Posts Slider

Karnataka Voice

Latest Kannada News

ಸಂಡೂರ ಧಣಿ-ಪಕ್ಕಾ ಲೋಕಲ್: ನೆಲಕ್ಕೆ ಕೂತ ಜನನಾಯಕ

1 min read
Spread the love

ಉತ್ತರಕನ್ನಡ: ಜಿಲ್ಲೆಯ ಯಲ್ಲಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇಂದು ಮಿಂಚಿನ ಸಂಚಾರ ನಡೆಸಿದ್ದು, ಕಲಘಟಗಿ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಕಾಂಗ್ರೆಸ್ ಪಕ್ಷದ ಪ್ರಮುಖ ಸಂತೋಷ ಲಾಡ.

ಹೌದು.. ಇಂದು ಮಾಜಿ ಸಚಿವ ಸಂತೋಷ ಲಾಡ, ಯಲ್ಲಾಪುರ ತಾಲೂಕಿನ ಜಿಗಳ್ಳಿ, ಮಂಗಸುಳಿ, ಕಾತೂರ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿದ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಶಿವಾಜಿ ಮಹಾರಾಜರ ಪ್ರತಿಮೆಯನ್ನ ಅನಾವರಣಗೊಳಿಸಿದರು.

ತಾವೂ ಎಷ್ಟೊಂದು ಸಾಮಾನ್ಯರಲ್ಲಿ ಸಾಮಾನ್ಯ ಎಂಬುದನ್ನ ತಮ್ಮ ನಡವಳಿಕೆಯಿಂದಲೇ ತೋರಿಸಿಕೊಟ್ಟ ಸಂತೋಷ ಲಾಡ, ಜನರೊಂದಿಗೆ ನೆಲದ ಮೇಲೆ ಕುಳಿತು ಅವರೊಂದಿಗೆ ಬೆರೆತರು. ನಮ್ಮಲ್ಲಿ ಮೇಲು ಕೀಳು ಎಂಬ ಭಾವನೆ ಬರಬಾರದೆಂಬ ಸಂದೇಶವನ್ನ ಈ ಮೂಲಕ ತೋರಿಸಿಕೊಟ್ಟಿದ್ದು ಸಂತೋಷ ಲಾಡ.

ತಾಲೂಕಿನ ಪ್ರತಿ ಗ್ರಾಮಗಳಲ್ಲಿಯೂ ಅಭೂತಪೂರ್ವವಾಗಿ ಬರಮಾಡಿಕೊಂಡರು. ಮಹಿಳೆಯರು ಆರತಿ ಬೆಳಗಿದರೇ, ಪುರುಷರು ವಿವಿಧ ರೀತಿಯ ವಾಧ್ಯಗಳೊಂದಿಗೆ ಸ್ವಾಗತ ಕೋರಿದರು. ಜನರ ಪ್ರೀತಿಯನ್ನ ಬೆಳೆಸಿಕೊಳ್ಳುವುದು ಹೇಗೆ ಎಂದು ತೋರಿಸುವಂತ ದೃಶ್ಯಗಳು ಕಂಡು ಬಂದವು.

ಹಲವು ಗ್ರಾಮಗಳಲ್ಲಿ ಮಾತನಾಡಿದ ಸಂತೋಷ ಲಾಡ, ಮಾನವೀಯತೆ ಮುಖ್ಯ. ನಾವೂ ಎಲ್ಲರೂ ಒಂದೇ ಭಾವನೆಯಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು. ಕೆಎಸ್ಸಾರ್ಟಿಸಿ ಮಾಜಿ ನಿರ್ದೇಶಕ ಆನಂದ ಕಲಾಲ, ಎಚ್.ಎಂ.ನಾಯಕ, ಬ್ಲಾಕ್ ಕಾಂಗ್ರೆಸ್ ನ ಕೃಷ್ಣಾ ಹಿರೇಹಳ್ಳಿ, ಅಲಿ ಗೊರವನಕೊಳ್ಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *