ಧಾರವಾಡ ಶಹರ ಠಾಣೆ ಪೊಲೀಸರ ಕಾರ್ಯಾಚರಣೆ: ಅಮ್ಮಿನಬಾವಿ, ಧಾರವಾಡದ ಇಬ್ಬರು ಕಳ್ಳರ ಬಂಧನ…
ಧಾರವಾಡ: ಶಹರ ಮತ್ತು ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಆಸೀಪ್ ಬೇಗ್ (29) ಹಾಗೂ ಅಮ್ಮಿನಬಾವಿಯ ಗುರುಪ್ರಸಾದ ಉಳ್ಳಿಗೇರಿ (21) ಬಂಧಿತರು.
ಆರೋಪಿಗಳಿಂದ ₹4.50 ಲಕ್ಷ ಮೌಲ್ಯದ 31 ಗ್ರಾಂ ಚಿನ್ನ, ₹39,600 ಮೌಲ್ಯದ 124 ಗ್ರಾಂ ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ₹5,09,600/- ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.
ತನಿಖಾ ತಂಡ: ಇನ್ಸ್ಪೆಕ್ಟರ್ ಗುರುನಾಥ ಚವ್ಹಾಣ ನೇತೃತ್ವದಲ್ಲಿ ಪಿಎಸ್ಐಗಳಾದ ವಿನೋದ ಡಿ., ಪುನಿತ ಕುಮಾರ, ಸುನಿಲ ಎಮ್., ಸಿಬ್ಬಂದಿಗಳಾದ ಜಿ.ಜಿ. ಚಿಕ್ಕಮಠ, ಪ್ರವೀಣ ತಿರ್ಲಾಪೂರ, ಸಂತೋಷ ಪೂಜಾರ, ಬಿ.ಎಲ್. ಹನಮಣ್ಣವರ, ವೆಂಕಟೇಶ ನಾಯ್ಕ, ಎಮ್.ಆರ್. ಜ್ಯಾಲಿ ಹಾಗೂ ತಾಂತ್ರಿಕ ವಿಭಾಗದ ಆರ್.ಕೆ. ಭಡಂಕರ, ಎಮ್.ಎಸ್. ಚಿಕ್ಕಮಠ, ಆರ್.ಎಸ್. ಗೋಮಪ್ಪನವರ ಕಾರ್ಯಾಚರಣೆಯಲ್ಲಿದ್ದರು.
