Karnataka Voice

Latest Kannada News

ಶಿವಳ್ಳಿ ಬಳಿ “ಹಿಟ್ ಆ್ಯಂಡ್ ರನ್” ಮೊರಬದ ಬ್ಯಾಂಕ್ ಕ್ಯಾಷೀಯರ್ ದುರ್ಮರಣ…

ಧಾರವಾಡ: ಬ್ಯಾಂಕಿನ ಕೆಲಸ ಮುಗಿಸಿಕೊಂಡು ಹುಬ್ಬಳ್ಳಿಗೆ ಬೈಕಿನಲ್ಲಿ ಹೊರಟಿದ್ದ ಕ್ಯಾಷಿಯರ್‌ಗೆ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಸ್ಥಳದಲ್ಲಿ ಸವಾರ ಸಾವಿಗೀಡಾಗಿರುವ ಘಟನೆ ಶಿವಳ್ಳಿ ಗ್ರಾಮದ ಬಳಿಯಲ್ಲಿ ಸಂಭವಿಸಿದೆ.

ಮೊರಬದ ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ ಉದ್ಯೋಗಿಯಾಗಿದ್ದ ಬಸವರಾಜ ಹೂಲಿ ಎಂಬುವವರೇ ಸ್ಥಳದಲ್ಲಿ ಸಾವಿಗೀಡಾದ ದುರ್ಧೈವಿಯಾಗಿದ್ದಾರೆ. ಮೂಲತಃ ಮೊರಬದ ಇವರು ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಾರಿಯಾಗಿರುವ ಕಾರಿನ ನಂಬರ ಪತ್ತೆ ಹಚ್ಚಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

Leave a Reply

Your email address will not be published. Required fields are marked *