ಯತ್ನಾಳ ತಲೆಗೆ ನಾಲಿಗೆಗೆ ಲಿಂಕ್ ಇಲ್ಲ: ಬಿಜೆಪಿ ಮಾಜಿ ಶಾಸಕ
ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾಗುತ್ತಾರೆ ಎಂಬ ಹೇಳಿಕೆ ನೀಡಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡಾ ಪಾಟೀಲ ಯತ್ನಾಳ ವಿರುದ್ದ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಶಾಸಕ ಯತ್ನಾಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ ದಲ್ಲಿ ಮಾತನಾಡಿರುವ ಪಟ್ಟಣಶೆಟ್ಟಿ, ಯತ್ನಾಳ ಅವರು ಪ್ರಬುದ್ದತೆ ಇಲ್ಲದ ರಾಜಕಾರಣಿ, ಒಮ್ಮೆ ಸಿಎಂ ಯಡಿಯೂರಪ್ಪನವರನ್ನು ಹೊಗಳುತ್ತಾರೆ, ಇನ್ನೊಮ್ಮೆ ತೆಗಳುತ್ತಾರೆ, ಮನಸಿಗೆ ಬಂದಂಗ ಮಾತಾನಾಡುತ್ತಾರೆ, ಅವ್ರಿಗೆ ತಲೆಗೆ ಮತ್ತು ನಾಲಿಗೆಗೆ ಲಿಂಕ್ ಇಲ್ಲಾ ಎಂದು ಎಂದು ವಾಗ್ದಾಳಿ ನಡೆಸಿದ್ದಾರೆ.
ಯತ್ನಾಳ ಅವರು ಯಾರ ಯಾರ ಕಾಲ ಹಿಡಿದಿದ್ದಾರೆ. ಚುನಾವಣೆ ಬಂದಾಗ ಅದು ನಮಗೆ ಗೊತ್ತಿದೆ, ಅದಕ್ಕೆಲ್ಲ ಸಾಕ್ಷಿ ಕೊಡಲು ಆಗುವದಿಲ್ಲ. ಈಗ ರಾಜ್ತದಲ್ಲಿ ನಡೆಯುತ್ತಿರುವ ಉಪ ಚುನಾವಣೆಯ ದಾರಿ ತಪ್ಪಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಅಚಾನಕ್ ಆಗಿ ಯತ್ನಾಳ ಕೇಂದ್ರ ಸಚಿವರಾಗಿದ್ದು. ಅವರೇನೂ ಸ್ವ ಸಾಮರ್ಥ್ಯದಿಂದ ಕೇಂದ್ರ ಸಚಿವರಾಗಿಲ್ಲ. ಯಾರದೋ ಕೃಪೆಯಿಂದ ಸಚಿವರಾಗಿದ್ದರು, ಸಚಿವರಾಗಿದ್ದೆ ರಾಷ್ಟ್ರೀಯ ನಾಯಕರೆನೆಸಿಕೊಂಡಿದ್ದಾರೆ. ಅವರು ರಾಷ್ಟ್ರೀಯ ನಾಯಕರು ಅಲ್ಲಾ ರಾಜ್ಯ ನಾಯಕನು ಅಲ್ಲಾ, ವಿಜಯಪುರ ಜಿಲ್ಲೆಯ ನಾಯಕನಂತ್ರೂ ಅಲ್ಲವೇ ಅಲ್ಲಾ. ಅವ್ರಿಗೆ ಜಿಲ್ಲೆಯ ಯಾವ ಶಾಸಕರು, ಮಾಜಿ ಶಾಸಕರು, ಹಾಗೂ ಬಿಜೆಪಿ ಪದಾಧಿಕಾರಿಗಳ ಬೆಂಬಲ ಇಲ್ಲ, ಮೊದಲು ತಮ್ಮ ಮನೆ ಸರಿಯಿಡಲಿ ಎಂದು ಏಕವಚನ ದಲ್ಲಿ ವಾಗ್ದಾಳಿ ನಡೆಸಿದ್ರು. ಅಲ್ಲದೇ ತಕ್ಷಣ ಅವರ ಮೆಲೆ ಶಿಸ್ತಿನ ಕ್ರಮ ಜರುಗಿಸಬೇಕೆಂದು ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಒತ್ತಾಯಿಸಿದರು..