Karnataka Voice

Latest Kannada News

“ಸ್ಪೋಟ” ಎದ್ನ್ಯೋ.. ಬಿದ್ನ್ಯೋ.. ಓಡಿದ್ದೆ ಓಡಿದ್ದು..!

ವಿಜಯಪುರ: ಸಣ್ಣದಾಗಿ ಹತ್ತಿಕೊಂಡ ಬೆಂಕಿ ಸಡನ್ನಾಗಿ ಹೆಚ್ಚಾಗಿ ಒಮ್ಮೆಗೆ ಸ್ಪೋಟಗೊಂಡ ಸದ್ದನ್ನ ಕೇಳಿ ಗ್ರಾಮಸ್ಥರೆಲ್ಲರೂ ನಾ ಮುಂದು ತಾ ಮುಂದು ಎಂದು ಓಡಿ ಹೋದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಹತ್ತಿರ ನಡೆದಿದೆ.

ಹೊತ್ತಿ ಉರಿಯುತ್ತಿರುವ ಟಿಸಿ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ವೇಳೆ ಏಕಾಏಕಿ ಟಿಸಿ ಸ್ಪೋಟಗೊಳ್ಳುತ್ತಿದಂತೆ ಗ್ರಾಮಸ್ಥರು ಮೊಬೈಲ್ ಬಿಟ್ಟು ಓಡಿ ಹೋಗಿದ್ದಾರೆ. ಇನ್ನು ಈ ಟಿಸಿ ಸ್ಪೋಟದಿಂದ ಗ್ರಾಮಸ್ಥರಲ್ಲಿ ಕೆಲ ಹೊತ್ತು ಭಯದ ವಾತಾವರಣ ಸೃಷ್ಟಿಸಿತ್ತು. ಹಲವು ಬಾರೀ ಟಿಸಿ ಬೇರೆಡೆಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಮಾನವಿ ಮಾಡಿದರು ಹೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಟಿಸಿಯ ಸ್ಪೋಟದಿಂದಅಕ್ಕಪಕ್ಕದ ಮನೆಯವರು ಹೊರಗೆ ಬಂದು ತಮ್ಮನ್ನ ಕಾಪಾಡಿಕೊಳ್ಳುವ ಪ್ರಯತ್ನ ಮಾಡಿದ್ರು. ಇಲಾಖೆಯವರ ಕಣ್ಣೀಗೆ ಇದು ಕಾಣಬೇಕಾಗಿದೆ.

Leave a Reply

Your email address will not be published. Required fields are marked *