Karnataka Voice

Latest Kannada News

ನುಗ್ಲಿ ಚಂದ್ರಶೇಖರ ಅವಿರೋಧ ಆಯ್ಕೆ: ಷಡಕ್ಷರಿ ಟೀಂಗೆ ಮೊದಲ ಮುಖಭಂಗ

ಬಾಗಲಕೋಟೆ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ನುಗ್ಲಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ, ಶಿಕ್ಷಕರ ಸಂಘದಲ್ಲಿ ಮೊದಲ ಗೆಲುವನ್ನ ಬಸವರಾಜ ಗುರಿಕಾರ ಬಣ ಪಡೆದಂತಾಗಿದೆ.

ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿಯವರು ಶಿಕ್ಷಕರ ಸಂಘದಲ್ಲೂ ತಮ್ಮ ತಂಡವನ್ನ ಗೆಲ್ಲಿಸುವ ಪ್ರಯತ್ನಕ್ಕೆ ಇಳಿದ ಬೆನ್ನಲ್ಲೇ ಇಂದು ಬಸವರಾಜ ಗುರಿಕಾರ ಬಣದ ನುಗ್ಲಿ ಚಂದ್ರಶೇಖರ ಅವಿರೋಧವಾಗಿ ಆಯ್ಕೆಯಾಗಿರುವುದು, ಎದುರಾಳಿ ತಂಡಕ್ಕೆ ಮುಖಭಂಗವಾದಂತಾಗಿದೆ.

ಬಾಗಲಕೋಟೆ ಜಿಲ್ಲೆಯ ನಿಡಗುಂದಿ ತಾಲೂಕಿನ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯನ್ನ ಸಾಂಘಿಕ ಶಕ್ತಿಯ ಮೂಲಕ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ, ನಾಮಪತ್ರ ಹಿಂದೆ ಪಡೆಯುವ ದಿನವೇ ಎದುರಾಳಿ ತಂಡಕ್ಕೆ ಶಾಕ್ ನೀಡಲಾಗಿದೆ.

ಶಿಕ್ಷಕ  ಸಂಘದವರನ್ನ ೊಡೆಯಲು  ಸಾಧ್ಯವಿಲ್ಲವೆಂಬ ಸಂದೇಶವನ್ನ ಈ ಮೂಲಕ  ನೀಡಲಾಗಿದ್ದು, ಬಸವರಾಜ ಗುರಿಕಾರರ ತಂಡ, ತನ್ನದೇ ಛಾಪು ಮೂಡಿಸುವಲ್ಲಿ ಯಶಸ್ವಿಯಾಗುತ್ತಿದೆ. ಈ ಬಗ್ಗೆ ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಸಜ್ಜನ ಪ್ರತಿಕ್ರಿಯೆ ನೀಡಿದ್ದು, ಕೊರೋನಾ ಸಮಯದಲ್ಲಿ ಶಿಕ್ಷಕರು ಉತ್ತಮ ನಿರ್ಧಾರವನ್ನ ತೆಗೆದುಕೊಳ್ಳುತ್ತಿದ್ದಾರೆ. ಯಾರನ್ನೇ ಆಗಲಿ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ, ಸಮಯ, ಹಣವನ್ನ ಉಳಿಸಬಹುದೆಂದು ಹೇಳಿದ್ದಾರೆ.

Leave a Reply

Your email address will not be published. Required fields are marked *