Karnataka Voice

Latest Kannada News

ಧಾರವಾಡ ಡಿಸಿ ಗನ್ ಮ್ಯಾನ್ ಗೂಂಡಾಗಿರಿ- ಅಮಾನತ್ತು ಮಾಡುವಂತೆ ಆಗ್ರಹ..!

ಧಾರವಾಡ: ಜಿಲ್ಲೆಯ ಜಿಲ್ಲಾಧಿಕಾರಿಗಳ ಗನ್ ಮ್ಯಾನ್ ಒಂದೀಡಿ ಗ್ರಾಮದ ಮೇಲೆ ದೌರ್ಜನ್ಯ ಮಾಡುತ್ತಿದ್ದು, ಆತನಿಂದ ಗ್ರಾಮದಲ್ಲಿ ಅಶಾಂತಿ ಮೂಡಿದೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾದವಾಡ ಗ್ರಾಮದ ಪ್ರಕಾಶ ಯಲ್ಲಪ್ಪ ಮಾಳಗಿ ಎಂಬ ಪೊಲೀಸ್, ಧಾರವಾಡ ಜಿಲ್ಲಾಧಿಕಾರಿಗಳು ಬಳಿ ಗನ್ ಮ್ಯಾನ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಈತನ ಉಪಟಳದಿಂದ ಯಾದವಾಡದ ಗ್ರಾಮದಲ್ಲಿ ಅಶಾಂತಿ ಮೂಡಿದೆ ಎನ್ನೋದು ಗ್ರಾಮಸ್ಥರ ದೂರು.

ಗನ್ ಮ್ಯಾನ್ ಇದ್ದಿದ್ದನ್ನೇ ಬಂಡವಾಳ ಮಾಡಿಕೊಂಡು ಗ್ರಾಮದಲ್ಲಿ ಈತನ ಸಹೋದರರು ದಬ್ಬಾಳಿಕೆ ಮಾಡುತ್ತಿದ್ದಾರಂತೆ. ಸುಭಾನಿ ಘಾಟಿನ ಎಂಬ ಸೈಕಲ್ ರಿಪೇರಿ ಮಾಡುವ ಹುಡುಗನಿಗೆ ಹೊಡೆದು ಬೆದರಿಕೆ ಹಾಕಲಾಗಿದೆಯಂತೆ. ಚೇತನ ಕೋಯಪ್ಪನವರ ಎಂಬ ಯುವಕನ ಜೊತೆಗಿದ್ದ ಐದು ಯುವಕರಿಗೆ ಹೊಡೆದು ಧಮಕಿ ಹಾಕಿದ್ದಾನಂತೆ ಎಂದು ದೂರಿನಲ್ಲಿ ಹೇಳಲಾಗಿದೆ.

Document

ತಕ್ಷಣವೇ ಗೂಂಡಾಗಿರಿ ಮಾಡುವ ಗನ್ ಮ್ಯಾನ್ ಪ್ರಕಾಶ ಮಾಳಗಿಯನ್ನ ಅಮಾನತ್ತು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿ ಮನವಿಯನ್ನ ಸಲ್ಲಿಸಿದರು.

Leave a Reply

Your email address will not be published. Required fields are marked *