಜ್ ಹೊಟೇಲ್ ಮುಂದುಗಡೆ ಧಾರವಾಡದ ರೌಡಿಶೀಟರ  ಇರ್ಫಾನ್@ಫ್ರೂಟಇರ್ಫಾನ್  ಹಂಚಿನಾಳ ಮೇಲೆ ಎರಡು ದ್ವಿಚಕ್ರ ವಾಹನಗಳ ಮೇಲೆ ಬಂದ ಆರೋಪಿತರು ಪಿಸ್ತೂಲುಗಳಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದರು.

ತಾಂತ್ರಿಕ ವಿಧಾನದ ತನಿಖೆಯಿಂದ ಈ ಒಳಗಾಗಿ ದಿನಾಂಕ: 14.08.2020 ರಂದು 5 ಜನ ಆರೋಪಿತರಿಗೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕೊಲೆ ಮಾಡಲು ಆರೋಪಿ ಬಚ್ಚಾಖಾನ್ ಈತನಿಗೆ ಸಹಕರಿಸಿದ ಇಬ್ಬರನ್ನ ಬಂಧನ ಮಾಡಲಾಗಿದ್ದು, ಅವರಿಂದ ೆರಡು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನ ಮೈಸೂರಿನ ಬನ್ನಿ ಮಂಟಪ ಲೇಔಟ್ ನ ಶಿವರಾತ್ರಿ ಶೇಶ್ವನಗರ (ೆಸ್.ಎಸ್.ನಗರ)ದ ನಿವಾಸಿ ಶಹಜಾನ್ ಕೆ ಅಶ್ರಫ್ ಕೆ(ಕುಣ ಕತ್) ಹಾಗೂ ಮೈಸೂರ ಗಾಂಧಿನಗರದ  ಸೈಯದಸೋಹೈಲ್ ಪೀರ ಸೈಯ್ಯದಆಜೀಮ ಪೀರ ಎಂದು ಗುರುತಿಸಲಾಗಿದೆ.

ಕೊಲೆ ಆರೋಪಿಗಳನ್ನ ಬಂಧಿಸುವಲ್ಲಿ ಕಾರ್ಯಕ್ಷಮತೆ ಮೆರೆದ ಹಳೇಹುಬ್ಬಳ್ಳಿ ಠಾಣೆ ಇನ್ಸ್ ಪೆಕ್ಟರ್ ಶಿವಾನಂದ ಕಮತಗಿ ಹಾಗೂ ಅಶೋಕನಗರ ಠಾಣೆ ಇನ್ಸ್ ಪೆಕ್ಟರ್ ರವಿಚಂದ್ರ ಬಗ್ಗೆ ಆಯುಕ್ತರು ಹರ್ಷವ್ಯಕ್ತಪಡಿಸಿದ್ದಾರೆ.


Spread the love

Leave a Reply

Your email address will not be published. Required fields are marked *