ಬಾಳೆಹೊನ್ನೂರು ಶಾಖಾ ಮಠದ ಸ್ವಾಮೀಜಿ ನೇಣಿಗೆ ಶರಣು
1 min read![](https://karnatakavoice.com/wp-content/uploads/2021/02/WhatsApp-Image-2020-11-25-at-12.17.41-PM-1.jpeg)
ಹಾಸನ : ಪಂಚ ಪೀಠಗಳ ವಿವಾದ ಬೇರೆ ಬೇರೆ ಸ್ವರೂಪ ಪಡೆಯುತ್ತಿರುವಾಗಲೇ ಬಾಳೆಹೊನ್ನೂರು ಶಾಖಾ ಮಠದ ಸ್ವಾಮೀಜಿಯೋರ್ವರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಆಲೂಕಿನ ಕಾರ್ಜುವಳ್ಳಿಯಲ್ಲಿರುವ ಮಠದಲ್ಲಿ ನಡೆದಿದೆ.
ಬಾಳೆಹೊನ್ನೂರು ಶಾಖಾ ಮಠ ಆಲೂರು ತಾಲ್ಲೂಕಿನ ಕಾರ್ಜುವಳ್ಳಿಯಲ್ಲಿದ್ದು ಅದೇ ಮಠದಲ್ಲಿಯೇ ಶಂಭುಲಿಂಗ ಸ್ವಾಮೀಜಿ ನೇಣಿಗೆ ಶರಣಾಗಿದ್ದಾರೆ. ಕಳೆದ ರಾತ್ರಿಯೇ ಮಠದಲ್ಲಿಯೇ ಹೀಗೆ ಮಾಡಿಕೊಂಡಿರುವುದು ಬೆಳಗಿನ ಜಾವ ಭಕ್ತರು ಮಠಕ್ಕೆ ಹೋದಾಗ ಗೊತ್ತಾಗಿದೆ.
ಮಠದ ಭಕ್ತರು, ಸ್ವಾಮೀಜಿಯವರ ಆತ್ಮಹತ್ಯೆ ಪ್ರಕರಣದಿಂದ ಕಂಗಾಲಾಗಿದ್ದು, ದೇವರು ಹೀಗೆ ಕೈ ಕೊಡಬಾರದಿತ್ತೆಂದು ರೋಧಿಸುವಂತಾಗಿದೆ. ನಿನ್ನೆ ಕೂಡಾ ನೂರಾರು ಭಕ್ತರಿಗೆ ಆಶೀರ್ವಾದ ಮಾಡಿದ್ದ ಸ್ವಾಮೀಜಿಗಳ ಸಾವು, ಭಕ್ತರನ್ನ ದುಃಖದ ಮಡುವಿನಲ್ಲಿ ನೂಕಿದೆ.
ಆಲೂರು ಠಾಣೆಯ ಪೊಲೀಸರು ಸ್ಥಳಕ್ಕೆ ದಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸ್ವಾಮೀಜಿಗಳು ಆತ್ಮಹತ್ಯೆ ಯಾಕೆ ಮಾಡಿಕೊಂಡಿದ್ದಾರೆಂಬುದರ ಬಗ್ಗೆ ನಿಖರವಾಗಿ ತಿಳಿದು ಬಂದಿಲ್ಲ.