Karnataka Voice

Latest Kannada News

‘ಪ್ಯಾರ್’ ಕೀಯಾ… ಶಾದಿ ಬೀ ಹೂವಾ.. ‘ಸಾಥ್’ ದಿನ್ ಮೇ ಬಾಗ್ ಕೇ ‘ಗಯಾ’… ಇದು ಏಳೇಳು ದಿನದ ಲವ್….!?

ತುಮಕೂರು: ಆಕೆಯನ್ನ ಬಿಟ್ಟು ಇರೋಕೆ ಆಗೋದೆಯಿಲ್ಲವೆಂದು ಎರಡು ಕುಟುಂಬದವರನ್ನ ವಿರೋಧಿಸಿ ಮದುವೆ ಮಾಡಿಕೊಂಡ ಲವರ್ ಬಾಯ್, ಏಳೇ ದಿನದಲ್ಲಿ ಗಾಯಬ್ ಆದ ಘಟನೆಯೊಂದು ಬೆಳಕಿಗೆ ಬಂದಿದೆ.

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಿಂಡಸ್ಕೆರೆ ಗ್ರಾಮದ ನಿಖಿಲ್ ಎಂಬಾತ ಚೈತ್ರಾ ಎಂಬ ಯುವತಿಯನ್ನ ಪ್ರೀತಿಸಿ ಮದುವೆಯಾಗಿದ್ದ. ಇದಕ್ಕೆ ಎರಡು ಮನೆಯವರು ವಿರೋಧವಿದ್ದರೂ, ಅದನ್ನ ಲೆಕ್ಕಸದೇ ಮದುವೆ ಮಾಡಿಕೊಂಡಿದ್ದರು.

file

ಫೆಬ್ರುವರಿ 4 ರಂದು ಮದುವೆಯಾಗಿದ್ದ ನಿಖಿಲ್ 10 ನೇ ತಾರೀಖಿಗೆ ತನ್ನ ತಾಯಿಯನ್ನ ನೋಡಿಕೊಂಡು ಬರುವುದಾಗಿ ಹೇಳಿ ಹೋದವನು ಮರಳಿ ಬಂದಿಲ್ಲವೆಂದು ಚೈತ್ರಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ಗಂಡನ ಮನೆಗೆ ಹೋದರೇ, ಮಾವನು ತನ್ನ ಮೇಲೆ ಪೊಲೀಸ್ ದೂರು ನೀಡುವುದಾಗಿ ಧಮಕಿ ಹಾಕುತ್ತಿದ್ದಾರೆಂದು ಚೈತ್ರಾ ಆರೋಪಿಸಿದ್ದಾಳೆ. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರ ನಡುವೆ ಪ್ರೀತಿ ಬೆಳೆದು, ಮದುವೆಯಾಗಿದ್ದರು.

Leave a Reply

Your email address will not be published. Required fields are marked *