Posts Slider

Karnataka Voice

Latest Kannada News

ಧಾರವಾಡ: ಎಲ್ಲೂ ಸುದ್ದಿಯಾಗದ ‘ಈ’ ಸುದ್ದಿಯನ್ನ ನೀವೂ ನೋಡಲೇಬೇಕು…!!!

Spread the love

ಧಾರವಾಡ: ಎಂ.ಆರ್. ನಗರದ ಡಿಜಿಟಲ್ ಕ್ರಿಯೇಟರ್ ಸಪ್ನಾ ಬಡತನದ ವಿರುದ್ಧ ಹೋರಾಡುತ್ತಲೇ ಆತ್ಮಹತ್ಯೆಗೆ ಶರಣಾಗಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ.

​ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಸಪ್ನಾ, ಕಡು ಬಡತನದಲ್ಲೂ ತಾಯಿ ಮತ್ತು ಸಹೋದರನಿಗೆ ಆಸರೆಯಾಗಲು ಡಿಜಿಟಲ್ ಲೋಕವನ್ನು ಆರಿಸಿಕೊಂಡಿದ್ದಳು. ಮೊಬೈಲ್ ಮೂಲಕ ವಿಡಿಯೋಗಳನ್ನು ಮಾಡುತ್ತಾ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಗಲಿರುಳು ಶ್ರಮಿಸುತ್ತಿದ್ದಳು. ಸದಾ ಧೈರ್ಯದಿಂದ ಇರುತ್ತಿದ್ದ ಆಕೆ ಇದ್ದಕ್ಕಿದ್ದಂತೆ ಇಂತಹ ಭೀಕರ ನಿರ್ಧಾರಕ್ಕೆ ಶರಣಾಗಿರುವುದು ಇಡೀ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.

​”ನನ್ನ ತಂಗಿಯ ಸಾವಿಗೆ ನ್ಯಾಯ ಸಿಗಬೇಕು” ಎಂದು ಸಹೋದರ ಆಕ್ರೋಶ ಹೊರಹಾಕುತ್ತಿದ್ದಾನೆ. ಕನಸುಗಳನ್ನೆಲ್ಲ ಕಣ್ಣಲ್ಲೇ ಇಟ್ಟುಕೊಂಡು ಅರ್ಧಕ್ಕೇ ಕಮರಿಹೋದ ಸಪ್ನಾಳ ಆತ್ಮಕ್ಕೆ ಶಾಂತಿ ಸಿಗಲಿ, ಆ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಸಿಗಲಿ.


Spread the love

Leave a Reply

Your email address will not be published. Required fields are marked *