Posts Slider

Karnataka Voice

Latest Kannada News

ತಮ್ಮದೇ ಸರಕಾರದ ವಿರುದ್ಧ ಬಂಡೇಳ್ತಾರಂತೆ ಶಾಸಕ ಸಿ.ಎಂ.ನಿಂಬಣ್ಣನವರ..!

1 min read
Spread the love

ಧಾರವಾಡ: ರಾಜ್ಯದಲ್ಲಿ ಮದ್ಯ ಮಾರಾಟವನ್ನ ನಿಷೇಧ ಮಾಡಬೇಕೆಂಬ ಕಲ್ಪನೆಯೂ ಇಲ್ಲದೇ ಸರಕಾರ ನಡೆಯುತ್ತಿರುವ ಸಮಯದಲ್ಲೇ, ತಮ್ಮ ಕ್ಷೇತ್ರದಲ್ಲಿ ಮದ್ಯ ಮಾರಾಟವನ್ನ ಬಂದ್ ಮಾಡುವ ಬಗ್ಗೆ ಚಿಂತನೆ ಮಾಡುವ ಮೂಲಕ ಶಾಸಕ ಸಿ.ಎಂ.ನಿಂಬಣ್ಣನವರ ತಮ್ಮದೇ ಸರಕಾರದ ವಿರುದ್ಧ ಬಂಡೇಳಲು ನಿರ್ಧರಿಸಿದ್ದಾರೆ.

ಶಾಸಕರ ಹೇಳಿಕೆ ಇಲ್ಲಿದೆ ನೋಡಿ..

ತಮ್ಮ ಕ್ಷೇತ್ರ ಹಿಂದುಳಿದ ತಾಲೂಕು. ಅಲ್ಲೇ ಯತ್ಥೇಚ್ಚವಾಗಿ ಸಾರಾಯಿ ಮಾರಾಟ ಆಗುತ್ತಿದೆ. ಇದನ್ನ ತಡೆಯುವ ಉದ್ದೇಶದಿಂದ ಹಲವು ಉಪಾಯಗಳನ್ನ ಮಾಡುತ್ತಿದ್ದೇನೆ ಎಂದು ಶಾಸಕ ಸಿ.ಎಂ.ನಿಂಬಣ್ಣನವರ ಹೇಳಿದ್ದು, ತಮ್ಮದೇ ಸರಕಾರವಿದೇಯಲ್ಲಾ ಎಂದು ಕೇಳಿದರೇ ಪ್ರಾಮಾಣಿಕ ಅಧಿಕಾರಿಗಳ ಕೊರತೆಯಿದೆ ಎನ್ನುತ್ತಿದ್ದಾರೆ.

ಕಲಘಟಗಿ ತಾಲೂಕನ್ನ ಸಾರಾಯಿ ಮುಕ್ತ ಮಾಡುವ ತಮ್ಮ ಯೋಚನೆಗೆ ಸಂಘ-ಸಂಸ್ಥೆಗಳು ಹಾಗೂ ಇನ್ನುಳಿದವರು ಸಹಕಾರ ಕೊಡಬೇಕೆಂದು ಕೇಳುತ್ತಿರುವ ಶಾಸಕರು, ತಮ್ಮದೇ ಕ್ಷೇತ್ರದಲ್ಲಿ ಕಳೆದ ಮೂರು ವರ್ಷದಿಂದ ನಡೆಯುತ್ತಿದ್ದ ಪ್ರಕರಣಗಳು ಯಾಕೆ ಗಮನಕ್ಕೆ ಬಂದಿಲ್ಲವೆಂದರೇ, ಅವರು ಸುಮ್ಮನಾಗುತ್ತಾರೆ.

ಬರೋಬ್ಬರಿ ಎರಡೂವರೆ ವರ್ಷ ಶಾಸಕರಾಗಿ ಅಧಿಕಾರ ನಡೆಸಿಕೊಂಡು ಬಂದ ನಂತರವಾದರೂ ಮದ್ಯ ಮಾರಾಟ ಮಾಡುವ ಮಾತುಗಳನ್ನ ಸಿ.ಎಂ.ನಿಂಬಣ್ಣನವರ ಮಾತನಾಡಿದ್ದಾರೆ. ಇದು ಬರೀ ಮಾತಾಗತ್ತೆ ಇಲ್ಲವೇ, ಕೃತಿಯಲ್ಲಿ ಏನಾದರೂ ಬದಲಾವಣೆ ಆಗತ್ತಾ ಎಂಬುದನ್ನ ಕಾದು ನೋಡಬೇಕಿದೆ.


Spread the love

Leave a Reply

Your email address will not be published. Required fields are marked *