Karnataka Voice

Latest Kannada News

ಗಂಡ ಸತ್ತ ಅಕ್ಕ, 3ಮಕ್ಕಳ ‘ತಂದೆ’ ಸೇರಿ ನೂಲ್ವಿಯಲ್ಲಿ “ಗೆಳೆಯ-ತಮ್ಮ” ನ ಹತ್ಯೆ ಮಾಡಿದ್ದ ದೂರ್ತರು…

ಹುಬ್ಬಳ್ಳಿ: ತನ್ನ ಗೆಳೆಯನ ಅಕ್ಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದವನೇ ಆಕೆಯೊಂದಿಗೆ ಸೇರಿಕೊಂಡು ಬರ್ಭರವಾಗಿ ನೂಲ್ವಿ ಬಳಿ ಹತ್ಯೆ ಮಾಡಿದ್ದ ಆರೋಪಿಗಳನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

https://youtu.be/eqDlgL6UZf0

ನೂಲ್ವಿಯ ಶಂಭುಲಿಂಗ ಕಮ್ಮಡೊಳ್ಳಿ ಎಂಬಾತನನ್ನ ಈತನ ಗೆಳೆಯ ಮೂರು ಮಕ್ಕಳ ತಂದೆ ಚೆನ್ನಪ್ಪ ಮರೆಪ್ಪಗೌಡರ ಹಾಗೂ ಶಂಭುಲಿಂಗನ ಅಕ್ಕ ಬಸವ್ವ ನರಸಣ್ಣವರ ಕೂಡಿಕೊಂಡು ಕೊಲೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದ್ದು, ಇಬ್ಬರು ಆರೋಪಿಗಳನ್ನೂ ಪೊಲೀಸರು ಬಂಧನ ಮಾಡಿದ್ದಾರೆ.

ದಿನ ಬೆಳಗಾದರೇ, ಗೆಳೆಯ ಜೊತೆ ಹರಟೆ ಹೊಡೆದು ಹೋಗುತ್ತಿದ್ದ ಚೆನ್ನಪ್ಪ, ಬಸವ್ವನಿಂದ ರಾಖಿಯನ್ನೂ ಕಟ್ಟಿಸಿಕೊಂಡಿದ್ದ. ಆದರೆ, ಎಂದೂ ಅಕ್ಕನೆಂದುಕೊಂಡ ವಿಧವೆಯ ಜೊತೆ ಸಂಬಂಧ ಇಟ್ಟುಕೊಂಡಿದ್ದು ಬಹಿರಂಗ ಆಗದಂತೆ ನೋಡಿಕೊಂಡಿದ್ದ.

ಶಂಭುಲಿಂಗನನ್ನ ಕೊಲೆ ಮಾಡಿದ ನಂತರ ಬಟ್ಟೆಯನ್ನ ಬದಲಾಯಿಸಿ, ರಾಯಾಪುರದ ಬಳಿ ಕೆಲಸಕ್ಕೆ ಹೋಗಿದ್ದ ಚೆನ್ನಪ್ಪನನ್ನ ಚಾಣಾಕ್ಷತನದಿಂದ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *