Karnataka Voice

Latest Kannada News

ನವಲಗುಂದಲ್ಲಿ “ಗಾನಕೋಗಿಲೆ-ಸಾಮಾಜಿಕ ಸಂತ”ನಿಗೆ ದೀಪನಮನ…

ನವಲಗುಂದ: ಅಗಲಿದ ಮಹಾನ ಚೇತನಗಳಾದ ಇಬ್ರಾಹಿಂ ಸುತಾರ್ ಮತ್ತು ಸಂಗೀತಲೋಕದ ದೀದಿ ಲತಾ ಮಂಗೇಶ್ಕರ ಅವರಿಗೆ ನವಲಗುಂದ ಗಾಂಧಿ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಂದ ದೀಪನಮನ ಸಲ್ಲಿಸುವದರ ಮೂಲಕ  ಶ್ರದ್ದಾಂಜಲಿ ಅರ್ಪಿಸಲಾಯಿತು.

ರಾಯನಗೌಡ ಪಾಟೀಲ್ ದೀಪನಮನದಲ್ಲಿ ಭಾಗವಹಿಸಿ ಮಾತನಾಡಿದರು. ಲತಾ ಮಂಗೇಶ್ಕರ ಅವರ ಅಗಲಿಕೆಯಿಂದ ಸಾಂಸ್ಕೃತಿಕ ಲೋಕ ಬಡವಾಗಿದೆ. ಕೋಟಿ ಕೋಟಿ ಹೃದಯಗಳನ್ನು ಸಂಗೀತದ ಮೂಲಕ ಮಂತ್ರಮುಗ್ದಗೊಳಿಸಿದ್ದ ಗಾನಕೋಗಿಲೆ ನಮ್ಮೊಂದಿಗಿಲ್ಲದೆ ನಾವೆಲ್ಲ ಅನಾಥರಾಗಿದ್ದೆವೆ ಎಂದರು.

ಅಬ್ದುಲ್ ರಜಾಕ್ ನದಾಫ್ ಮಾತನಾಡಿ, ಗಾನ ಕೋಗಿಲೆ ಹಾಗೂ ಸಾಮಾಜಿಕ ಸಂತ ಸಾಮರಸ್ಯದ ಕೊಂಡಿಯಾಗಿ ಭಾವೈಕ್ಯದ ಮೇರುಪರ್ವತವಾಗಿದ್ದ ಇಬ್ರಾಹಿಂ ಸುತಾರ್  ಇಂದು ನಮ್ಮ ಜೊತೆಗೆ ಇಲ್ಲವಾಗಿರುವದು ತುಂಬಲಾರದ ನಷ್ಟವಾಗಿದೆ. ಕರುನಾಡ ಕಬೀರ ಮತ್ತು ಗಾನಕೋಗಿ ಮತ್ತೆ ಹುಟ್ಟಿ ಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಮಂಜುನಾಥ್ ಜಾಧವ, ಅಣ್ಣಪ್ಪ ಬಾಗಿ, ಖಾಜೇಸಾಬ್ ಹಂಚಿನಾಳ, ಶಂಕ್ರು ತೋಟದ, ಮೋದಿನ ಶಿರೂರ, ಸಕ್ರಪ್ಪ ಹಳ್ಳದ, ಈರಣ್ಣ  ಶಿಡಗಂಟಿ, ಶಿವಾಜಿ ಕಲಾಲ್, ಅಲ್ಲಸಾಬ್ ಕಲಕುಟ್ರಿ, ಸುಲೇಮಾನ್ ನಾಶಿಪುಡಿ, ರಿಯಾಜ್ ನಾಶಿಪುಡಿ,ಸಿದ್ದು ಪೂಜಾರ್, ಮಂಜು ಜಾಲಗಾರ್, ಶಿದಲಿಂಗಪ್ಪ ಮದ್ನುರ, ಹಟೇಲಸಾಬ್ ರಾಮದುರ್ಗ, ವಿಠ್ಠಲ್ ಮಾಡೇಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *