Karnataka Voice

Latest Kannada News

ಹುಟ್ಟೂರಲ್ಲಿ ಡಿಕೆ ಶಿವಕುಮಾರ್ ಪುಲ್ ರಿಲಾಕ್ಸ್ ಮೂಡ್ ನಲ್ಲಿ

ರಾಮನಗರ: ರಾಜಕೀಯ ಜಂಜಾಟದ ಮಧ್ಯೆ ಜಸ್ಟ್ ರಿಲ್ಯಾಕ್ಸ್. ಪತ್ನಿ, ಮಕ್ಕಳ ಜೊತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿಶ್ರಾಂತಿ. ಕೆಲ ಕಾಲ ಕಾವೇರಿಯಲ್ಲಿ ಮಿಂದೆದ್ದ ಡಿಕೆ ಶಿವಕುಮಾರ್. ಕನಕಪುರದ ಸ್ವಗ್ರಾಮ ದೊಡ್ಡಹಾಲಹಳ್ಳಿಯಲ್ಲಿ ವಿಶ್ರಾಂತಿ. ದೊಡ್ಡಹಾಲಹಳ್ಳಿಯಲ್ಲಿ ಮನೆ ದೇವರಿಗೆ ಪೂಜೆ. ನಿನ್ನೆ ಕನಕಪುರದಲ್ಲಿ ಮೀಟಿಂಗ್ ನಡೆಸಿದ್ದ ಡಿಕೆಶಿ. ಕೊರೋನಾ ಬಗ್ಗೆ ಜನಪ್ರತಿನಿಧಿ, ಅಧಿಕಾರಿಗಳ ಸಭೆ ನಡೆಸಿದ್ದ ನಂತರ ಗ್ರಹಣ ಮುಕ್ತಾಯದ ನಂತರ ಕಾವೇರಿಯಲ್ಲಿ ಸ್ವಿಮ್ಮಿಂಗ್ ಮಾಡಿದರು.

ಪೇಸ್ ಬುಕ್ ಲ್ಲಿ ಬರೆದುಕೊಂಡಿದ್ದು ಹೀಗೆ

40 ವರ್ಷಗಳ ನಂತರ ಭಾನುವಾರ ಸಂಜೆ 4:30ಕ್ಕೆ ನಮ್ಮ ಹಳ್ಳಿಯ ಬಳಿ ಕಾವೇರಿ ನದಿಯಲ್ಲಿ ಈಜಾಡಿ ನಾನು ಕೆಲ‌ ಸಮಯ ಕಳೆದದ್ದು ನಿಜಕ್ಕೂ ಸಂತಸ ನೀಡಿದೆ. ನನ್ನ ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ನಾನು ಮತ್ತು ನನ್ನ ತಂದೆಯೊಂದಿಗೆ ಇದೇ ಸ್ಥಳದಲ್ಲಿ ಮೀನು ಹಿಡಿಯುತ್ತಿದ್ದ ಮತ್ತು ನದಿಯಲ್ಲಿ ಈಜಾಡುತ್ತಿದ್ದ ಕ್ಷಣಗಳು ಮತ್ತೊಮ್ಮೆ ಕಣ್ಣ ಮುಂದೆ ಹಾದುಹೋದವು.

‪ಸೂರ್ಯ ಗ್ರಹಣ ಮುಗಿದ ನಂತರ, ನನ್ನ ಕುಟುಂಬದೊಂದಿಗೆ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದೆ.

Leave a Reply

Your email address will not be published. Required fields are marked *