Karnataka Voice

Latest Kannada News

ಚೇತನ ಹಿರೇಕೆರೂರ, ಶಿವು ಹಿರೇಕೆರೂರ ಪೊಲೀಸ್ ವಶಕ್ಕೆ: ಶಿವು “ಪತ್ನಿ ಆರೋಗ್ಯ” ವಿಷಮ…

ಹುಬ್ಬಳ್ಳಿ: ತಮ್ಮ ಮಗಳನ್ನ ಅಪಹರಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಣ್ಮರೆಯಾಗಿದ್ದ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವು ಹಿರೇಕೆರೂರ, ಹಾಲಿ ಸದಸ್ಯ ಚೇತನ ಹಿರೇಕೆರೂರ, ಶಿವು ಹಿರೇಕೆರೂರ ಪತ್ನಿ ಜಯಲಕ್ಷ್ಮೀ ಅವರನ್ನ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವು ಹಿರೇಕೆರೂರ ಅವರು ಮಗಳು ನಿಖಿಲ್ ದಾಂಡೇಲಿ ಎಂಬುವವರನ್ನ ಪ್ರೇಮಿಸಿ ಮದುವೆಯಾಗಿದ್ದರು. ಅದಾದ ಕೆಲವು ದಿನಗಳ ನಂತರ ಹುಬ್ಬಳ್ಳಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದ ಸಮಯದಲ್ಲಿ ತನ್ನ ಪತ್ನಿಯನ್ನ ಅಪಹರಣ ಮಾಡಿದ್ದಾರೆಂದು ನಿಖಿಲ್ ದೂರು ನೀಡಿದ್ದರು.

ಘಟನೆಯ ನಂತರ ಆಕೆಯನ್ನ ಗೋವಾದಿಂದ ತಂದೆ-ತಾಯಿಗಳ ಜೊತೆಗೆ ಕರೆದುಕೊಂಡು ಬರಲಾಗಿತ್ತು. ನಂತರ ಶಿವು ಹಿರೇಕೆರೂರ ಮಗಳು, ತನ್ನ ತಂದೆ-ತಾಯಿ ಅಪಹರಣ ಮಾಡಿಲ್ಲವೆಂದು ಹೇಳಿಕೆ ನೀಡಿದ್ದರು. ಆದರೆ, ಇದಕ್ಕೆ ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ಕಾರಣ ಎಂದು ಹೇಳಿಕೆ ನೀಡಿದ್ದರು. ಇದರಿಂದ ಮತ್ತೆ ಗೊಂದಲ ಸೃಷ್ಟಿಯಾಗಿತ್ತು.

ಪೊಲೀಸ್ ವಶಕ್ಕೆ ಪಡೆದ ಸಮಯದಲ್ಲಿ ಶಿವು ಹಿರೇಕೆರೂರ ಪತ್ನಿ ಜಯಲಕ್ಷ್ಮೀ ಪೊಲೀಸ್ ಸುಪರ್ಧಿಯಲ್ಲಿ ಇದ್ದಾಗಲೇ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದು, ಅವರನ್ನ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *