Karnataka Voice

Latest Kannada News

“ಕತ್ಲ್ ಲ್ಲಿ ಕತ್ತು” ಕೊಯ್ದಿದ್ದ ಮೊರಬದ ‘ಕಿರಾತಕ ಮಾವ’ನ ಬಂಧನ….!

ವಲಗುಂದ: ಮನೆಯ ಮುಂಭಾಗದಲ್ಲಿಯೇ ಮಲಗಿದ್ದ ಅಳಿಯನನ್ನ ಕತ್ತು ಕೊಯ್ದು ಹತ್ಯೆ ಮಾಡಿದ್ದ ಮಾವನನ್ನ ಬಂಧನ ಮಾಡುವಲ್ಲಿ ನವಲಗುಂದ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ರಮೇಶ ಯರಗಣ್ಣನವರ ಎಂಬಾತನನ್ನ ಆತನ ಮಾವನಾದ ಲಿಂಬಣ್ಣ ಮೂಗನೂರ ಕುತ್ತಿಗೆಯನ್ನ ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದ.

ಪ್ರಕರಣವನ್ನ ದಾಖಲು ಮಾಡಿಕೊಂಡಿದ್ದ ನವಲಗುಂದ ಠಾಣೆಯ ಇನ್ಸಪೆಕ್ಟರ್ ಚಂದ್ರಶೇಖರ ಮಠಪತಿ ಅವರು, ಆರೋಪಿಯನ್ನ 12 ಗಂಟೆಯಲ್ಲಿ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತಿ ದಿನವೂ ಅಳಿಯ ರಮೇಶ ಕಿರುಕುಳ ಕೊಡುತ್ತಿದ್ದ. ಅದೇ ಕಾರಣಕ್ಕೆ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಹೇಳಲಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ಮತ್ತಷ್ಟು ತನಿಖೆಯನ್ನ ನಡೆಸಿದ್ದಾರೆ.

Leave a Reply

Your email address will not be published. Required fields are marked *