Karnataka Voice

Latest Kannada News

ಕಚ್ಚಿದ ಹಾವನ್ನ ಕೊಚ್ಚಿ ಅದರೊಂದಿಗೆ ಆಸ್ಪತ್ರೆಗೆ ಬಂದ ಕೋಟೂರಿನ ಯುವಕ…!

ಧಾರವಾಡ: ತಾಲೂಕಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಗ್ಯಾಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಯುವಕನಿಗೆ ಹಾವು ಕಚ್ಚಿದ ಪರಿಣಾಮ, ಹಾವನ್ನ ಹೊಡೆದು ಕೊಂದು, ಹಾವಿನ ಜೊತೆಗೆ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

Imamsab Aminagad

ಧಾರವಾಡ ತಾಲೂಕಿನ ಕೋಟೂರ ಗ್ರಾಮದ ಇಮಾಮಸಾಬ ಅಮೀನಗಡ ಎಂಬ ವ್ಯಕ್ತಿಯೇ ಹಾವನ್ನ ಕೊಚ್ಚಿ ಚೀಲದೊಂದಿಗೆ ಹಾಕಿಕೊಂಡು ಬಂದು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಎಂದಿನಂತೆ ಬೇಲೂರಿನಲ್ಲಿರುವ ಪ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆಯಲ್ಲಿ ಹಾವೊಂದು ಇಮಾಮಸಾಬನಿಗೆ ಕಚ್ಚಿದೆ. ತಕ್ಷಣವೇ, ತಾನೂ ಕೂಡಿಕೊಂಡು ಜೊತೆಗಿದ್ದವರು ಹಾವನ್ನ ಹೊಡೆದು, ಹಾಳೆಯಲ್ಲಿ ಹಾಕಿಕೊಂಡು ಬಂದಿದ್ದಾನೆ.

ಜಿಲ್ಲಾಸ್ಪತ್ರೆಯಲ್ಲಿ ಇಮಾಮಸಾಬನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ. ಘಟನೆಗೆ ಸಂಬಂಧಿಸಿದಂತೆ ಉಪನಗರ ಠಾಣೆ ಪೊಲೀಸರು ಮಾಹಿತಿಯನ್ನ ಸಂಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *