Posts Slider

Karnataka Voice

Latest Kannada News

ಹಾವೇರಿ- ತೇಗದ ಗಿಡಗಳಿಗಾಗಿ ಚಿಕ್ಕಪ್ಪನ ಕೊಲೆ

1 min read
Spread the love

ಹಾವೇರಿ: ಮನೆಯ ಆವರಣದಲ್ಲಿರುವ ಗಿಡಗಳ ಸಂಬಂಧವಾಗಿ ಆರಂಭವಾದ ಜಗಳದಲ್ಲಿ ತಮ್ಮ ತಂದೆಯಸಹೋದರನನ್ನೇ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೆರೂರ ಗ್ರಾಮದಲ್ಲಿ ನಡೆದಿದೆ.

ಕೊರೋನಾ ಅಟ್ಟಹಾಸ ಮೆರೆಯುವ ಮುನ್ನವೇ ಆಸ್ತಿಗಾಗಿ ದಾಯಾದಿಗಳ ನಡುವೆ ಗಲಾಟೆಗಳು ನಡೆದಿದ್ದವು. ಅದನ್ನೇ ನೆಪ ಮಾಡಿಕೊಂಡ ಬಸವರಾಜ ರಾಮಾಪುರ ಹಾಗೂ ಇತರರು ಸೇರಿ ಚಿಕ್ಕಪ್ಪ ವಿರುಪಾಕ್ಷಪ್ಪ ರಾಮಾಪೂರೆ ಎಂಬಾತನನ್ನ ಹರಿತವಾದ ಕಂದ್ಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ.

ಅಣ್ಣ-ತಮ್ಮಂದಿರು ಮನೆಯ ಆವರಣದಲ್ಲಿದ್ದ ಗಿಡಗಳನ್ನ ತೆಗೆಯಬೇಕಾ ಬೇಡವಾ ಎಂದು ವಾದ ಶುರು ಮಾಡಿಕೊಂಡಿದ್ದಾರೆ. ಇದನ್ನೇ ನೆಪ ಮಾಡಿಕೊಂಡ ಅಣ್ಣ ಮಕ್ಕಳು, ಚಿಕ್ಕಪ್ಪನ ಜೊತೆ ಜಗಳಕ್ಕೆ ಇಳಿದು, ಕೊನೆಗೆ ಹೊಡೆದು ಕೊಲೆ ಮಾಡಿದ್ದಾರೆ.

ಸಿಪಿಐ ಶಿವಶಂಕರ ಗಣಾಚಾರಿ ಹಾಗೂ ಪಿಎಸೈ ಆಂಜನೇಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಆಡೂರ ಠಾಣೆ ಪೊಲೀಸರು, ತನಿಖೆಯನ್ನ ಕೈಗೊಂಡಿದ್ದು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.


Spread the love

Leave a Reply

Your email address will not be published. Required fields are marked *