Karnataka Voice

Latest Kannada News

“ಕಬೂಲ್ ಹೈ” ಅಂದವನಿಂದಲೇ ಕುಸುಗಲ್ಲನಲ್ಲಿ ಕೊಲೆ…!

ಹುಬ್ಬಳ್ಳಿ: ಲಾಕ್ ಡೌನ್ ಸಮಯದಲ್ಲಿ ಹೆಂಡತಿಯ ಮೇಲಿನ ಅನೈತಿಕ ಸಂಬಂಧದ ಸಂಶಯ ಹೆಚ್ಚಾಗಿ, ಪತಿರಾಯನೋರ್ವ ತನ್ನ ಪತ್ನಿಯ ತಲೆಗೆ ಕಲ್ಲು ಹಾಕಿ ಕೊಲೆ ಮಾಡಿರುವ ಘಟನೆ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ.
ಕುಸುಗಲ್ ಗ್ರಾಮದ ಕಿಲ್ಲಾ ಓಣಿಯ ನಿವಾಸಿ ಸೈಪ್ ಅಲಿ ಈಟಿ ಎಂಬಾತನೇ ತನ್ನ ಪತ್ನಿ ಮೇರುನ್ನಿಸಾಳ ಮೇಲೆ ಕಲ್ಲು ಹಾಕಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯು ಚಿಕಿತ್ಸೆ ಫಲಿಸದೇ ಕಿಮ್ಸನಲ್ಲಿ ಸಾವಿಗೀಡಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸೈಪ್ ಅಲಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *