Posts Slider

Karnataka Voice

Latest Kannada News

ಪತ್ರಕರ್ತನ  ಪತ್ನಿಯೀಗ ಪಂಚಾಯತಿ ಮೆಂಬರ್

1 min read
Spread the love

ಧಾರವಾಡ: ಹಿರಿಯ ಪತ್ರಕರ್ತ ಮಂಜುನಾಥ ಅಂಗಡಿ ಅವರ ಪತ್ನಿ ಧಾರವಾಡ ತಾಲೂಕಿನ ನರೇಂದ್ರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ, ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಬಿಎ ಪದವೀಧರೆಯಾಗಿರುವ ಲಕ್ಷ್ಮೀ ಮಂಜುನಾಥ ಅಂಗಡಿಯವರೇ ಗೆಲವು ಸಾಧಿಸಿದ್ದು, ದಾಸನಕೊಪ್ಪ ಪೂರ್ಣ ಗ್ರಾಮ ಮತ್ತು ನರೇಂದ್ರ ಗ್ರಾಮದ ಕೆಲ ಭಾಗ ಒಳಗೊಂಡಿರುವ 6 ವಾರ್ಡ್ ಗೆ ಸಾಮಾನ್ಯ ಮಹಿಳೆ ಮೀಸಲಾತಿ ಅಡಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ವಿಶೇಷ ಎಂದರೆ ಲಕ್ಷ್ಮೀ ಅವರ ಗಂಡನ ಮನೆ ದಾಸನಕೊಪ್ಪ ಮತ್ತು ತವರು ಮನೆಯಾದ ನರೇಂದ್ರ ಗ್ರಾಮಸ್ಥರು ತಮ್ಮ ಮತ ಚಲಾಯಿಸಿ ಗೆಲ್ಲಿಸಿದ್ದಾರೆ. ಮತ ಎಣಿಕೆ ಕೊನೆಯುವರೆಗೆ ಕ್ಷಣದವರೆಗೆ ಅತ್ಯಂತ ರೋಚಕವಾಗಿತ್ತು.

ಅಂತಿಮವಾಗಿ ಲಕ್ಷ್ಮೀ ಅಂಗಡಿ 246 ಮತ ಪಡೆದರೆ ಎದುರಾಳಿ ಈರವ್ವ 241 ಪಡೆದರು. ಈ ಮೂಲಕ ಲಕ್ಷ್ಮೀ ಅಂಗಡಿ 5 ಮತಗಳ ಅಂತರದಿಂದ ರೋಚಕ ಜಯ ಸಾಧಿಸಿದರು. ಶೌಚಾಲಯ, ಆಸರೆ ಮನೆ, ಬೀದಿದೀಪ ನಿರ್ವಹಣೆ, ಕುಡಿಯುವ ನೀರು, ಚರಂಡಿ, ರಸ್ತೆ ಸೇರಿದಂತೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದು ತಮ್ಮ ಗುರಿ ಎನ್ನುತ್ತಾರೆ ಲಕ್ಷ್ಮೀ.


Spread the love

Leave a Reply

Your email address will not be published. Required fields are marked *