Karnataka Voice

Latest Kannada News

ಕರ್ನಾಟಕ ರತ್ನನ ನೆನೆದು ಕಣ್ಣೀರಾದ ಶಿವರಾಜಕುಮಾರ… ಪುನೀತನ ಸ್ಮರಣೆಯಲ್ಲಿ ಅಣ್ಣ ಹೇಳಿದ್ದೇನು..

ಮೈಸೂರು: ಕರ್ನಾಟಕ ರತ್ನ ಪುನೀತ ರಾಜಕುಮಾರ ಅವರ ಚಿತ್ರವನ್ನ ವೀಕ್ಷಿಸಿದ ನಂತರ ಶಿವರಾಜಕುಮಾರ ಸಾಕಷ್ಟು ಭಾವುಕರಾಗಿ ಗಳಗಳನೇ ಅತ್ತ ಘಟನೆ ಮೈಸೂರಿನಲ್ಲಿಂದು ನಡೆಯಿತು.

ಪೂರ್ಣ ವೀಡಿಯೋ ನೋಡಿ.. ಅಣ್ಣ-ತಮ್ಮನ ಪ್ರೀತಿ ಎಂತಹದೆಂದು ಗೊತ್ತಾಗತ್ತೆ..

ಈ ಸಮಯದಲ್ಲಿ ಮಾತನಾಡಿದ ಶಿವಣ್ಣ, ಏನ್ ಹೇಳಬೇಕಂತ ನನಗೆ ಗೊತ್ತಾಗುತ್ತಿಲ್ಲ‌. ಪ್ರತಿ ಸಿನಿಮಾ ರಿಲೀಸ್ ಆದಾಗ ಮಾರ್ನಿಂಗ್ ಕಾಲ್ ಮಾಡಿ ಕೇಳ್ತಿದ್ದ ಹೇಗಿದೆ ಫಿಲಂ ಅಂತ. ಪ್ರತಿ‌ ಸಿನಿಮಾವನ್ನ ತುಂಬಾ ಎಂಜಾಯ್ ಮಾಡ್ತಿದ್ವಿ. ಸಿನಿಮಾದಲ್ಲಿ‌ ನಟಿಸಿದಂತೆ ಜೀವನದಲ್ಲಿ ಬದುಕಬೇಕು ಅಂತ ಹೇಳ್ತಿದ್ದೆ ಎಂದರು.

ಚಿಕ್ಕವಯಸ್ಸಿನಲ್ಲೇ ಎಲ್ಲರನ್ನ ಮೀರಿ ಬೆಳೆದ. ಸಿನೇಮಾಗೆ ಬಂದ ಮೇಲೆ ಇನ್ನೂ ದೊಡ್ಡವನಾದ. ನಿರ್ದೇಶಕ ಚೇತನ್ ತಂಡ ಉತ್ತಮ‌ ಕೆಲಸ ಮಾಡಿದೆ. ಕ್ಯಾಮೆರಾ, ಕೊರಿಯೋಗ್ರಫಿ, ಟೆಕ್ನಿಕಲ್ ಟೀಂ ಚೆನ್ನಾಗಿ ಕೆಲಸ ಮಾಡಿದೆ. ಒಬ್ಬ ಅಭಿಮಾನಿಯಾಗಿ ಸಿನಿಮಾ ನೋಡ್ತಾ ಎಂಜಾಯ್ ಮಾಡ್ತಿದ್ದೆ. ಕೆಲ ಸೀನ್ ನೋಡಿ ಕಣ್ಣೀರು ಬರುತ್ತಿತ್ತು. ಇನ್ಮುಂದೆ ಅಪ್ಪಾಜಿ, ಅಮ್ಮ, ಪುನೀತ್ ಹೆಸರು ಉಳಿಸಿಕೊಂಡು ಹೋಗೊ ಶಕ್ತಿ ಕೊಡಲಿ ದೇವರು ನಮಗೆ. ಚಿತ್ರ ಯಶಸ್ವಿಯಾಗ್ತಿದೆ, ಇಡೀ ಇಂಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪುನೀತ್ ಏನೇ ಯೋಚಿಸಿದರೂ ದೊಡ್ಡಮಟ್ಟದಲ್ಲಿ ಯೋಚಿಸುತ್ತಿದ್ದ ಎಂದು ಹೇಳಿದರು.

Leave a Reply

Your email address will not be published. Required fields are marked *