Posts Slider

Karnataka Voice

Latest Kannada News

ಬೆಂಗಳೂರಿನ ಭಾಸ್ಕರ ಮನೆಹೋಳಿಗೆ ಹುಬ್ಬಳ್ಳಿಯಲ್ಲಿ

1 min read
Spread the love

ಹುಬ್ಬಳ್ಳಿ: ಬೆಂಗಳೂರಿನಲ್ಲಿ ಗಾಂಧಿಬಜಾರ್‍ನ ಡಿವಿಜಿ ರಸ್ತೆಗೆ ಹೋದವರು ಭಾಸ್ಕರ್ಸ್ ಅವರ ಮನೆಹೋಳಿಗೆ ರುಚಿ ನೋಡದೇ ಬರುವುದಿಲ್ಲ. ಹುಬ್ಬಳ್ಳಿಯಲ್ಲೂ ಇಂದು ಇದೇ ರುಚಿಯ ಹೋಳಿಗೆ ತಿನ್ನುವ ಅವಕಾಶ ಸಿಕ್ಕಿದೆ. ಶಿರೂರು ಪಾರ್ಕ್ ರಸ್ತೆಯಲ್ಲಿರುವ ಮನೆಹೋಳಿಗೆ ಮಳಿಗೆಗೆ ಇಂದು ಸಚಿವ ಜಗದೀಶ್ ಶೆಟ್ಟರ್ ಅವರು ಚಾಲನೆ ನೀಡಿದರು.

ಪೈನಾಪಲ್, ಕರ್ಜೂರ, ಕ್ಯಾರೆಟ್, ಬಾದಾಮಿ, ಕೋವಾ ಹೋಳಿಗೆಗಳನ್ನು ಮನೆಯಲ್ಲಿ ಯಾವಾಗಲೂ ಮಾಡಿ ತಿನ್ನೋಕೆ ಆಗಲ್ಲ. ಆದರೆ ಮನೆಯಲ್ಲೇ ಮಾಡುವ ಹದಕ್ಕೆ ತಯಾರಾದ ಈ ಹೋಳಿಗೆ ತಿಂದರೆ ಮತ್ತೆ ಮತ್ತೆ ರುಚಿ ನೋಡಬೇಕು ಅನ್ನಿಸೋದಂತೂ ಗ್ಯಾರೆಂಟಿ.

ಹಬ್ಬಗಳಲ್ಲಿ ನಾವು ಹೆಚ್ಚಾಗಿ ಬೇಳೆ ಹೋಳಿಗೆ, ಕಾಯಿ ಒಬ್ಬಟ್ಟು ಮಾಡೋದು ಹೆಚ್ಚು. ಸಾಂಪ್ರದಾಯಿಕ ಶೈಲಿಯಲ್ಲಿ ತಯಾರಾಗುವ ಬೇಳೆ ಹೋಳಿಗೆಗಳನ್ನೂ ಇಲ್ಲಿ, ಶುಚಿ, ರುಚಿಯಾಗಿ ತಯಾರಿಸಲಾಗುತ್ತದೆ.

ಇನ್ನು ಹುಬ್ಬಳ್ಳಿ ವಿಶೇಷ ಶೇಂಗಾ ಹೋಳಿಗೆಯನ್ನು ಮೆಲ್ಲದೇ ಬಿಡೋಕೆ ಆಗುತ್ತಾ…ಹೋಳಿಗೆ ಜೊತೆ ಕುರುಕಲು ತಿಂಡಿ ಕೂಡ ಸಿಗಲಿದೆ. ಮಾರುಕಟ್ಟೆಯಿಂದ ತಂದ ತಾಜಾ ಹಣ್ಣುಗಳು, ಶುಚಿಯಾದ ಬೆಲ್ಲ, ತುಪ್ಪ, ಸಕ್ಕರೆ ಇವುಗಳ ಮಿಶ್ರಣದಿಂದ ಹದವಾಗಿ ತಯಾರಾದ ಹೋಳಿಗೆಗಳೇ ಇಲ್ಲಿಯ ವಿಶೇಷ.

“ಮನೆ ಹೋಳಿಗೆ’ ಉದ್ಘಾಟಿಸಿ, ಹೋಳಿಗೆಯ ರುಚಿಯನ್ನೂ ನೋಡಿದ ಸಚಿವ ಜಗದೀಶ್ ಶೆಟ್ಟರ್ ಅವರು ಮಾತನಾಡಿ, “ಬೆಂಗಳೂರಿನಲ್ಲಿ ಇಷ್ಟು ರುಚಿಯಾದ ಹೋಳಿಗೆ ತಿಂದಿದ್ದೆ. ಈಗ ಹುಬ್ಬಳ್ಳಿಯಲ್ಲೂ ಮನೆ ಹೋಳಿಗೆ ಸಿಗಲಿದೆ ಎನ್ನುವುದೇ ಖುಷಿಯ ವಿಚಾರ. ಇಲ್ಲಿ ಬಂದಾಗಲೆಲ್ಲ ನಾನು ಹೋಳಿಗೆ ತಿಂದು ಹೋಗುತ್ತೇನೆ’ ಎಂದರು.

ಮನೆ ಹೋಳಿಗೆ ಮಾಲೀಕ ಭಾಸ್ಕರ್ ಮಾತನಾಡಿ, ಬೆಂಗಳೂರಿನಲ್ಲಿ ಹೋಳಿಗೆ ರುಚಿ ನೋಡಿದವರು ಹುಬ್ಬಳ್ಳಿಯಲ್ಲೂ ಅಂಗಡಿ ಶುರುಮಾಡಿ ಎಂದು ಹೇಳುತ್ತಿದ್ದರು. ಕೊರೋನಾ ಕಾಲದಲ್ಲಿ ಹೋಳಿಗೆ ಮಾರಾಟ ಕಷ್ಟ ಆಗುತ್ತಿತ್ತು. ಈಗ ಇಲ್ಲಿಯೂ ಜನರ ಬೇಡಿಕೆಗೆ ತಕ್ಕಂತೆ ಮನೆ ಹೋಳಿಗೆ ಆರಂಭಿಸಿದ್ದೇವೆ. ವ್ಯಾಪಾರ ಅಷ್ಟೇ ನಮ್ಮ ಉದ್ದೇಶ ಅಲ್ಲ. ಶುಚಿ, ರುಚಿಯಾದ ಹೋಳಿಗೆ ಕೊಡುವುದು ನಮ್ಮ ಮೊದಲ ಆದ್ಯತೆಯಾಗಿರುತ್ತದೆ’ ಎಂದರು. ಹೋಳಿಗೆಗೆ ಆರ್ಡರ್ ಮಾಡುವವರು ಈ ಸಂಖ್ಯೆಗೆ ಕರೆಮಾಡಿ:: 08364253999


Spread the love

Leave a Reply

Your email address will not be published. Required fields are marked *

You may have missed