Karnataka Voice

Latest Kannada News

ಸವದತ್ತಿಯ ಆನಂದ ಛೋಪ್ರಾ ನಿಧನ- ಬೆಳ್ಳಂಬೆಳಿಗ್ಗೆ ಸವದತ್ತಿಗೆ ಆಘಾತ

ಬೆಳಗಾವಿ: ಸಮಾಜ ಸೇವಕ ಹಾಗೂ ರಾಜಕಾರಣಿ ಆನಂದ ಛೋಪ್ರಾ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಸವದತ್ತಿ ಕ್ಷೇತ್ರದಲ್ಲಿ ಜನಪ್ರಿಯತೆ ಹೊಂದಿದ್ದ ಆನಂದ ಛೋಪ್ರಾ ಸಾವು, ಕ್ಷೇತ್ರದ ಜನರಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಛೋಪ್ರಾರ ಮೇಲೆ ಹಲ್ಲೆ ನಡೆದಿದ್ದನ್ನ ಸ್ಮರಿಸಬಹುದು.

ಸವದತ್ತಿಯ ಸಮಾಜ ಸೇವಕರು ಹಾಗೂ ರಾಜಕಾರಣಿ ಆಗಿದ್ದ ಆನಂದ ಛೋಪ್ರಾ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರೆಂದು ಪ್ರಾಥಮಿಕ ವರದಿಗಳು ತಿಳಿಸಿವೆ. ವೃದ್ಧ ತಾಯಿ, ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಮತ್ತು ಅಪಾರ ಬಂಧು ಬಳಗವನ್ನು ಅವರು ತಮ್ಮ ಹಿಂದೆ ಬಿಟ್ಟು ಅಗಲಿದ್ದಾರೆ.
ಹಲವು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅವರು ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋಲನ್ನು ಅನುಭವಿಸಿದ್ದರು.

Leave a Reply

Your email address will not be published. Required fields are marked *